![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 26, 2019, 3:00 AM IST
ಶಿವಮೊಗ್ಗ/ದಾವಣಗೆರೆ/ಚಿಕ್ಕೋಡಿ: ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದಕ್ಕೆ ನೊಂದು ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ರಿಪ್ಪನ್ಪೇಟೆ ಸಮೀಪದ ಮೈಥಳ್ಳಿ ಮಳೂರು ಗ್ರಾಮದ ಶಂಕರಪ್ಪ ಈರ ಶೆಟ್ಟಿ (55) ಎಂಬುವರು ತಮ್ಮ ಹೊಲದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ತಮ್ಮ 1.10 ಎಕರೆ ಜಮೀನಿನಲ್ಲಿ ಅಡಿಕೆ ಗಿಡ ಬೆಳೆಸಿದ್ದರು. ಕೃಷಿ ಕಾರ್ಯಕ್ಕಾಗಿ ಸ್ವ ಸಹಾಯ ಸಂಘವೊಂದರಲ್ಲಿ 50 ಸಾವಿರ ರೂ.ಸಾಲ ಮಾಡಿದ್ದರು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಜಮೀನಿನಲ್ಲಿನ ಬೆಳೆ ಸಂಪೂರ್ಣ ನಾಶವಾಗಿತ್ತು.
ದಾವಣಗೆರೆ ತಾಲೂಕಿನ ಜಡಗನಹಳ್ಳಿ ಗ್ರಾಮದಲ್ಲಿ ರೈತ ನಿಂಗಪ್ಪ (50) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆ 5.25 ಲಕ್ಷ ರೂ.ಸಾಲ ಮಾಡಿದ್ದರು.ಇದೇ ವೇಳೆ, ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ನಾಮದೇವ ರಾಮಕೃಷ್ಣ ಪಿರಾಜೆ (45) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಿಧ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಾಲ್ಕು ಲಕ್ಷ ರೂ. ಸಾಲ ಮಾಡಿದ್ದರು. ಇತ್ತೀಚಿನ ಪ್ರವಾಹದಿಂದ ಕಬ್ಬಿನ ಬೆಳೆ ನಾಶವಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.