ಯಕ್ಷಗಾನ ಬಯಲಾಟ ಪುಸ್ತಕ ಬಹುಮಾನ ಪ್ರಕಟ


Team Udayavani, Aug 2, 2017, 8:40 AM IST

yakshagana.jpg

ಬೆಂಗಳೂರು: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2014, 2015 ಮತ್ತು 2016ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಗೊಂಡಿದ್ದು, ಒಟ್ಟು ಆರು ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

2014ನೇ ಸಾಲಿನ ಪುಸ್ತಕ ಬಹುಮಾನಕ್ಕೆ ದಕ್ಷಿಣ ಕನ್ನಡದ ಸೂರತ್ಕಲ್‌ನ ಸೇರಾಜೆ ಸೀತಾರಾಮ ಭಟ್ಟ(ಯಕ್ಷಗಾನ ಪ್ರಸಂಗ ಪಂಚಕ), ಪುತ್ತೂರಿನ ರವಿಶಂಕರ್‌ ವಳಕ್ಕುಂಜ (ಯಕ್ಷಗಾನ ವಾಚಿಕ ಸಮಾರಾಧನೆ) ಅವರ ಕೃತಿಗಳು ಆಯ್ಕೆಯಾಗಿವೆ. 2015ನೇ ಸಾಲಿನಲ್ಲಿ ಬಂಟ್ವಾಳದ ಎಸ್‌.ವಿ.ಎಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ
ಡಾ.ನಾಗವೇಣಿ ಮಂಚಿ (ಬಲಿಪ ಗಾನಯಾನ) ಕೃತಿ ಮತ್ತು 2016ನೇ ಸಾಲಿನಲ್ಲಿ ಕಾಸರಗೋಡಿನ ಕುಂಬ್ಳೆಯ ಶೇಡಿಗುಮ್ಮೆ ವಾಸುದೇವ ಭಟ್ಟ (ಯಕ್ಷ ಕುಸುಮ), ಉಡುಪಿ ಜಿಲ್ಲೆಯ ಡಾ.ಪಾದೇಕಲ್ಲು ವಿಷ್ಣು ಭಟ್ಟ (ಯಕ್ಷಗಾನಾಧ್ಯಯನ), ಮಂಗಳೂರಿನ ಬೊಟ್ಟೆಕೆರೆ ಪುರುಷೋತ್ತಮ ಪೂಂಜರ (ಅಂಬುರಹ-ಲವ) ಅವರ ಕೃತಿಗಳನ್ನು
ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯಪುರದ ಚನ್ನಪ್ಪರಾಮಪ್ಪ ಹೆಗಡಿ (ಬಯಲಾಟ), ಮುಧೋಳದ ಸಿದ್ದಪ್ಪ ಅಮ್ಮಣ್ಣ ತಳಿವಾಡ (ಶ್ರೀಕೃಷ್ಣ ಪಾರಿಜಾತ), ಬಳ್ಳಾರಿ ಜಿಲ್ಲೆ ಹೊಸಪೇಟೆಯ ಮಾರೆಪ್ಪ ಮೆಟ್ರಿ (ಬಯಲಾಟ), ಹಾವೇರಿಯ ಫ‌ಕೀರಪ್ಪ ಬಸವಣ್ಣೆಪ್ಪ ಗೌರಕ್ಕನವರ್‌ (ದೊಡ್ಡಾಟ), ತುರುವೇಕೆರೆಯ ಪುಟ್ಟಸ್ವಾಮಯ್ಯ (ತೊಗಲು ಗೊಂಬೆಯಾಟ), ಬೆಂಗಳೂರಿನ
ಎಂ.ಆರ್‌.ರಂಗನಾಥರಾವ್‌ ಮತ್ತು ಮಂಡ್ಯ ಜಿಲ್ಲೆ ನಾಗಮಂಗಲದ ತಿಮ್ಮಪ್ಪಾಚಾರ್ಯ (ಸೂತ್ರದಗೊಂಬೆಯಾಟ) ಅವರ ಜೀವನ ಸಾಧನೆ ಗುರುತಿಸಿ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಸಾಧಕರ ಸಾಕ್ಷ್ಯಚಿತ್ರಗಳನ್ನು
ನಿರ್ಮಿಸಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ
ಬೆಳಗಲ್ಲು ವೀರಣ್ಣ, 2014ರಿಂದ 16ರವರೆಗಿನ ಪುಸ್ತಕ ಪ್ರಶಸ್ತಿಗಳ ವಿತರಣೆ ಮತ್ತು ಸಾಕ್ಷ್ಯಚಿತ್ರಗಳ ಬಿಡುಗಡೆ ಸಮಾರಂಭ ಆ.5ರಂದು ಸಂಜೆ 5ಕ್ಕೆ ಬಾಗಲಕೋಟೆಯ ನವನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸಮಾರಂಭ ಉದ್ಘಾಟಿಸುವರು. ಬಾಗಲಕೋಟೆ
ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಕಾಡೆಮಿ ಸಾಧನೆ ಕುರಿತ ಪುಸ್ತಕ ಬಿಡುಗಡೆ ಮಾಡುವರು. ಜಾನಪದ ತಜ್ಞ ಡಾ.ಶ್ರೀರಾಮ ಇಟ್ಟಣ್ಣನವರ್‌ ನಿಜಗುಣ ಶಿವಯೋಗಿ ಪುಸ್ತಕ ಬಿಡುಗಡೆ ಮಾಡುವರು ಎಂದು ತಿಳಿಸಿದರು.

ಅಂದು ಸಂಜೆ 3.30ಕ್ಕೆ ಪುಸ್ತಕ ಪುರಸ್ಕೃತರು, ಸಾಕ್ಷ್ಯಚಿತ್ರ ಕಲಾವಿದರು ಹಾಗೂ ಪುಸ್ತಕದ ರಚನಕಾರರೊಂದಿಗೆ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ಸಾಕ್ಷ್ಯಚಿತ್ರ ಸಿಡಿಗಳ ಬಿಡುಗಡೆ ಸಮಾರಂಭದಲ್ಲೇ ಡಾ.ಸಿ.ಕೆ.ನಾವಲಗಿ ಸಂಪಾದಿಸಿರುವ ಶಿವಾನಂದಕವಿ ವಿರಚಿತ ಕನ್ನಡ ಬಯಲಾಟ ಜಿನಗುಣ ಶಿವಯೋಗಿ
(ಡಪ್ಪಿನಾಟ-ಸಣ್ಣಾಟ) ಪುಸ್ತಕ ಬಿಡಗಡೆಯಾಗಲಿದೆ. ಬಳಿಕ ನಾಡೋಜ ಎಲ್ಲವ್ವ ರೊಡ್ಡಪ್ಪನವರ್‌ ಅವರ ಶ್ರೀಕೃಷ್ಣ ಪಾರಿಜಾತ, ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಲಲಿತತ್ವ ರಾ.ಪಾತ್ರೋಟ ಅವರ “ಸಂಗ್ಯಾಬಾಳ್ಯ’ ಸಣ್ಣಾಟ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌.ಎಚ್‌.ಶಿವರುದ್ರಪ್ಪ, ಸದಸ್ಯ ಬಿ.ಎಂ.ಗುರುನಾಥ್‌ ಇದ್ದರು. 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.