![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 9, 2019, 3:00 AM IST
ಗಂಗಾವತಿ: ಮಗಳು ಸತ್ತ ಸುದ್ದಿಯನ್ನು ಮುಚ್ಚಿಟ್ಟು ಕಂಡಕ್ಟರ್ನ್ನು ಡ್ಯೂಟಿಗೆ ಕಳುಹಿಸಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಸಹಾಯಕ ಸಂಚಾರಿ ನಿರೀ ಕ್ಷಕಿ ಹೇಮಾವತಿ ಅವರನ್ನು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಫಯಾಜ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಳೆದ ಬುಧವಾರ ಸ್ಥಳೀಯ ಈಶಾನ್ಯ ಸಾರಿಗೆ ಸಂಸ್ಥೆಯ ಕಂಡಕ್ಟರ್ ಮಂಜುನಾಥ ಅವರ ಮಗಳು ಕವಿತಾ (11) ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದಲ್ಲಿ ಟೈಫಾಯಿಡ್ನಿಂದ ಮೃತರಾಗಿದ್ದರು.
ಈ ವಿಷಯವನ್ನು ತಂದೆಗೆ ತಿಳಿಸುವಂತೆ ಮನೆಯವರು ದೂರವಾಣಿ ಮೂಲಕ ಮನವಿ ಮಾಡಿದರೂ ಹೇಮಾವತಿ ಅವರು ನಿರ್ಲಕ್ಷ್ಯ ಮಾಡಿ ಮಂಜುನಾಥ ಅವರನ್ನು ಗಂಗಾವತಿ-ಕೊಲ್ಹಾಪೂರ ಡ್ನೂಟಿಗೆ ಕಳುಹಿಸಿದ್ದರು. ಪ್ರಕರಣದ ತೀವ್ರತೆ ಅರಿತು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಹಮದ್ ಫಯಾಜ್ ಅವರು ಸಂಸ್ಥೆಯ ಡಿಟಿಒ ಹಾಗೂ ಡಿಎಂಇ ಅವರನ್ನು ಗಂಗಾವತಿ ಡಿಪೋಗೆ ಕಳುಹಿಸಿ ಸಮಗ್ರ ವರದಿ ಪಡೆದು ಶನಿವಾರ ಸಂಜೆ ಎಟಿಐ ಹೇಮಾವತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಶಾನ್ಯ ಸಾರಿಗೆ ಸಂಸ್ಥೆಯ ನೌಕರರು ಎಐಸಿಟಿಯು ಹಾಗೂ ಸಿಐಟಿಯು ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಸಾರಿಗೆ ಬಸ್ಗಳಲ್ಲಿ ಮೊಬೈಲ್ ನಿಷೇಧ ಮಾಡಿರುವ ಕಾರಣ ದುರ್ಘಟನೆ ಜರುಗಿದೆ. ಕೂಡಲೇ ಆದೇಶ ವಾಪಸ್ ಪಡೆಯುವಂತೆ ಪ್ರತಿಭಟನೆ ವೇಳೆ ಒತ್ತಾಯಿಸಿದ್ದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.