Tungabhadra dam ; ನಾಲ್ಕೇ ದಿನದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದೇವೆ: ಡಿಕೆಶಿ
ಡ್ಯಾಂಗಳ ಸುರಕ್ಷತೆಯ ಪ್ರಶ್ನೆ; ಸಮಿತಿ ರಚನೆ ಮಾಡಿದ್ದೇವೆ ಎಂದ ಸಚಿವ ಎಂ.ಬಿ.ಪಾಟೀಲ್
Team Udayavani, Aug 21, 2024, 2:21 PM IST
ಕೊಪ್ಪಳ : ಇಡೀ ಭಾರತವೇ ತುಂಗಭದ್ರಾ ಡ್ಯಾಮ್ ನತ್ತ ನೋಡುತ್ತಿತ್ತು, ವಿರೋಧ ಪಕ್ಷದವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದರು ನಮ್ಮ ಸರಕಾರ ನಾಲ್ಕೇ ದಿನದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದೆ ‘ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ(ಆ21) ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ‘ ಡ್ಯಾಂ ವಿಚಾರದಲ್ಲಿ ನಿಮಿಷವೂ ವಿಳಂಬ ಮಾಡದೇ ದಿನದ 24 ಗಂಟೆ ಕೆಲಸ ಮಾಡಿದ್ದೇವೆ. ನಮ್ಮ ಸಚಿವರು, ಶಾಸಕರು ಹಗಲು ರಾತ್ರಿ ನಿದ್ದೆ ಮಾಡದೇ ಜಾಗೃತಿ ವಹಿಸಿದ್ದರು. ಅವಘಡ ನಡೆದ ತತ್ ಕ್ಷಣವೇ ತಜ್ಞ ಕನ್ನಯ್ಯ ನಾಯ್ಡು ಸೇರಿದಂತೆ ಜಿಂದಾಲ್ ಕಂಪನಿಯನ್ನು ಸಂಪರ್ಕ ಮಾಡಿದೆವು. ಜಿಂದಾಲ್, ನಾರಾಯಣ ಮತ್ತು ಹಿಂದೂಸ್ಥಾನ್ ಈ ಮೂರು ಕಂಪನಿಗಳು ನಾಲ್ಕು ದಿನಗಳ ಕಾಲ ಶ್ರಮಿಸಿದರು. ನಾಲ್ಕು ದಿನದಲ್ಲಿ ಕಾರ್ಯಾಚರಣೆ ಯಶಸ್ವಿ ಮಾಡಿದೆವು’ ಎಂದು ತಿಳಿಸಿದರು.
‘ಟೀಕೆಗಳು ಸಾಯುತ್ತವೆ, ಕೆಲಸ ಉಳಿಯುತ್ತದೆ. ಭಗವಂತನ ಕೃಪೆಯಿಂದ ಯಾವುದೇ ತೊಂದರೆ ಆಗಲಿಲ್ಲ. ರಾಜ್ಯದ ಎಲ್ಲ ಜಲಾಶಯಗಳ ಭದ್ರತೆಗೆ ಪರಿಶೀಲನೆಗೆ ಸಮಿತಿ ರಚನೆ ಮಾಡಿದ್ದು, ಈಗಾಗಲೇ ತಜ್ಞರು ಒಳಗೊಂಡ ಸಮಿತಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ಡ್ಯಾಂ ಭದ್ರತೆಗೆ ನಮ್ಮ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ.ಜಲಾಶಯದ ನೀರು ತಡೆದು ನಾವು ರೈತರನ್ನು ಬದುಕಿಸಿದ್ದೇವೆ’ ಎಂದರು.
ತುಂಗಭದ್ರಾ ಡ್ಯಾಂ ಆಯಸ್ಸು 30 ವರ್ಷ ಎಂಬ ವಿಚಾರದ ಕುರಿತಾದ ಪ್ರಶ್ನೆಗೆ ಉತ್ತರಿಸಿ ‘ಡ್ಯಾಂ ಗೆ ಪ್ರತಿ ವರ್ಷ ಅರ್ಧ ಟಿಎಂಸಿ ಹೂಳು ತುಂಬುವ ವಿಚಾರ ನಮಗೆ ಗೊತ್ತಿದೆ. ನವಲಿ ಡ್ಯಾಂ ವಿಚಾರದಲ್ಲಿ ನಾವು ಏನು ಮಾಡಬೇಕೆಂದು ಚರ್ಚೆ ಮಾಡುತ್ತೇವೆ’ ಎಂದರು.
ಡ್ಯಾಂ ನ ಕ್ರಸ್ಟ್ ಗೇಟ್ಗಳ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ‘ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದು, ಅದಕ್ಕೆ ನಮ್ಮ ಸರಕಾರ ಏನು ಮಾಡಬೇಕಿದೆಯೋ ಅದನ್ನು ಮಾಡುತ್ತದೆ.ನಾನು ಜಲಾಶಯದ ತಾಂತ್ರಿಕ ತಜ್ಞನಲ್ಲ. ನಾವು ರಚಿಸಿದ ಸಮಿತಿ ನೀಡುವ ವರದಿಯನ್ವಯ ಕ್ರಮ ಕೈಗೊಳ್ಳುತ್ತೇವೆ’ ಎಂದರು.
‘ತುಂಗಭದ್ರಾ ತುಂಬಿದ ನಂತರ ಬಾಗಿನ ಅರ್ಪಿಸಲು ಬರುತ್ತೇವೆ.ಗೇಟ್ ಅಳವಡಿಕಗೆ ಶ್ರಮಿಸಿದವರನ್ನು ಸತ್ಕರಿಸುತ್ತೇವೆ’ ಎಂದು ಡಿಸಿಎಂ ಹೇಳಿದರು.
ಸುರಕ್ಷತೆಗೆ ಸಮಿತಿ ರಚನೆ
ಸಚಿವ ಎಂ ಬಿ ಪಾಟೀಲ್ ಮಾತನಾಡಿ ‘ಡ್ಯಾಂ ನಿರ್ಮಾಣ ಮಾಡುವಾಗ ಪ್ರತಿ ವರ್ಷ 0.5 ಟಿಎಂಸಿ ಹೂಳು ತುಂಬುತ್ತದೆ. ಇದನ್ನು ನಮ್ಮ ಹಿರಿಯರು ಮೊದಲೇ ಹೇಳಿದ್ದಾರೆ. ಡ್ಯಾಂ ನಿರ್ಮಾಣವಾಗಿ ಈಗ 70 ವರ್ಷ ಆಗಿದೆ. 35 ಟಿಎಂಸಿ ಯಷ್ಟು ಹೂಳು ತುಂಬಿದೆ’ ಎಂದು ತಿಳಿಸಿದರು.
‘ಪ್ರತಿ ನೂರು ವರ್ಷಕ್ಕೆ ಹೊಸ ಡ್ಯಾಂ ಕಟ್ಟಬೇಕಾಗುತ್ತದೆ. ಈಗಾಗಲೇ ತುಂಗಭದ್ರಾ ಡ್ಯಾಂ ವಿಚಾರದಲ್ಲಿ ಸಮಿತಿ ರಚನೆ ಮಾಡಲಾಗಿದೆ.ಡ್ಯಾಂ ಗೇಟ್ ಸೇರಿ ಸುರಕ್ಷತೆಗೆ ಏನು ಮಾಡಬೇಕು ಎಲ್ಲವನ್ನೂ ಮಾಡುತ್ತೇವೆ. ಸರಕಾರ ಡ್ಯಾಂ ಸುರಕ್ಷತೆಗೆ ಸಮಿತಿ ರಚನೆ ಮಾಡಿದೆ. ವರದಿ ಅನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi ಕ್ಯಾಬಿನೆಟ್ ಅಂದರೆ ಹೋದ ಸಿದ್ದ, ಬಂದ ಸಿದ್ದ: ಅಶೋಕ್
Cabinet Meeting: ಬೀದರ್, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
Bellary; ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ, ನಟ ಧನ್ವೀರ್, ಹೇಮಂತ್
Kalaburagi: ಪಡಿತರದಲ್ಲಿ ತೊಗರಿ ಬೇಳೆ ವಿತರಣೆಗೆ ಯೋಚನೆ: ಸಚಿವ ಮುನಿಯಪ್ಪ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.