ಭೀಕರ ಭೂಕಂಪ: ತಾಯಿ, ಅಣ್ಣ, ಅಕ್ಕನನ್ನು ಕಳೆದುಕೊಂಡ 18 ತಿಂಗಳ ಪುಟ್ಟ ಬಾಲೆಯ ಆರ್ತನಾದ…


Team Udayavani, Feb 7, 2023, 11:00 AM IST

tdy-4

ಅಜಾಜ್‌ (‌ ಸಿರಿಯಾ): ಭೀಕರ ಭೂಕಂಪಕ್ಕೆ ಟರ್ಕಿ, ಸಿರಿಯಾ ದೇಶಗಳು ಅಕ್ಷರಶಃ ಸ್ಮಶಾನದಂತಾಗಿದೆ. 4 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಮನೆಯಲ್ಲಿ ಮಲಗಿದ್ದ, ಆಗಷ್ಟೇ ಎದ್ದು ಅಡುಗೆ ಮನೆಗೆ ಕೆಲಸಕ್ಕೆ ಹೊರಟ್ಟಿದ್ದ ಗೃಹಿಣಿಯರು, ಮೈಕೊರೆಯುವ ಚಳಿಗೆ ಬೆಚ್ಚಗೆಯ ಹೊದಿಕೆಯನ್ನು ಹೊತ್ತು ಮಲಗಿದ್ದ ಪುಟ್ಟ ಪುಟಾಣಿಗಳು ಒಮ್ಮೆಗೆ ಕಂಪಿಸಿದ ಭೂಮಿಗೆ ಶವವಾಗಿ ಹೋಗಿದ್ದಾರೆ. ನಿದ್ದೆಯಲ್ಲೇ ಇದ್ದ ಅದೆಷ್ಟೋ ಮಂದಿ ಸಾವಿನ ನಿದ್ದೆಗೆ ಜಾರಿದ್ದಾರೆ. ಯಾರೋ ಅದೆಲ್ಲೋ ಬಿದ್ದ ಕಟ್ಟಡದ ಅಡಿಯಿಂದ, ಕತ್ತಲ ಕೂಪದಿಂದ ಸಹಾಯ ಮಾಡಿ, ಉಸಿರು ಗಟ್ಟುತ್ತಿದೆ ಎಂದು ಕಿರುಚುತ್ತಿದ್ದಾರೆ. ಆದರೆ ಆ ಧ್ವನಿ ಹೊರಗೆ ಯಾರಿಗೂ ಕೇಳುತ್ತಿಲ್ಲ. ಮೈಮೇಲೆ ಇಡೀ ಕಟ್ಟಡವೇ ಬಿದ್ದು ನೋವಿನಲ್ಲಿ ಚೀರಾಟ ಮಾಡುತ್ತಿರುವ ವ್ಯಕ್ತಿಗಳು, ಮನೆಯೇ ಬಿದ್ದು, ಅಲ್ಲೇ ಸಮಾಧಿಯಾದ ಜನರು…

ಇದು ಟರ್ಕಿ, ಸಿರಿಯಾ ದೇಶದ ಭೂಕಂಪದ ಭಯಾನಕ, ಕರುಣಾಜನಕ ದೃಶ್ಯಗಳು. ಈ ಭೀಕರತೆಯಿಂದ ಬದುಕಿ ಬಂದವರು ಹಲವರಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗಳು ಸಾವಿರಾರು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಣೆಯಾದವರಲ್ಲಿ ಒಬ್ಬರು ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗು ರಘದ್ ಇಸ್ಮಾಯಿಲ್. ಚಳಿಗೆ ಹಾಕಿಕೊಂಡಿದ್ದ ಸ್ವೆಟರ್‌ ನಲ್ಲಿ ಧೂಳು ಮೆತ್ತಿಕೊಂಡಿದೆ. ಪುಟ್ಟ ಬಾಲೆಗೆ ಭೂಕಂಪ ಅಂದರೆ ಏನು ಅನ್ನೋದೇ ತಿಳಿದಿಲ್ಲ. ಆ ಭೀಕರತೆಯಿಂದ ರಕ್ಷಣೆಯಾಗಿ ಈಗ ಮಗು ಅವರ ಸಂಬಂಧಿಕರ ಕೈ ಸೇರಿದೆ.

ಸಿರಿಯಾದ ಪುಟ್ಟ ಬಾಲೆ ಈಗ ಅಂಕಲ್‌ ಮನೆಯಲ್ಲಿದೆ. ರಘದ್ ಇಸ್ಮಾಯಿಲ್ ಗೆ ಹಸಿವಾಗುತ್ತಿದೆ. ಆ ಹಸಿವಿಗೆ ತಾಯಿಯ ಎದೆ ಹಾಲು ಬೇಕು. ಅಳು ನಿಲ್ಲಿಸಿ, ಆಕೆಯೊಂದಿಗೆ ಆಡಲು ಅವಳ ಅಕ್ಕ, ಅಣ್ಣ ತಂಗಿ ಬೇಕು. ಆದರೆ ಅವರು ಯಾರೂ ಅವಳೊಂದಿಗೆ ಇಲ್ಲ. ಕಾರಣ ಭೀಕರ ಭೂಕಂಪಕ್ಕೆ ಅವರೆಲ್ಲಾ ಕೊನೆಯುಸಿರೆಳೆದಿದ್ದಾರೆ.

ರಘದ್ ಇಸ್ಮಾಯಿಲ್ ಅವರ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನಿಗೆ ತೀವ್ರತರದ ಏಟು ಬಿದ್ದಿದೆ. ಈ ನೋವಿನಲ್ಲೇ  ತನ್ನ ಗರ್ಭಿಣಿ ಪತ್ನಿ, 4 ವರ್ಷದ ಮಗ, 5 ವರ್ಷದ ಮಗಳು ಇನ್ನಿಲ್ಲ ಎನ್ನುವ ಅತ್ಯಂತ ಆಘಾತಕಾರಿ ಸುದ್ದಿ ತಲುಪಿದೆ.

ಭೀಕರತೆಯಿಂದ ಬದುಕುಳಿದ  ರಘದ್ ಇಸ್ಮಾಯಿಲ್ ತನ್ನ ಅಂಕಲ್‌ ಮನೆಯಲ್ಲಿ ಬ್ರೆಡ್‌ ತಿನ್ನುತ್ತಿರುವ ಫೋಟೋ ಈಗ ವೈರಲ್ ಆಗಿದೆ… ತನ್ನ ತಾಯಿ, ಅಕ್ಕ, ಅಣ್ಣ ಇಲ್ಲ ಎನ್ನುವ ಅರಿವೂ ಕೂಡ ಪುಟ್ಟ ಬಾಲೆಗೆ ಇಲ್ಲ.

ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವು ನೋವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟರ್ಕಿಯಲ್ಲಿ 7 ದಿನ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ.

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.