India’s Largest Amusement park: ಬೆಂಗಳೂರು ವಂಡರ್ಲಾಗೆ 18 ನೇ ವಾರ್ಷಿಕೋತ್ಸವದ ಸಂಭ್ರಮ
ಚೆನ್ನೈ ಮತ್ತು ಭುವನೇಶ್ವರದಲ್ಲೂ ವಂಡರ್ಲಾ ವಿಸ್ತರಿಸಲು ಯೋಜನೆ
Team Udayavani, Oct 13, 2023, 9:25 PM IST
ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ ಹಾಲಿಡೇಸ್ ಲಿಮಿಟೆಡ್, ಬೆಂಗಳೂರಿನಲ್ಲಿ ತನ್ನ 18 ನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆಗಳನ್ನು ಘೋಷಿಸಿದೆ.
2005ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ವಂಡರ್ಲಾ, ಅಂದಿನಿಂದ ಇಂದಿನವರೆಗೂ ಸಾಕಷ್ಟು ಹೊಸಹೊಸ ಗೇಮ್ ಗಳನ್ನು ಪರಿಚಯಿಸಿದ್ದು ಮನರಂಜನೆ ನೀಡುತ್ತಾ ಬಂದಿದೆ.
ತನ್ನ 18 ನೇ ವಾರ್ಷಿಕೋತ್ಸವದಂದು, ವಂಡರ್ಲಾ ತನ್ನ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ
ಇದಲ್ಲದೆ, ವಂಡರ್ಲಾ ಬೆಂಗಳೂರು ಅ.14 ರಿಂದ 24 ರವರೆಗೆ ದಸರಾ ಹಬ್ಬವನ್ನು ಆಯೋಜಿಸಿದೆ.
ಪ್ರವಾಸಿಗರಿಗೆ ಮಂಗಳೂರು ಗೊಂಬೆ ಕುಣಿತ, ಭವ್ಯವಾದ ಮೆರವಣಿಗೆ, ಚಿಂಗಾರಿ ಮೇಳ, ಆಹಾರೋತ್ಸವ, ಡಿಜೆ ಮತ್ತು ಹೆಚ್ಚಿನವು ಸೇರಿದಂತೆ ಅತ್ಯಾಕರ್ಷಕ ಚಟುವಟಿಕೆಗಳಿಂದ ತುಂಬಿದ 11 ದಿನಗಳ ಕಾರ್ಯಕ್ರಮದಲ್ಲಿ ಆಯೋಜಿಸಿದೆ.
ಲಕ್ಕಿ ಡ್ರಾ ಸ್ಪರ್ಧೆ: ಅಕ್ಟೋಬರ್ 14 ರಿಂದ 24 ರವರೆಗೆ ವಂಡರ್ಲಾ ಪ್ರತಿದಿನ ಲಕ್ಕಿ ಡ್ರಾ ಸ್ಪರ್ಧೆಯನ್ನು ನಡೆಸಲಿದೆ, ಏಥರ್ ದ್ವಿಚಕ್ರ ವಾಹನವನ್ನು ಸ್ವೀಕರಿಸಲು ಪ್ರತಿ ದಿನ ಒಬ್ಬ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ವಂಡರ್ಲಾ 180 ಹಿಂದುಳಿದ ವರ್ಗಗಳ ಮಕ್ಕಳನ್ನು ಉದ್ಯಾನವನದಲ್ಲಿ ಮನರಂಜನೆ ಪಡೆಯಲು ಆಯ್ಕೆ ಮಾಡಿದೆ, ಅವರಿಗೆ ಪೂರಕ ಪ್ರವೇಶ ಟಿಕೆಟ್ ಗಳು, ಉಚಿತ ಊಟ, ಹೈ ಟೀ ಮತ್ತು ಅನುಕೂಲಕ್ಕಾಗಿ ಲಾಕರ್ ಒದಗಿಸುತ್ತದೆ.
ವಂಡರ್ ಲಾ ಹಾಲಿಡೇಸ್ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ವಂಡರ್ಲಾ ಬೆಂಗಳೂರು ಉದ್ಯಾನವನವು ಸುಮಾರು 82 ಎಕರೆ ವಿಸ್ತೀರ್ಣ ಮತ್ತು ಒಟ್ಟು 1.2 ಮಿಲಿಯನ್ ಫುಟ್ಫಾಲ್ ಗಳನ್ನು ಹೊಂದಿರುವ ಈ ಅಮ್ಯೂಸ್ಮೆಂಟ್ ಪಾರ್ಕ್ 28 ಡ್ರೈ ಗೇಮ್ಸ್, 21 ವಾಟರ್ ಗೇಮ್ಸ್ ಮತ್ತು 12 ಮಕ್ಕಳ ಸ್ನೇಹಿ ಗೇಮ್ಸ್ ಒಳಗೊಂಡಂತೆ ಒಟ್ಟು 61 ವೈವಿಧ್ಯಮಯ ರೋಮಾಂಚಕ ಸವಾರಿಗಳನ್ನು ಹೊಂದಿದೆ. ಹೈ ಥ್ರಿಲ್ ರೋಲರ್ ಕೋಸ್ಟರ್ ಗಳಿಂದ ಹೃದಯ ಬಡಿತದ ಫ್ಲ್ಯಾಶ್ ಟವರ್, ವಂಡರ್ ಸ್ಪ್ಲಾಶ್ ಮತ್ತು ಇತರೆ ಅದ್ವಿತೀಯ ಆಟಿಕೆಗಳನ್ನು ಹೊಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
MUST WATCH
ಹೊಸ ಸೇರ್ಪಡೆ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್; ವಿದ್ಯಾರ್ಥಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.