ರಾಜ್ಯ ಇನ್ನು ಎರಡು ಲಕ್ಷ ಕೋಟಿ ರೂ. ಸಾಲಗಾರ
Team Udayavani, Mar 7, 2017, 3:45 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ಎರಡು ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸುತ್ತಾರೋ ಇಲ್ಲವೋ ಆದರೆ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರಾಜ್ಯದ ಮೇಲಿನ ಸಾಲದ ಪ್ರಮಾಣ ಎರಡು ಲಕ್ಷ ಕೋಟಿ ರೂ. ದಾಟಲಿದೆ.
ರಾಜ್ಯ ಸರ್ಕಾರವು 2016-17 ನೇ ಸಾಲಿಗೆ 31036 ಕೋಟಿ ರೂ. ಸಾಲ ಪಡೆಯಲು ಅವಕಾಶ ಮಾಡಿಕೊಂಡಿದ್ದು, 2016 ಡಿಸೆಂಬರ್ ಅಂತ್ಯಕ್ಕೆ 12668.67 ಕೋಟಿ ರೂ. ಸಾಲ ಪಡೆದಿದೆ. ಮಾರ್ಚ್ ಅಂತ್ಯದ ವೇಳೆಗೆ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ರಾಜ್ಯದ ಸಾಲ ಎರಡು ಲಕ್ಷ ಕೋಟಿ ರೂ.ಗೆ ಏರುವ ಸಾಧ್ಯತೆಯಿದೆ.
2015-16 ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲದ ಪ್ರಮಾಣ 1,83,203 ಕೋಟಿ ರೂ.ಗಳಿದ್ದು 2016-17 ನೇ ಸಾಲಿನ ಸಾಲವೂ ಸೇರಿದರೆ ಎರಡು ಲಕ್ಷ ಕೋಟಿ ರೂ.ವರೆಗೆ ತಲುಪಲಿದೆ. ರಾಜ್ಯ ಸರ್ಕಾರ ಆರ್ಥಿಕ ಶಿಸ್ತಿನ ಮಿತಿಯೊಳಗಿದ್ದೇವೆ ಎಂದು ಹೇಳುತ್ತಲೇ ಪ್ರತಿವರ್ಷ ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳುತ್ತಲೇ ಇದೆ.
ಮತ್ತೂಂದು ಆತಂಕಕಾರಿ ವಿಚಾರ ಎಂದರೆ, ನೋಟು ಅಮಾನ್ಯ ಪರಿಣಾಮ ಪ್ರಸಕ್ತ ವರ್ಷ ರಾಜ್ಯ ಸರ್ಕಾರಕ್ಕೆ 4 ಸಾವಿರ
ಕೋಟಿ ರೂ.ಗಳಷ್ಟು ಆದಾಯ ಖೋತಾ ಆಗುವ ನಿರೀಕ್ಷೆಯಿದ್ದು, ಬರ ಹಿನ್ನೆಲೆಯಲ್ಲಿ 50 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯೂ ಕಡಿಮೆಯಾಗಿ ಇತರೆ ವಲಯಗಳ ಪ್ರಗತಿಯೂ ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿರುವುದರಿಂದ ಶೇ.6.2 ನಿರೀಕ್ಷಿತ ಜಿಎಸ್ಡಿಪಿ ಬೆಳವಣಿಗೆ ಅನುಮಾನವಾಗಿದೆ. ಇದು ಮುಂದಿನ ವರ್ಷದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.
ಹೀಗಾಗಿ, ಈಗಿನ ರಾಜ್ಯದ ಆರ್ಥಿಕ ಸ್ಥಿತಿಗತಿ ಪ್ರಕಾರ ಅಧಿಕಾರವಧಿಯ ಕೊನೆಯ ವರ್ಷ 2018-19 ನೇ ಸಾಲಿನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ 2 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವುದು ಕಷ್ಟ ಎಂದು ಹಣಕಾಸು ಇಲಾಖೆ
ಮೂಲಗಳು ತಿಳಿಸುತ್ತವೆ.
2015-16 ರಲ್ಲಿ 21072.34 ಕೋಟಿ ರೂ. ಸಾಲ ಪಡೆಯಲಾಗಿದ್ದು, ಜಿಎಸ್ಡಿಪಿಯ ಶೇ.24.91 ರಷ್ಟಾಗಿತ್ತು. ಜಿಎಸ್ಡಿಪಿ ಅನುಪಾತ ಶೇ.25 ಮಿತಿಯೊಳಗೇ ಸರ್ಕಾರ ಇದೆ. ಜತೆಗೆ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ.3 ರ ಮಿತಿಯೊಳಗಿರಬೇಕು ಅದನ್ನು ಕಾಯ್ದಕೊಂಡಿದೆ ಎಂದು ಸಮರ್ಥನೆ ಸಹ ನೀಡಲಾಗಿತ್ತು.
2016-17 ನೇ ಸಾಲಿನಲ್ಲಿ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ವರದಿಯಲ್ಲೂ ಒಟ್ಟಾರೆ ಸಾಲದ ಪ್ರಮಾಣ 2,08,557 ಕೋಟಿ ರೂ. ಅಂಕಿ ಮುಟ್ಟಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮಧ್ಯೆ, ಸರ್ಕಾರ 2016-17 ನೇ ಸಾಲಿನಲ್ಲಿ ಸ್ವಂತ ತೆರಿಗೆ ಮೂಲಕ 83,864 ಕೋಟಿ ರೂ. ನಿರೀಕ್ಷಿಸಿದ್ದು, ಆ ಪೈಕಿ ಡಿಸೆಂಬರ್ ಅಂತ್ಯಕ್ಕೆ 60,210 ಕೋಟಿ ರೂ. ಸಂಗ್ರಹವಾಗಿದ್ದು, ಈ ಮೂಲಕ ಶೇ.71.8 ರಷ್ಟು ಪ್ರಗತಿ ಸಾಧಿಸಲಾಗಿದೆ. ಮುದ್ರಾಂಕ ಮತ್ತು ನೋಂದಣಿ ಹೊರತುಪಡಿಸಿ ದರೆ ಇತರೆ ಬಾಬ್ತುಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿಲ್ಲ.
ಅಬಕಾರಿ, ವಾಣಿಜ್ಯ ಹಾಗೂ ಮೋಟಾರು ತೆರಿಗೆ ಮೂಲದಿಂದಲೇ 55 ಸಾವಿರ ಕೋಟಿ ರೂ.ವರೆಗೆ ಸಂಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ
Black-mail; ಮಾಜಿ ಪ್ರಿಯಕರನ ಕೊ*ಲೆಗೆ ಪ್ರೇಯಸಿಗೆ ಸಾಥ್ ನೀಡಿದ ಹಾಲಿ ಪ್ರಿಯಕರ!
Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ
Israel ಮಾದರಿಯಲ್ಲಿ ಹೊರ ಮತ್ತು ಆಂತರಿಕ ಶತ್ರುಗಳ ವಿರುದ್ಧ ಹೋರಾಡಬೇಕು : ಮುತಾಲಿಕ್
Davanagere: ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾದ ವಿರೋಧ: ಶಾಮನೂರು ಶಿವಶಂಕರಪ್ಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ
Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ
PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ
Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ
Udupi; ಗೀತಾರ್ಥ ಚಿಂತನೆ 58-ಒಳ್ಳೆಯ ಕೆಲಸ, ಕೆಟ್ಟ ಕೆಲಸ: ಸಜ್ಜನ, ದುರ್ಜನ ಲಕ್ಷಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.