ಸಚಿವರಿಗೇ ಇಲ್ಲ ಸಕಾಲದ ಸಮರ್ಪಕ ಮಾಹಿತಿ!
Team Udayavani, Jan 29, 2017, 3:45 AM IST
ಬೆಂಗಳೂರು: ಜನರಿಗೆ ಅಗತ್ಯವಾದ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಲು ಅನುಕೂಲವಾಗುವಂತೆ ಸರ್ಕಾರ ಜಾರಿಗೊಳಿಸಿರುವ ಸಕಾಲ ಯೋಜನೆಯ ಮಾಸಿಕ ಪ್ರಗತಿ ವಿವರವೇ ಸಕಾಲದ ನಿಯಮ ಉಲ್ಲಂ ಸಿದೆ!
ಸಕಾಲ ಯೋಜನೆ ಮಾಸಿಕ ಪ್ರಗತಿ ವಿವರವನ್ನು ಪ್ರತಿ ತಿಂಗಳು ಕಾನೂನು ಸಚಿವರಿಗೆ ಸಲ್ಲಿಸಬೇಕಾಗಿದೆಯಾದರೂ ಒಂದು ವರ್ಷದಿಂದ ವಿವರ ಸಲ್ಲಿಸಿಲ್ಲ. ಇದನ್ನು ಆಕ್ಷೇಪಿಸಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ ಸಚಿವರಿಗೆ ಏಕಕಾಲದಲ್ಲಿ ಒಂದು ವರ್ಷದ ವರದಿ ಸಲ್ಲಿಸುವುದರ ಜತೆಗೆ ತರಾತುರಿಯಲ್ಲಿ
ಯೋಜನೆಯ ಅನುಷ್ಠಾನ ಪರಿಶೀಲನೆ ಕಾರ್ಯವನ್ನೂ ಕೈಗೊಂಡಿದೆ.
ಸಾಮಾನ್ಯ ಜನರಿಗೆ ಅಗತ್ಯವಾದ ನಾಗರಿಕ ಸೇವೆಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಮತ್ತಿತರ ಅಡೆತಡೆಗಳಿಲ್ಲದೆ ಕಾಲಮಿತಿಯೊಳಗೆ ಒದಗಿಸುವ ಮಹತ್ವದ ಉದ್ದೇಶದೊಂದಿಗೆ 2012ರಲ್ಲಿ ಸಕಾಲ ಯೋಜನೆ ಜಾರಿಯಾಯಿತು. ಅದರಂತೆ ಈವರೆಗೆ 63 ಇಲಾಖೆಗಳ 765 ಸೇವೆಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ.
ಸಕಾಲದಡಿ ಈವರೆಗೆ 12.08 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಇತ್ತೀಚೆಗೆ 32 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಕಾಲಮಿತಿಯೊಳಗೆ ಸೇವೆ ಒದಗಿಸುವ ಕಾರ್ಯ ಕೂಡ ಉತ್ತಮವಾಗಿಯೇ ನಡೆಯುತ್ತಿದೆ.
ಸೇವೆಯಲ್ಲಿ ವ್ಯತ್ಯಯ: ಆದರೆ, ಇತ್ತೀಚಿನ ದಿನಗಳಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ, ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ. ರಾಜ್ಯದ ಕೆಲವೆಡೆ ಸಕಾಲ ಕೌಂಟರ್ಗಳನ್ನು ಮುಚ್ಚಲಾಗಿದೆ. ಕಚೇರಿಗಳಲ್ಲೂ ಸಕಾಲ ವ್ಯಾಪ್ತಿಗೆ ಬರುವ ಸೇವೆಗಳ ವಿವರ ಸರಿಯಾಗಿ ನಮೂದಿಸದಿರುವುದು,
ಕಾಲಮಿತಿಯ ವಿವರವನ್ನು ಪ್ರಕಟಿಸದಿರುವುದು, ಸಕಾಲದಡಿ ಅರ್ಜಿ ಸಲ್ಲಿಸಿದರೆ ಸ್ವೀಕರಿಸದೆ ವಿಳಂಬವಾಗಲಿದೆ ಎಂಬುದಾಗಿ ಹೇಳಿ ಹಣ ಪಡೆದು ದಾಖಲೆ ನೀಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪ ಕೇಳಿಬಂದಿತ್ತು.
ಮುಖ್ಯವಾಗಿ ಖಾತಾ, ಕಟ್ಟಡ ನಿರ್ಮಾಣ ನಕ್ಷೆ, ಸ್ವಾಧೀನ ಪತ್ರ ಇತರೆ ಪ್ರಮುಖ ದಾಖಲೆಗಳ ವಿತರಣೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದು ಸಕಾಲದ ವರ್ಚಸ್ಸನ್ನೇ ಮಂಕಾಗಿಸಿದೆ ಎಂಬ ಮಾತೂ ಇದೆ.
ಸಚಿವರಿಂದ ಪತ್ರ: ಆ ಹಿನ್ನೆಲೆಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಪತ್ರ ಬರೆದು, ಸಕಾಲ ಯೋಜನೆಯ ಜಿಲ್ಲಾವಾರು ಮಾಸಿಕ ವಿವರ ಕಳೆದ ಒಂದು ವರ್ಷದಿಂದ ಸಲ್ಲಿಕೆಯಾಗುತ್ತಿಲ್ಲ. ಹಾಗಾಗಿ ವರ್ಷದಿಂದೀಚೆಗೆ ಬಿಡುಗಡೆಗೊಳಿಸಿದ ಸಕಾಲ ಸೇವೆಗಳ ಪ್ರಗತಿಯ ಮಾಸಿಕ ಪ್ರತಿ ವರದಿಗಳನ್ನು ಹಾಗೂ ಸಕಾಲ ಕಾಯ್ದೆಯಡಿ ಸೇರ್ಪಡೆಯಾದ ವಿವಿಧ ಇಲಾಖೆಗಳ ಸೇವೆಗಳ ವಿವರವನ್ನು ವಾರದೊಳಗೆ ಸಲ್ಲಿಸಬೇಕು. ಒಂದೊಮ್ಮೆ ಮಾಸಿಕ
ವರದಿ ಸಲ್ಲಿಕೆ ಸ್ಥಗಿತಗೊಳಿಸಿದ್ದರೆ ಅದಕ್ಕೆ ಕಾರಣ ನೀಡಿ ಇನ್ನು ಮುಂದೆ ಪ್ರತಿ ತಿಂಗಳ ಪ್ರಗತಿ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದರು.
ತರಾತುರಿಯಲ್ಲಿ ತಪಾಸಣೆ: ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸಚಿವರಿಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಸಕಾಲ ಯೋಜನೆ ಜಾರಿಯ ವಸ್ತುಸ್ಥಿತಿ ತಿಳಿಯಲು ದಿಢೀರ್ ತಪಾಸಣೆಗಳು ಆರಂಭವಾಗಿವೆ. ಇತ್ತೀಚೆಗೆ ಸಕಾಲ ಮಿಷನ್ ಅಧಿಕಾರಿಗಳು ಬಿಬಿಎಂಪಿ, ಬಿಡಿಎ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಪರಿಣಾಮಕಾರಿಯಾಗಿ ಸೇವೆ ಒದಗಿಸದಿರುವ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಇತರೆ
ಜಿಲ್ಲೆಗಳಲ್ಲೂ ತಪಾಸಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ಕೋರ್ಟ್ ತರಾಟೆ
Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ
Anandpura: ಗಾಂಜಾ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.