![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 17, 2020, 3:03 AM IST
ಬೆಂಗಳೂರು: ಮೂರು ನದಿಗಳು ಬಂದು ಸೇರಿದ ಕೂಡಲಸಂಗಮದಂತೆ ನಾನಾ ದಿಕ್ಕುಗಳಿಂದ ಹರಿದು ಬಂದ ಶರಣರ ಮಹಾಸಂಗಮ ಅದು. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಶಿವನ ಧ್ಯಾನದಲ್ಲಿ ಕುಳಿತ ಭಕ್ತ ಸಮೂಹ, ಹಣೆ ಮೇಲೆ ವಿಭೂತಿ, ಕೈಯಲ್ಲಿ ಶಿವಲಿಂಗ, ಬಾಯಲ್ಲಿ ಮಂತ್ರಪಠಣ. ಈ ಮಧ್ಯೆ ಆಗಾಗ್ಗೆ ಅನುರಣಿಸುವ ವಚನಗಳ ಸಾಲು….
ಇದೆಲ್ಲವನ್ನೂ ಒಳಗೊಂಡ ಆ ಅಸಂಖ್ಯ ಪ್ರಮಥರ ಗಣಮೇಳ, ಅನುಭವ ಮಂಟಪಕ್ಕೆ ಅನ್ವರ್ಥ ದಂತಿತ್ತು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ನೈಸ್ ರಸ್ತೆಯ “ನಂದಿ’ ಮೈದಾನ. ತಮಿಳುನಾಡು, ಆಂಧ್ರಪ್ರದೇಶ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಶರಣರ ಸಾಗರವೇ ಮೇಳಕ್ಕೆ ಹರಿದು ಬಂದಿತ್ತು. ಬೆಳಿಗ್ಗೆಯೇ ರೈಲು, ಬಸ್ಗಳಲ್ಲಿ ಬಂದಿಳಿದ ಭಕ್ತರು ಸಹಜ ಶಿವಯೋಗಕ್ಕೆ ಅಣಿಯಾಗುತ್ತಿದ್ದರು. ಹೆಸರೇ ಸೂಚಿಸುವಂತೆ ಅದು “ಶಿವಯೋಗ ಸಂಭ್ರಮ’ವಾಗಿತ್ತು.
ಮೈದಾನದಲ್ಲಿ ಬೃಹತ್ ವೇದಿಕೆಗಳನ್ನು ಹಾಕಲಾಗಿತ್ತು. ಅದರ ಮುಂಭಾಗ ಅನುಭವಮಂಟಪವನ್ನು ಹೋಲುತ್ತಿತ್ತು. ಒಂದೆಡೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಮತ್ತೂಂದೆಡೆ ಮುರುಘಾ ಶರಣರ ಭಾವಚಿತ್ರಗಳನ್ನು ಹಾಕಲಾಗಿತ್ತು. ಅದು ಬಂದವರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸುತ್ತಿತ್ತು.
ಭಕ್ತರು, ಶರಣರು ಕೈಮುಗಿದು ಒಳಗೆ ಪ್ರವೇಶಿಸುತ್ತಿದ್ದರು. ಮಂಟಪದೊಳಗೆ ಇಡೀ ದಿನ ವಚನಗಳ ಗಾಯನ-ನೃತ್ಯ, ವಚನ ಚಳವಳಿಯ ಮೆಲುಕು, ಕಲ್ಯಾಣ ಕ್ರಾಂತಿಯ ಪ್ರಸ್ತುತತೆ, ಇದೆಲ್ಲವೂ ಮುಗಿದು ಹರಟುವಾಗಲೂ ಭಜನೆಯಲ್ಲಿ ಶರಣರ ಸಾಲುಗಳು ಅನುರಣಿಸುತ್ತಿದ್ದವು. ಒಟ್ಟಾರೆ 12ನೇ ಶತಮಾನದ ಗತವೈಭವವನ್ನು ಕಟ್ಟಿಕೊಡುವಂತಿತ್ತು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.