Valmiki; ರಾಯಚೂರು ವಿಶ್ವವಿದ್ಯಾನಿಲಯಕ್ಕೆ ವಾಲ್ಮೀಕಿ ಹೆಸರು: ಸಿಎಂ ಸಿದ್ದರಾಮಯ್ಯ

ಹೋಬಳಿಗೆ ಒಂದರಂತೆ ವಸತಿ ಶಾಲೆ: ಮುಖ್ಯಮಂತ್ರಿ ಘೋಷಣೆ

Team Udayavani, Oct 18, 2024, 12:32 AM IST

SIddaramaih 2

ಬೆಂಗಳೂರು: ರಾಯಚೂರು ವಿಶ್ವವಿದ್ಯಾನಿಲಯವನ್ನು “ಮಹರ್ಷಿ ವಾಲ್ಮೀಕಿ’ ಹೆಸರಿನಲ್ಲಿ ಮರು  ನಾಮ ಕರಣ  ಗೊಳಿಸುವುದರ ಜತೆಗೆ ಪ್ರತೀ ಹೋಬಳಿಗೆ ಒಂದರಂತೆ ವಸತಿ ಶಾಲೆಗಳನ್ನು ತೆರೆಯಲು ನಿರ್ಧರಿಸ ಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರು ವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ವರ್ಷದಲ್ಲಿ 20 ವಸತಿ ಶಾಲೆಗಳನ್ನು ಆರಂಭಿಸ ಲಾಗುತ್ತಿದೆ. ಅದರಲ್ಲಿ 4 ಪರಿಶಿಷ್ಟ ಪಂಗಡದ ಶಾಲೆಗಳಿದ್ದು, ಅವುಗಳಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಲಾಗುವುದು. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದ ಜನಸಂಖ್ಯೆಗೆ ಅನು ಗುಣವಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ರೂಪಿಸಿ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟಿದ್ದು ನಮ್ಮದೇ ಸರಕಾರ. ತಳ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಈಗ ವಾಲ್ಮೀಕಿ ಅವರಿಗೆ ಗೌರವ ಸೂಚಕವಾಗಿ ರಾಯಚೂರು ವಿ.ವಿ.ಗೆ ಮರು ನಾಮಕರಣ ಮಾಡಲಾಗುವುದು. ಜತೆಗೆ ಮುಂದಿನ 2 ವರ್ಷದೊಳಗೆ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲೂ ವಸತಿ ಶಾಲೆ ತೆರೆಯಲಾಗುವುದು ಎಂದು ಭರವಸೆ ನೀಡಿದರು.

ದೇಶದಲ್ಲಿ ಮಹಾನ್‌ ಕಾವ್ಯಗಳಾದ ಮಹಾಭಾರತ ಬರೆದ ವ್ಯಾಸರು, ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ, ಶಾಕುಂತಲಾ ನಾಟಕ ಬರೆದ ಕಾಳಿದಾಸ ಎಲ್ಲರೂ ತಳಸಮುದಾಯದವರೇ. ಶೂದ್ರರು, ಶೋಷಿತರಿಗೆ ಸಂಸ್ಕೃತ ಕಲಿಕೆ ನಿಷಿದ್ಧವಾಗಿದ್ದ ಹೊತ್ತಿನಲ್ಲೇ ಮಹರ್ಷಿ ವಾಲ್ಮೀಕಿ ಅವರು ಸಂಸ್ಕೃತ ಕಲಿತು 24 ಸಾವಿರ ಶ್ಲೋಕವುಳ್ಳ ಜಗತøಸಿದ್ಧ ರಾಮಾಯಣ ಮಹಾಕಾವ್ಯ ರಚಿಸಿದ್ದಾರೆ. ಆದರೆ ವಾಲ್ಮೀಕಿ ದರೋಡೆ ಮಾಡಿಕೊಂಡಿದ್ದ ಎಂದೆಲ್ಲ ಕಥೆ ಕಟ್ಟಿದರು. ಹಾಗಿದ್ದಲ್ಲಿ ಇಂತಹ ಮಹಾನ್‌ ಕಾವ್ಯ ರಚಿಸಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಲೋಕೋ ಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು. ಬುಡಕಟ್ಟು ಕ್ಷೇತ್ರದಲ್ಲಿ ದುಡಿದ ಚಿತ್ರದುರ್ಗದ ಗಡ್ಡದಾರ ಹಟ್ಟಿಯ ಕಿಲಾರಿ ಜೋಗಯ್ಯ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರಿನ ಕೆ.ಎಸ್‌. ಮೃತ್ಯುಂಜಯ, ಚಾಮರಾಜನಗರದ ರತ್ನಾ ಎಸ್‌. ಹಾಗೂ ವಿಜಯನಗರದ ರಂಗಭೂಮಿ ಕಲಾವಿದೆ ರತ್ನಮ್ಮ ಬಿ. ಸೋಗಿ ಅವರಿಗೆ ಪ್ರಶಸ್ತಿಯ ಜತೆಗೆ 20 ಗ್ರಾಂ ಬಂಗಾರದ ಪದಕ ಹಾಗೂ 5 ಲಕ್ಷ ರೂ. ನಗದು ನೀಡಿ ಗೌರವಿಸಲಾಯಿತು.

ಅದ್ದೂರಿ ಮೆರವಣಿಗೆ
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿಧಾನಸೌಧ ಮುಂಭಾಗ ಶಾಸಕರ ತಪೋವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಮೊದಲು ಬಸವಗುಡಿಯ ಬಸವೇಶ್ವರ ವೃತ್ತದಿಂದ ಅಲಂಕೃತ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ವೀರಗಾಸೆ, ಸೋಮನಕುಣಿತ, ಚೆಂಡೆವಾದನ ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ಬುಡಕಟ್ಟು ಸಮುದಾಯದ ವೇಷಭೂಷಣಗಳು ಮೆರವಣಿಗೆಗೆ ರಂಗು ತುಂಬಿದವು. ರಸ್ತೆ ಮಾರ್ಗದಲ್ಲಿ ಜನತೆ ಮೆರವಣಿಗೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಮುಖ್ಯಮಂತ್ರಿ ಹೇಳಿದ್ದು
ಪ್ರಸಕ್ತ ವರ್ಷ ಒಟ್ಟು 20 ವಸತಿ ಶಾಲೆ ಆರಂಭ
ಈ ಪೈಕಿ 4 ಪರಿಶಿಷ್ಟ ಪಂಗಡದ ವಸತಿ ಶಾಲೆಗೆ ವಾಲ್ಮೀಕಿ ಹೆಸರು
ತಳ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ ಉದ್ದೇಶ
ಮಹಾಕಾವ್ಯ ರಾಮಾಯಣ, ಮಹಾಭಾರತ ಬರೆದವರೆಲ್ಲ ತಳ ಸಮುದಾಯವರು

ಟಾಪ್ ನ್ಯೂಸ್

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

supreme-Court

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

ಜೈಲಿನಲ್ಲಿ ಮೊಬೈಲ್‌ ರಿಂಗಣ : ಅಧೀಕ್ಷಕರ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಜೈಲಿನಲ್ಲಿ ಮೊಬೈಲ್‌ ರಿಂಗಣ : ಅಧೀಕ್ಷಕರ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಸಂವಿಧಾನ ವಿರೋಧಿ ಸಾವರ್ಕರ್‌ ಬಿಜೆಪಿ ಗುರು: ಸಿಎಂ ಸಿದ್ದರಾಮಯ್ಯ ಆಕ್ರೋಶ

Congress: ಸಂವಿಧಾನ ವಿರೋಧಿ ಸಾವರ್ಕರ್‌ ಬಿಜೆಪಿ ಗುರು: ಸಿಎಂ ಸಿದ್ದರಾಮಯ್ಯ ಆಕ್ರೋಶ

ವರ್ಷಾಂತ್ಯಕ್ಕೆ ಕಾಂಗ್ರೆಸ್‌ ಸಂಘಟನೆಗೆ 10 ಲಕ್ಷ ಮಹಿಳೆಯರು: ಅಲ್ಕಾ ಲಂಬಾ

Congress: ವರ್ಷಾಂತ್ಯಕ್ಕೆ ಕಾಂಗ್ರೆಸ್‌ ಸಂಘಟನೆಗೆ 10 ಲಕ್ಷ ಮಹಿಳೆಯರು: ಅಲ್ಕಾ ಲಂಬಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.