Valmiki ನಿಗಮ ಅಕ್ರಮಕ್ಕೆ ಮೇಲಿನಿಂದ ಒತ್ತಡ ಕಾರಣ?

ಇಬ್ಬರು ಅಧಿಕಾರಿಗಳದ್ದು ಎನ್ನಲಾದ ಆಡಿಯೋ ವೈರಲ್‌

Team Udayavani, Jul 10, 2024, 6:50 AM IST

Valmiki ನಿಗಮ ಅಕ್ರಮಕ್ಕೆ ಮೇಲಿನಿಂದ ಒತ್ತಡ ಕಾರಣ?

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮಕ್ಕೆ “ಮೇಲಿನಿಂದ’ ಒತ್ತಡ ಕಾರಣವೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಹಗರಣಕ್ಕೆ ಸಂಬಂಧಿಸಿ ಎಸ್‌ಐಟಿ ಬಲೆಗೆ ಬಿದ್ದಿರುವ ಲೆಕ್ಕ ಪರಿಶೋಧಕ ಪರಶುರಾಮ್‌ ಮತ್ತು ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್‌ ನಡುವೆ ನಡೆದಿರುವುದು ಎನ್ನಲಾದ ಮಾತುಕತೆಯ ಆಡಿಯೋ.

ನಿಗಮದ ಅಧಿಕಾರಿ, ಶಿವಮೊಗ್ಗದ ಚಂದ್ರಶೇಖರ್‌ ಸಾವಿಗೂ 2 ದಿನ ಮುಂಚೆ ಪದ್ಮನಾಭ್‌ ಬೆಂಗಳೂರಿನ ಹೊಟೇಲ್‌ ಒಂದರಲ್ಲಿ ಲೆಕ್ಕ ಪರಿಶೋಧಕ ಪರಶುರಾಮ್‌ ಅವರನ್ನು ಕರೆಸಿಕೊಂಡು ಗೌಪ್ಯ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಈ ಮಾತುಕತೆಯ ಆಡಿಯೋ ವೈರಲ್‌ ಆಗಿದೆ. ಆಡಿಯೋದಲ್ಲಿ, “ಮಿನಿಸ್ಟರ್‌ ಆಫೀಸಿನಿಂದ ಹೇಳಿದ್ರು’, “ನಾಗರಾಜ್‌ (ನೆಕ್ಕುಂಟಿ ನಾಗರಾಜ…) ಕಡೆಯಿಂದ ಪ್ರಶರ್‌ ಬಂತು’ ಎಂಬೆಲ್ಲ ಮಾತುಗಳು ಇದ್ದು, ಅನುಮಾನಕ್ಕೀಡು ಮಾಡಿವೆ.

ವೈರಲ್‌ ಆದ ಆಡಿಯೋದಲ್ಲಿ ಏನಿದೆ?
ಪದ್ಮನಾಭ್‌: ಕ್ಯಾಶ್‌ ಬುಕ್‌ ನೋಡಬೇಕೆಂದು ಯಾರು ಕರೆ ಮಾಡಿದ್ದು, ಏನಂತೆ?
ಪರಶುರಾಮ್‌: ಸುನಿಲ್‌. 2 ಕೋಟಿ ಬಂದಿದೆ ಎಂದರು ಸರ್‌ ಮೇಡಂ. ನಕ್ಕುಂಟಿ ನಾಗರಾಜ್‌ ಕಡೆಯವರನ್ನು ನಮ್ಮ ಮುಂದೆ ಮಾಡುತ್ತಾರೆ ಎಂದು ಏನು ಗ್ಯಾರಂಟಿ? ನಿಮ್ಮ ಸಂಪರ್ಕದಲ್ಲಿ ಯಾರಿದ್ದಾರೆ ಸರ್‌?
ಪದ್ಮನಾಭ್‌: ಅದೇ ನಾಗರಾಜ್‌ ಬಾಮೈದ.
ಪರಶುರಾಮ್‌: ನಾನ್‌ ಅವತ್ತೆ ಹೇಳಿದ್ದೆ ಸರ್‌ ಬೇಡ ಅಂತಾ.
ಪದ್ಮನಾಭ್‌: ನಾವು ಅದನ್ನ ಹೇಳಲೇಬಾರದು, ಮಿನಿಸ್ಟರ್‌ ಆಫೀಸಿನಿಂದ ಹೇಳಿದ್ರು, ನಾಗರಾಜ್‌ (ನೆಕ್ಕುಂಟಿ ನಾಗರಾಜ…) ಕಡೆ
ಯಿಂದ ಪ್ರಶರ್‌ ಬಂತು. ನಾವು ಇದ್ದ ಅಕೌಂಟ್‌ ಟ್ರಾನ್ಸ್‌ಫ‌ರ್‌ ಮಾಡಿ ಕೊಟ್ಟಿದ್ದೇವೆ. ಎಲ್ಲ ಫೇಕ್‌ ಸಿಗ್ನೇಚರ್‌ ಎಂಬುದು ನಿಜಾನಾ? ದುಡ್ಡು ಬಂದ ಮೇಲೆ ಆ್ಯಕ್ಷನ್‌ ತೆಗೆದುಕೊಳ್ಳೋಣ.
ಪರಶುರಾಮ್‌: ಪ್ರಾಬ್ಲಿಂ ಆಗತ್ತೆ ಸರ್‌, ಬ್ಯಾಂಕಿನವರು ಕೇಸ್‌ ಮಾಡಿದ್ರೆ, ನಮ್ಮ ದುಡ್ಡು ನಮಗೆ ಕೊಡುತ್ತಾರಾ ಅವರು ಅಂತಾ?
ಪದ್ಮನಾಭ್‌: ಈಗ ಅಧ್ಯಕ್ಷರಿಗೆ ಹೇಳ್ಳೋದಾ ಬೇಡ್ವಾ? ಅಧ್ಯಕ್ಷರಿಗೆ ಹೇಳಿದರೆ ದೊಡ್ಡ ರಾದ್ಧಾಂತ ಮಾಡುತ್ತಾರೆ. ಸೋಮವಾರ ಮಂಗಳವಾರ, ಬುಧವಾರ 3 ದಿನ ಬಿಡೋಣ. ಇವತ್ತು ಒಂದು ದಿನ ಮ್ಯಾನೇಜ್‌ ಮಾಡಿ ಕಳಿಸಿ. ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಅಕೌಂಟು ತೋರಿ ಸದೇ ಮ್ಯಾನೇಜ್‌ ಮಾಡೋಕಾಗಲ್ವಾ?
ಪರಶುರಾಮ್‌: ಈಗ ಎಲ್ಲವೂ ಗೊತ್ತಾಗುತ್ತಲ್ವ ಸರ್‌. ಮಾಡಬಹುದು ಸರ್‌.
ಪದ್ಮನಾಭ್‌: ಗೊತ್ತಾಗದಂತೆ, ಈಗಿರುವ ಅಮೌಂಟ್‌ಗೆ ಲೆಟರ್‌ ಕೊಟ್ಟು ಬೇರೆ ಅಕೌಂಟ್‌ಗೆ ಟ್ರಾನ್ಸ್‌ಫ‌ರ್‌ ಮಾಡುವುದು.
ಪದ್ಮನಾಭ: ಚಂದ್ರಶೇಖರನ್‌ ಎಲ್ಲವನ್ನೂ ಸ್ಟೇಟ್ಮೆಂಟ್ ತರಿಸುವವನು ಮಾ. 31ಕ್ಕೆ ಇದನ್ನ ಯಾಕೆ ತರಿಸಿಲ್ಲ? ಚೆಕ್‌ಬುಕ್‌ ಬಂದಿಲ್ಲ ಎಂದು ಏಕೆ ಕೇಳಿಲ್ಲ.
ಪರಶುರಾಮ್‌: ಅವನದ್ದೂ ತಪ್ಪಿದೆ ಸರ್‌, ಅವನು ಭಾಗಿಯಾಗಿದ್ದಾನೋ, ನೆಗ್ಲಿಜಿನ್ಸಿನೋ ಗೊತ್ತಿಲ್ಲ.
ಪದ್ಮನಾಭ:ಮಾಹಿತಿ ಕೊಟ್ಟಿರುತ್ತಾನೆ. ನಮ್ಮದೆಲ್ಲ ಹಿಂದೆ ಇರುತ್ತೆ ಅಂತಾ ಕೊಟ್ಟವರು ಯಾರು?
ಪರಶುರಾಮ್‌: ಎಲ್ಲ ಖಾತೆ ಕ್ಲೋಜ್‌ ಮಾಡಿ ಖಜಾನೆಗೆ ಹಾಕಬಹುದು ಸರ್‌.

ಸಚಿವರ ಹೆಸರು ತಳುಕು ?
ಪರಶುರಾಮ್‌:
ನಕ್ಕುಂಟೆ ನಾಗರಾಜ್‌ ಅಕೌಂಟ್‌ ಓಪನ್‌ ಮಾಡಿರುವುದು ಮಿನಿಸ್ಟರ್‌ ಗಮನಕ್ಕಿಲ್ವ ಸರ್‌?
ಪದ್ಮನಾಭ್‌: ಅದು ಗೊತ್ತು ಅವರಿಗೆ. ಅವರೇ ಅಲ್ವ ಕರೆಸಿ ಮಾತನಾಡಿಸಿದ್ದು. ನಿನ್ನೆಯೂ ಅಕೌಂಟ್‌ ಟ್ರಾನ್ಸ್‌ಫ‌ರ್‌ಗೆ ಕರೆ ಮಾಡಿದ್ದರಲ್ಲ.
ಪರಶುರಾಮ್‌: 5 ಕೋಟಿ ಹಾಕಿದ್ದರು ಅವರು.

 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.