ಗುಡಿಸಲಿಗೆ ಬೆಂಕಿ ತಗುಲಿ ಹಸುಳೆ ಸಜೀವ ದಹನ
Team Udayavani, Feb 11, 2017, 3:45 AM IST
ಹನೂರು: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಆಲಂಬಾಡಿ ಗಿರಿಜನರ ಹಾಡಿಯಲ್ಲಿ ಆನೆ ಓಡಿಸಲು ಹಾಕಿದ್ದ
ಬೆಂಕಿಯ ಕಿಡಿ ಗುಡಿಸಲಿಗೆ ತಗುಲಿ 9 ತಿಂಗಳ ಹಸುಳೆಯೊಂದು ಸಜೀವ ದಹನವಾಗಿದೆ.
ಆಲಂಬಾಡಿಯ ಸುರೇಶ್ ಮತ್ತು ಮುತ್ತುಲಕ್ಷ್ಮೀ ದಂಪತಿಯ ಮಗು ಮೃತಪಟ್ಟಿರುವ ದುರ್ದೈವಿ. ವರ್ಷದ ಹಿಂದೆ ಇವರಿಬ್ಬರಿಗೆ ವಿವಾಹವಾಗಿದ್ದು, ದಂಪತಿಗೆ 9 ತಿಂಗಳ ಮಗುವಿತ್ತು. ಗ್ರಾಮದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಜಮೀನು ನೀಡಲಾಗಿದ್ದು, ಇಲ್ಲಿಯೇ ಗುಡಿಸಲು ಕಟ್ಟಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಜಮೀನಿಗೆ ಆನೆಗಳು ಆಗಾಗ್ಗೆ ಲಗ್ಗೆ ಇಡುತ್ತಿದ್ದು, ಆನೆಗಳನ್ನು ಓಡಿಸಲು ನಿತ್ಯ ಬೆಂಕಿ ಹಾಕುತ್ತಿದ್ದರು.
ಎಂದಿನಂತೆ ಬುಧವಾರ ರಾತ್ರಿಯೂ ಬೆಂಕಿ ಹಾಕಿದ್ದರು. ಗುರುವಾರ ಬೆಳಗಿನವರೆಗೂ ಅದರ ಕಿಡಿಗಳು ಉಳಿದಿದ್ದವು. ಗುರುವಾರ
ಬೆಳಗ್ಗೆ ಗಾಳಿಗೆ ಬೆಂಕಿಯ ಕಿಡಿಗಳು ಹಾರಿ ಬಂದು ಗುಡಿಸಲಿಗೆ ಬೆಂಕಿ ತಗುಲಿತು. ಈ ವೇಳೆ, ಸುರೇಶ ಕೆಲಸ ನಿಮಿತ್ತ ಹೊರಗಡೆ
ತೆರಳಿದ್ದರು. ಮುತ್ತುಲಕ್ಷ್ಮೀ ನೀರು ತರಲು ನದಿ ಕಡೆಗೆ ತೆರಳಿದ್ದರು. ಹೀಗಾಗಿ ಗುಡಿಸಲಿಗೆ ಬೆಂಕಿ ಬಿದ್ದುದು ಯಾರಿಗೂ ತಿಳಿಯಲಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಗುಡಿಸಲು ಭಸ್ಮವಾಗಿದ್ದು, ಒಳಗಿದ್ದ ಮಗು ಜೀವಂತ ದಹನಗೊಂಡಿದೆ. ಗುಡಿಸಲೊಳಗಿದ್ದ ಧವಸ-ಧಾನ್ಯಗಳೂ
ಬೆಂಕಿಗಾಹುತಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್ ರದ್ದು: ಸಿಎಂ ಸಿದ್ದರಾಮಯ್ಯ
High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್
High Court: ಕೋರ್ಟ್ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ
Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್ ಸಿಂಹ
Thirupathi: ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.