![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 20, 2020, 11:31 AM IST
ಬೆಂಗಳೂರು: ಪಾದರಾಯನಪುರಕ್ಕೆ ರಾತ್ರಿ ವೇಳೆ ಹೋಗುವುದು ಬೇಡ ಎಂದು ಬಿಬಿಎಂಪಿ ಆಯುಕ್ತರಿಗೆ ಹೇಳಿದ್ದೆ. ಬೆಳಿಗ್ಗೆ ಹೋಗಿದ್ದರೆ ಯಾವುದೇ ಗಲಾಟೆ ಆಗುತ್ತಿರಲಿಲ್ಲ ಎಂದು ಪಾದರಾಯನಪುರ ಗಲಾಟೆ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್ ಅಹಮದ್ ಹೇಳಿಕೆ ನೀಡಿದ್ದಾರೆ.
ಪಾದರಾಯನಪುರ ಘಟನೆ ನಡೆಯಬಾರದಿತ್ತು. ಇದು ತಪ್ಪು ಇದನ್ನು ಖಂಡಿಸುತ್ತೇನೆ ಎಂದ ಅವರು, ಬೆಳಿಗ್ಗೆ ಹೋಗಿದ್ದರೆ ಗಲಾಟೆ ಆಗುತ್ತಿರಲಿಲ್ಲ. ರಾತ್ರಿ ಹೋಗುವುದು ತಪ್ಪು ಅಂತಾ ಹೇಳಲ್ಲ ಆದರೆ ನಮ್ಮಗಮನಕ್ಕೆ ತರಬೇಕಾಗಿತ್ತು. ಯಾರೇ ತಪ್ಪು ಮಾಡಿದ್ದರು ಕ್ರಮಕೈಗೊಳ್ಳಿ ಎಂದರು.
ಇದು ರಾಜಕೀಯ ಪಿತೂರಿ ಎಂದು ಟ್ವೀಟ್ ಬಗ್ಗೆ ಮಾತನಾಡಿದ ಜಮೀರ್, ನನ್ನ ಪಿಎ ಟ್ವೀಟ್ ಮಾಡಿದ್ದಾರೆ. ರಾಜಕೀಯ ಪಿತೂರಿಯಿಲ್ಲ ಎಂದು ಜಮೀರ್ ಸಮಜಾಯಿಷಿ ನೀಡಿದರು.
ಜಮೀರ್ ಅಹಮದ್ ರನ್ನು ಕ್ವಾರಂಟೈನ್ ಮಾಡಬೇಕು ಎಂಬ ರೇಣುಕಾಚಾರ್ಯ ಮಾತಿಗೆ ತಿರುಗೇಟು ನೀಡಿದ ಜಮೀರ್, ಮಾನವೀಯತೆ ದೃಷ್ಟಿಯಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದೆ. ಬೇಕಾದರೆ ರೇಣುಕಾಚಾರ್ಯ ಕ್ಷೇತ್ರದಲ್ಲೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.
You seem to have an Ad Blocker on.
To continue reading, please turn it off or whitelist Udayavani.