Abortions ಮಾಡಿಸಿಕೊಂಡವರಿಗೂ ಕಂಟಕ; ಭ್ರೂಣ ಹತ್ಯೆ ಮಾಡಿಸಿಕೊಂಡವರ ಮಾಹಿತಿ ಸಂಗ್ರಹ
ಕಾನೂನು ಕ್ರಮ ಕೈಗೊಳ್ಳಲು ಪೊಲೀಸರ ಚಿಂತನೆ
Team Udayavani, Nov 28, 2023, 7:10 AM IST
ಬೆಂಗಳೂರು: ಹೆಣ್ಣುಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡುತ್ತಿದ್ದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಇಂತಹ ಅಮಾನವೀಯ ಕೃತ್ಯ ಎಸಗುತ್ತಿದ್ದ ದಂಧೆಕೋರರು ಮಾತ್ರವಲ್ಲದೆ ಗರ್ಭಪಾತ ಮಾಡಿಸಿಕೊಂಡಿದ್ದವರಿಗೂ ಈಗ ಕಂಟಕ ಎದುರಾಗಿದೆ.
ಭ್ರೂಣಲಿಂಗ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧ. ವೈದ್ಯರು ಮಾತ್ರವಲ್ಲ, ದಂಪತಿಯ ವಿರುದ್ಧವೂ ಈ ಆರೋಪದಡಿ ಕಾನೂನು ಕ್ರಮ ಕೈಗೊಳ್ಳಬಹುದು. ಹೀಗಾಗಿ ಹೆಣ್ಣುಭ್ರೂಣ ಎಂದು ತಿಳಿದು, ಅವುಗಳನ್ನು ಹತ್ಯೆ (ಗರ್ಭಪಾತ) ಮಾಡಿಸಿಕೊಂಡಿದ್ದ ದಂಪತಿಗೂ ಅಷ್ಟೇ ಪ್ರಮಾಣದ ಶಿಕ್ಷೆ ಆಗಲಿದೆ.
100ಕ್ಕೂ ಹೆಚ್ಚು ಮಂದಿಯ ಮಾಹಿತಿ ಸಂಗ್ರಹ
ಮೂರು ವರ್ಷಗಳಲ್ಲಿ 900 ಹೆಣ್ಣುಭ್ರೂಣಗಳ ಲಿಂಗಪತ್ತೆ ಹಚ್ಚಿ ಗರ್ಭಪಾತ ಮಾಡಿಸಿದ ಪ್ರಕರಣದ ಕಿಂಗ್ಪಿನ್ಗಳಾದ ಮೈಸೂರಿನ ಆಯುರ್ವೇದಿಕ್ ವೈದ್ಯ ಚಂದನ್ ಬಲ್ಲಾಳ್, ಮಕ್ಕಳ ತಜ್ಞ ತುಳಸಿರಾಮ್ ಸಹಿತ 9 ಮಂದಿಯನ್ನು ಬಂಧಿಸಲಾಗಿದೆ. ಜತೆಗೆ ಭ್ರೂಣ ಲಿಂಗ ಪತ್ತೆ ಹಚ್ಚಿಸಿ, ಗರ್ಭಪಾತ ಮಾಡಿಸಿಕೊಂಡ ದಂಪತಿಗಳ ಮಾಹಿತಿ ಸಂಗ್ರಹಿಸಲಾಗಿದೆ.
ಚಂದನ್ ಬಲ್ಲಾಳ್ನ ಆಸ್ಪತ್ರೆ ಮೇಲೆ ದಾಳಿ ನಡೆಸಿದಾಗ ಅಲ್ಲಿನ ನೋಂದಣಿ ಪುಸ್ತಕ ಮತ್ತು ಕಂಪ್ಯೂಟರ್ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳಲ್ಲಿ ಅಂದಾಜು 100ಕ್ಕೂ ಅಧಿಕ ದಂಪತಿಗಳ ಮಾಹಿತಿ ದೊರಕಿದೆ. ಇನ್ನುಳಿದವರ ಮಾಹಿತಿ ಸಂಗ್ರಹಕ್ಕೆ ಪ್ರಯತ್ನ ನಡೆಯುತ್ತಿದೆ.
ಇಬ್ಬರು ಕಿಂಗ್ಪಿನ್ ವೈದ್ಯರ ಸಹಿತ 9 ಆರೋಪಿಗಳು ತಮ್ಮ ಹೇಳಿಕೆಗಳಲ್ಲಿ ಯಾವೆಲ್ಲ ಜಿಲ್ಲೆಗಳ ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಆಧಾರದ ಮೇಲೆ ಸದ್ಯದಲ್ಲೇ ಕೆಲವರಿಗೆ ನೋಟಿಸ್ ನೀಡಲಾಗುತ್ತದೆ. ಕಾನೂನು ಸಲಹೆ ಪಡೆದು ಗರ್ಭಪಾತ ಮಾಡಿಸಿಕೊಂಡವರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು ಅಥವಾ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸ್ಪತ್ರೆಯೇ ಅಕ್ರಮ
ಆರೋಪಿ ವೈದ್ಯ ತುಳಸಿರಾಮ್ ಮೈಸೂರಿನ ಉದಯಗಿರಿಯಲ್ಲಿದ್ದ ಲತಾ ಆಸ್ಪತ್ರೆಯನ್ನು ಚಂದನ್ ಬಲ್ಲಾಳ್ಗೆ ಮಾರಾಟ ಮಾಡಿದ್ದಾನೆ. ಆದರೆ ಚಂದನ್ ಬಲ್ಲಾಳ್ ಅದಕ್ಕೆ ಮಾತಾ ಆಸ್ಪತ್ರೆ ಎಂದು ಹೆಸರು ಬದಲಾಯಿಸಿದ್ದರೂ ಅದನ್ನು ಕೆಪಿಎಂಇ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್) ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. ಜತೆಗೆ ಐದು ತಿಂಗಳುಗಳಿಂದ ಈ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಡಾ| ಚಂದನ್ ಬಲ್ಲಾಳ್ ಈ ಆಸ್ಪತ್ರೆಯನ್ನು ಸ್ಥಗಿತಗೊಳಿಸಿ ಮೈಸೂರಿನ ರಾಜ್ಕುಮಾರ್ ರಸ್ತೆಯಲ್ಲಿ ಮತ್ತೂಂದು ಆಯುರ್ವೇದಿಕ್ ಆಸ್ಪತ್ರೆ ತೆರೆದು ಅಕ್ರಮ ದಂಧೆ ಮುಂದುವರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hathras Stampede: ಹಾಥರಸ್ ಕಾಲ್ತುಳಿತ ನ್ಯಾಯಾಂಗ ತನಿಖೆಗೆ: ಯೋಗಿ
UK Election 2024: ಇಂದು ಬ್ರಿಟನ್ನಲ್ಲಿ ಸಂಸತ್ ಚುನಾವಣೆ… ನಾಳೆ ಫಲಿತಾಂಶ
CISF Constable: ಕಂಗನಾ ಮೇಲೆ ಹಲ್ಲೆ ನಡೆಸಿದ್ದ ಸಿಬಂದಿ ಬೆಂಗಳೂರಿಗೆ ವರ್ಗ
LK Advani: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು
Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.