ಬಿಟಿ ಕ್ಷೇತ್ರದಲ್ಲಿ ಸ್ಥಳಾವಕಾಶದ ಕೊರತೆಯಿಲ್ಲ

ಯಾರೇ ಬಂದರೂ ಮುಕ್ತ ಅವಕಾಶ, ಲಕ್ಷಾಂತರ ಉದ್ಯೋಗವೂ ಸೃಷ್ಟಿ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

Team Udayavani, Nov 23, 2020, 1:43 PM IST

bng-tdy-05

ಕೋವಿಡ್ ಸಂಕಷ್ಟದಲ್ಲೂ ಯಾವುದೇ ತಾಂತ್ರಿಕ ದೋಷವಿಲ್ಲದೇ ಅಚ್ಚುಕಟ್ಟಾಗಿ ಬೆಂಗಳೂರುಟೆಕ್‌ ಸಮಿಟ್‌-2020 ಪೂರ್ಣ ಗೊಂಡಿದೆ.ಟೆಕ್‌ ಸಮಿಟ್‌ನಲ್ಲಾದ ಚರ್ಚೆ,ವಿಚಾರ ಮಿನಿಮಯ, ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತಾದ ಒಪ್ಪಂದಗಳ ಅನುಷ್ಠಾನ ಹೇಗೆ ಮತ್ತು ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಇದಕ್ಕೆಲ್ಲ ಸಿದ್ಧತೆ ಮಾಡಿಕೊಂಡಿದೆ ಎಂಬುದರ ಬಗ್ಗೆ ಬೆಂಗಳೂರು ಟೆಕ್‌ ಸಮಿಟ್‌ – 2020 ಪ್ರಮುಖ ರೂವಾರಿ ಐಟಿ-ಬಿಟಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರೊಂದಿಗೆ “ಉದಯವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಟೆಕ್‌ ಸಮಿಟ್‌ಯಶ ಕಂಡಿದ್ದು ಹೇಗೆ? :

ಪ್ರಸಕ್ತ ಕೋವಿಡ್‌ ಸಂಕಷ್ಟದ ನಡುವೆಯೂ ತಂತ್ರ ಜ್ಞಾನ ಬಳಸಿಕೊಂಡು ವರ್ಚುವಲ್‌ ವ್ಯವಸ್ಥೆಯಲ್ಲಿ ವಿಶ್ವಕ್ಕೆ ಮಾದರಿಯಾಗುವಂತೆ ಟೆಕ್‌ ಸಮಿಟ್‌ ನಡೆದಿದೆ. ದೇಶ, ಭಾಷೆ, ಪ್ರಾಂತ್ಯದ ಗಡಿ ಮೀರಿ ವಿಶ್ವದ ಗಮನ ಸೆಳೆದಿದೆ. ಆವಿಷ್ಕಾರ, ಸಂಶೋಧನೆ ಹಾಗೂ ಅಭಿವೃದ್ಧಿ, ಕೌಶಲತೆ ಸೇರಿ ಅನೇಕ ವಿಷಯ ಗಳ ಚರ್ಚೆ ಇಲ್ಲಾಗಿದೆ. ಕರ್ನಾಟಕದ ಐಟಿ-ಬಿಟಿ ಸಾಧನೆಯೂ ಇಲ್ಲಿ ಅನಾವರಣಗೊಂಡಿದೆ.

 ಟೆಕ್‌ ಸಮಿಟ್‌ನಿಂದ ಮುಂದೆ ಆಗಬಹುದಾದ ಲಾಭವೇನು? :

ಟೆಕ್‌ ಸಮಿಟ್‌ ಹೂಡಿಕೆಗೆ ಆದ್ಯತೆ ನೀಡುವುದಿಲ್ಲ. ವಿಶ್ವಮಟ್ಟದ ತಾಂತ್ರಿಕ ಕೌಶಲತೆ, ಮಾಹಿತಿ ತಂತ್ರ ಜ್ಞಾನದ ಜ್ಞಾನ ಹಾಗೂ ಹೊಸ ಆವಿಷ್ಕಾರಗಳು ಮತ್ತು ಯೋಜನೆಯ ವಿನಿಮಯ ಇಲ್ಲಾಗಿದೆ. ವಿಶ್ವಮಟ್ಟದ ಹೊಸ ಆಲೋಚನೆ, ಅನುಷ್ಠಾನ ಕ್ರಮದ ಚರ್ಚೆಯೂ ನಡೆದಿದೆ. ತಂತ್ರಜ್ಞಾನ, ಆವಿಷ್ಕಾರ,ಸಂಶೋಧನೆ, ಅಭಿವೃದ್ಧಿ ಇತ್ಯಾದಿಗಳಲ್ಲಿ ಆಗಬೇಕಿರುವ ಬಲವರ್ಧನೆ, ಸುಧಾರಣಾ ಕ್ರಮ ಬಗ್ಗೆ ವಿಚಾರ ವಿನಿಯಮ ನಡೆದಿದೆ.

ಉದ್ಯೋಗಾವಕಾಶ ಸೃಷ್ಟಿಗೆ ಉತ್ತೇಜನ ಹೇಗೆ? :

ಐಟಿ ಮತ್ತು ತಂತ್ರಜ್ಞಾನದ ಉತ್ಪಾದನೆ, ನವೋದ್ಯಮ ವಿವಿಧ ವಲಯದಲ್ಲಿ ಬೆಳೆಯುತ್ತಲೇ ಇದೆ. ಈ ಕ್ಷೇತ್ರಕ್ಕೆ ಎಷ್ಟೇ ಜನ ಬಂದರೂ ಸ್ಥಳಾವಕಾಶದ ಕೊರತೆ ಆಗದು, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಸೈಬರ್‌ ಭದ್ರತೆ, ಏರೋಸ್ಪೇಸ್‌, ಸ್ಪೇಸ್‌, ವಿಜ್ಞಾನ ತಂತ್ರಜ್ಞಾನ , ಇ-ಕಾಮರ್ಸ್‌, ಲಾಜೆಸ್ಟಿಕ್‌ ಹೀಗೆ ಹಲವು ವಲಯಗಳಲ್ಲಿ ತಂತ್ರಜ್ಞಾನದ ಪ್ರಭಾವ ಹೆಚ್ಚಾಗುತ್ತಿದೆ. ಇದರ ಪರಿಣಾಮ ಉದ್ಯೋಗಾವಕಾ ಶವೂ ಹೆಚ್ಚಾಗುತ್ತದೆ.

ಬಯೋ ಎಕಾನಮಿ ಗುರಿ ಸಾಧನೆಗೆ ಇರುವ ಕಾರ್ಯಕ್ರಮವೇನು? :

ಬಿಟಿ ಮೂಲಕವೇ ರಾಜ್ಯ ಮತ್ತು ದೇಶದಲ್ಲಿ ಅನೇಕ ಪರಿಹಾರಗಳು ಬಂದಿವೆ. ಆಗ್ರೋ ಎಕಾನಮಿಯಲ್ಲಿ ಶೇ.35 ಷೇರು ಹೊಂದಿದ್ದೇವೆ. ಅದನ್ನು ಶೇ.50ಕ್ಕೆ ಏರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬಯೋ ಎಕಾನಮಿ ಉತ್ತೇಜನಕ್ಕೆ ಸಂಬಂಧಿಸಿದಂತೆ ಪ್ರಮುಖ ಆರು ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಬಯೋ ಉತ್ಪಾದನೆ. ವ್ಯಾಕ್ಸಿನ್‌, ಇಮಿನೋಲಜಿ, ಬಯೋ ರಿಫೈನರಿ, ಬಯೋ ತೈಲ ಇವುಗಳನ್ನೇ ಪ್ರಮುಖವಾಗಿಟ್ಟುಕೊಂಡು ಆಗ್ರೋ ಎಕಾನಮಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೇವೆ.

ಟೆಕ್‌ ಸಮಿಟ್‌ನಲ್ಲಾದ ಒಪ್ಪಂದ ಅನುಷ್ಠಾನ ಹೇಗೆ? :

ಟೆಕ್‌ ಸಮಿಟ್‌ನಲ್ಲಿ ಪ್ರಮುಖ 8 ಒಪ್ಪಂದಗಳು ಆಗಿವೆ. ನವೋದ್ಯಮಕ್ಕೆ ಇನ್ನಷ್ಟು ಉತ್ತೇಜನ, ಕೃಷಿ, ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಸೈಬರ್‌ ಭದ್ರತೆ ಹೀಗೆ ಹಲವು ಕ್ಷೇತ್ರವನ್ನು ಸಂಶೋಧನಾತ್ಮಕವಾಗಿ ಹಾಗೂ ಕೌಶಲ್ಯಾಧಾರಿತವಾಗಿ ಬಲ ಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದಗಳಾಗಿದ್ದು, ಒಪ್ಪಂದವನ್ನು ನೇರವಾಗಿ ಸರ್ಕಾರ ಮಾಡಿಲ್ಲ. ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಆಗಬಾರದೆಂಬ ಸದುದ್ದೇಶದಿಂದ ನಮ್ಮಲ್ಲಿರುವ ಸೆಂಟರ್‌ ಫಾರ್‌ ಎಕ್ಸೆಲೆನ್ಸಿಗಳನ್ನು ಬಳಸಿಕೊಂಡು, ಬೇರೆ ಬೇರೆ ದೇಶದ ಇಂತಹ ಸಂಸ್ಥೆಗಳೊಂದಿಗೆ ಒಪ್ಪಂದ ನಡೆದಿದೆ. ಅನುಷ್ಠಾನದ ಪೂರ್ಣ ನಿರ್ವಹಣೆಯನ್ನು ಆ್ಯಂಕರಿಂಗ್‌ ಸಂಸ್ಥೆಗಳೇ ನೋಡಿಕೊಳ್ಳಲಿವೆ.

ಇದನ್ನೂ ಓದಿ : ರೋಶನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ

 ಟೆಕ್‌ ಸಮಿಟ್‌ ಬಿಯಾಂಡ್‌ ಬೆಂಗಳೂರುಕಲ್ಪನೆಗೆ ಹೇಗೆ ಸಹಕಾರಿಯಾಗಿದೆ? :

 ಬಿಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ ಐಟಿ-ಬಿಟಿ, ನವೋದ್ಯಮ ಎಲ್ಲೆಡೆ ವಿಸ್ತರಿಸಲು ಟೆಕ್‌ ಸಮಿಟ್‌ ಸಾಕಷ್ಟು ಸಹಕಾರಿಯಾಗಿದೆ. ಸಂಪರ್ಕ ಜಾಲ, ಮಾರುಕಟ್ಟೆ ವ್ಯವಸ್ಥೆ, ಸ್ಥಳಾವಕಾಶ, ಸೌಲಭ್ಯ ಕಲ್ಪಿಸುವ ಜತೆಗೆ ಸ್ಥಳೀಯವಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ವರ್ಕ್‌ ಫ್ರಂ ಹೋಂ ಪರಿಕಲ್ಪನೆ ಯಡಿಎಲ್ಲಿಂದಬೇಕಾದರೂಸೇವೆ ಸಲ್ಲಿಸಬಹುದಾದ ವ್ಯವಸ್ಥೆಗೆ ನಾವು ಒಗ್ಗಿಕೊಂಡಿದ್ದೇವೆ.

ಕೇಂದ್ರ ಸರ್ಕಾರದಿಂದಯಾವ ರೀತಿಯಲ್ಲಿ ಸಹಕಾರ ಬಯಸುತ್ತಿದ್ದೀರಿ? :

ಕೇಂದ್ರ ಸರ್ಕಾರದಿಂದ ಯಾವುದೇ ಸಂಸ್ಥೆ ಅಥವಾ ಕೇಂದ್ರ ತೆರೆಯಲು ಅನುಮತಿ ನೀಡಿದರೂ ಅದನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಇದರಿಂದ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ.

 ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಸಮಸ್ಯೆಗೆ ಪರಿಹಾರ ಹೇಗೆ? :

ಸಮಸ್ಯೆ ಬಗೆಹರಿಸಿ, ಸೌಲಭ್ಯದ ಉನ್ನತೀಕರಣಕ್ಕೆಕ್ರಮ ಆಗುತ್ತಿದೆ. ಟೆಲಿಕಾಂ ನೀತಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮೂಲಕ ಸೌಲಭ್ಯ ಕಲ್ಪಿಸಲಿದ್ದೇವೆ.ಕೇಬಲ್‌ ಸಂಪರ್ಕದ ವಿಸ್ತರಣೆ ಸೇರಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ.

 

ರಾಜುಖಾರ್ವಿ ಕೊಡೇರಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.