![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 8, 2022, 7:44 PM IST
ಹುಣಸೂರು : ಹುಣಸೂರು ನಗರದ 28ನೇ ವಾರ್ಡಿನ ಮಂಜುನಾಥ ಬಡಾವಣೆಯ ಜನನಿಬಿಡ ಪ್ರದೇಶ ಹಾಗೂ ಶಾಲೆ ಪಕ್ಕದಲ್ಲೇ ಅನಧಿಕೃತವಾಗಿ ಮೊಬೈಲ್ ಟವರ್ ಅಳವಡಿಸಲು ಮಂದಾಗಿರುವುದನ್ನು ವಿರೋಧಿಸಿ ಸುತ್ತಮುತ್ತಲ ನಿವಾಸಿಗಳೊಡಗೂಡಿ ನಗರಸಭೆ 28ನೇ ವಾರ್ಡ್ ನ ಸದಸ್ಯೆ ರಾಧ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಮಂಜುನಾಥ ಬಡಾವಣೆಯ ನಿವಾಸಿಯೊಬ್ಬರ ಮನೆ ಬಳಿ ಯಾವುದೇ ಅನುಮತಿ ಪಡೆಯದೆ ಟವರ್ ಅಳವಡಿಸಲು ಸಿದ್ದತೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದ ನಾವುಗಳು ಅವರಿಗೆ ಇಲ್ಲಿ ಟವರ್ ಅಳವಡಿಸುವುದು ಬೇಡವೆಂದು ಸೂಚಿಸಿದಾಗ ಅಳವಡಿಸಲ್ಲವೆಂದು ಒಪ್ಪಿಕೊಂಡಿದ್ದರೂ ಮತ್ತೆ ಟವರ್ ಅಳವಡಿಸಲು ಮುಂದಾಗಿದ್ದಾರೆ. ಪಕ್ಕದಲ್ಲೇ ಶಾಲೆ ಇದೆ, ಹಾಗೂ ಸುತ್ತಮುತ್ತಲಿನಲ್ಲಿ ಮನೆಗಳಿವೆ ಟವರ್ ಅಳವಡಿಕೆಯಿಂದ ನಾಗರೀಕರು, ಮಕ್ಕಳು,ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಹಾಗೂ ಪರಿಸರಕ್ಕೂ ಹಾನಿಯಾಗುವ ಹಿನ್ನೆಲೆಯಲ್ಲಿ ನಗರಸಭೆಗೆ ನಿರಪೇಕ್ಷಣಾ ಪತ್ರ ಹಾಗೂ ಪರವಾನಗಿಗೆ ಅರ್ಜಿ ಬಂದಲ್ಲಿಯೂ ಟವರ್ ಅಳವಡಿಸಲು ಅನುಮತಿ ನೀಡಬಾರದೆಂದು, ಅನುಮತಿ ನೀಡಿದ್ದೇ ಆದಲ್ಲಿ ಮುಂದೆ ಶಾಲಾ ಮಕ್ಕಳು, ಸುತ್ತಮುತ್ತಲ ನಿವಾಸಿಗಳೊಳಗೂಡಿ ಪ್ರತಿಭಟನೆ ಹಾದಿ ಹಿಡಿಯಬೇಕಾದೀತೆಂದು ಸದಸ್ಯೆ ರಾಧಾ ಎಚ್ಚರಿಸಿದ್ದಾರೆ.
ಪ್ರತಿಭಟನೆ:
ಈ ಸಂಬಂಧ ವಾರ್ಡ್ ನಗರಸಭೆ ಸದಸ್ಯೆ ರಾಧ, ಜಿ.ಎನ್.ರಾಜೇಶ್, ಕಿರಂಗೂರು ಬಸವರಾಜ್, ಶ್ರೀನಿವಾಸ್, ಕಾಕಡೆಲೋಕೇಶ್, ಪದ್ಮ, ಚಂದ್ರಪ್ರಭ ಸೇರಿದಂತೆ ಸುತ್ತಮುತ್ತಲ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ : ಉಡುಪಿ: ಎಟಿಎಂ ಒಡೆಯಲು ಯತ್ನಿಸಿದ 19 ವರ್ಷದ ಯುವಕನ ಬಂಧನ
ತಡೆ ನೀಡಿದೆ;
ಮಂಜುನಾಥ ಬಡಾವಣೆಯಲ್ಲಿ ಅನಧಿಕೃತವಾಗಿ ಟವರ್ ಅಳವಡಿಸುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ಇತ್ತು ಅಳವಡಿಸದಂತೆ ಎಚ್ಚರಿಕೆ ನೀಡಿ, ತಡೆ ಹಿಡಿಯಲಾಗಿದೆ. ಟವರ್ ಅಳವಡಿಸುವ ಕಂಪನಿಯವರು ಅರ್ಜಿ ಸಲ್ಲಿಸಿದಲ್ಲಿ ಕಾನೂನು ರೀತ್ಯ ಕ್ರಮವಹಿಸಲಾಗುವುದೆಂದು ನಗರಸಭೆ ಪೌರಾಯುಕ್ತ ರವಿಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.