ಪಾಕ್ ಸೇರಿ 5 ಮುಸ್ಲಿಂ ರಾಷ್ಟ್ರಗಳಿಗೆ ಕುವೈತ್ ಬ್ಯಾನ್
Team Udayavani, Feb 3, 2017, 3:45 AM IST
– ಪಾಕಿಸ್ತಾನ, ಸಿರಿಯಾ, ಇರಾಕ್, ಅಫ್ಘಾನಿಸ್ತಾನ, ಇರಾನ್ ರಾಷ್ಟ್ರೀಯರಿಗೆ ವೀಸಾ ನಿಷೇಧ
– ಭಯೋತ್ಪಾದನೆ ವಿರುದ್ಧ ಕುವೈತ್ ಬಿಗಿ ನಿಲುವು
– 2015ರಲ್ಲಿ ಶಿಯಾ ಮಸೀದಿ ಸ್ಫೋಟದ ನಂತರ ಕಠಿಣ ಧೋರಣೆ
– ದಿಟ್ಟ ನಿರ್ಧಾರ ಕೈಗೊಂಡ ಮೊದಲ ಗಲ್ಫ್ ರಾಷ್ಟ್ರ ಕುವೈತ್
– ಪಾಕಿಸ್ತಾನ ಕುರಿತೂ ಧೋರಣೆ ಸಡಿಲಿಸದ ಮುಸ್ಲಿಂ ರಾಷ್ಟ್ರ
ಕುವೈತ್: ಭಯೋತ್ಪಾದನೆಯ ಕಾರಣದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ನಿಷೇಧ ಹೇರಿರುವುದು ಜಾಗತಿಕ ಮಟ್ಟದಲ್ಲಿ ಟೀಕೆಗೊಳಗಾಗಿದೆ. ಸ್ವತಃ ಅಮೆರಿಕದಲ್ಲಿಯೇ ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿದೆ. ಆದರೆ, ಸ್ವತಃ ಮುಸ್ಲಿಂ ಬಹುಸಂಖ್ಯಾತ ಗಲ್ಫ್ ರಾಷ್ಟ್ರವಾಗಿರುವ ಕುವೈತ್ ಈಗ ಟ್ರಂಪ್ ಮಾದರಿಯನ್ನು ಅನುಸರಿಸಿದೆ!
ಪಾಕಿಸ್ತಾನ, ಸಿರಿಯಾ, ಇರಾಕ್, ಅಫ್ಘಾನಿಸ್ತಾನ ಹಾಗೂ ಇರಾನ್ನ ರಾಷ್ಟ್ರಗಳ ನಾಗರಿಕರಿಗೆ ವೀಸಾ ಕೊಡದೇ ಇರಲು ಕುವೈತ್ ಸರ್ಕಾರ ನಿರ್ಧರಿಸಿದೆ. ಇದರಿಂದ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಅಮೆರಿಕ ಆರಂಭಿಸಿರುವ ಹೋರಾಟಕ್ಕೆ ಕುವೈತ್ ಕೈಗೂಡಿಸಿದಂತಾಗಿದೆ. ಅಲ್ಲದೇ, ಭಯೋತ್ಪಾದನೆ ಉತ್ಪಾದಿಸುತ್ತಿರುವ ದೇಶಗಳು ಎನ್ನಲಾದ ಮುಸ್ಲಿಂ ರಾಷ್ಟ್ರಗಳ ವಿರುದ್ಧ ಕಠಿಣ ನಿಲುವು ತಳೆದ ಪ್ರಥಮ ಗಲ್ಫ್ ರಾಷ್ಟ್ರ ಎಂಬ ಖ್ಯಾತಿಗೂ ಕುವೈತ್ ಒಳಗಾಗಿದೆ.
ಸಿರಿಯಾ ಹಾಗೂ ಇರಾಕ್ನಲ್ಲಿ ಸುನ್ನಿ ಉಗ್ರರಿಂದ ಮಾರಣ ಹೋಮ ಭುಗಿಲೆದ್ದಾಗಲೂ ಅಲ್ಲಿಂದ ಜೀವ ಉಳಿಸಿಕೊಳ್ಳಲು ಓಡಿಬಂದ ನಿರಾಶ್ರಿತರಿಗೆ ಕುವೈತ್ ತನ್ನ ಭೂಮಿಯೊಳಗೆ ಪ್ರವೇಶ ನಿರಾಕರಿಸಿತ್ತು. ಬಹುತೇಕ ಗಲ್ಫ್ ರಾಷ್ಟ್ರಗಳು ನಿರಾಶ್ರಿತರಿಗೆ ಆಶ್ರಯ ಕೊಡಲು ಮನಸ್ಸು ಮಾಡಿರಲಿಲ್ಲ. ಈ ಕುರಿತು ಜಾಗತಿಕ ಮಟ್ಟದಲ್ಲಿ ಭಾರೀ ಟೀಕೆ ವ್ಯಕ್ತವಾದರೂ ಪ್ರತಿಕ್ರಿಯಿಸಿರಲಿಲ್ಲ. ಆಗ ಯೂರೋಪಿಯನ್ ಒಕ್ಕೂಟ, ಅಮೆರಿಕ ಹಾಗೂ ಕೆನಡಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಆಶ್ರಯ ನೀಡಲು ಮುಂದೆ ಬಂದಿದ್ದವು.
ಕುವೈತ್ 2011ರಲ್ಲಿಯೇ ಎಲ್ಲ ಸಿರಿಯಾ ನಾಗರಿಕರ ವೀಸಾ ಅಮಾನತು ಮಾಡಿತ್ತು. 2015ರಲ್ಲಿ ಉಗ್ರರು ಶಿಯಾ ಮಸೀದಿ ಸ್ಫೋಟಿಸಿದಾಗ 27 ಕುವೈತಿ ನಾಗರಿಕರು ಬಲಿಯಾಗಿದ್ದರು. ಅಂದಿನಿಂದ ಉಗ್ರವಾದ ಕುರಿತು ಕುವೈತ್ ನಿಲುವು ಮತ್ತಷ್ಟು ಬಿಗಿಯಾಗಿದೆ. ಈಗ ಟ್ರಂಪ್ ಆರಂಭಿಸಿರುವ ನೇರ ಹೋರಾಟಕ್ಕೆ ಕೈಗೂಡಿಸಿದೆ.
ಇರಾಕ್, ಇರಾನ್, ಸಿರಿಯಾ, ಸೂಡಾನ್, ಲಿಬ್ಯಾ, ಸೋಮಾಲಿಯಾ ಹಾಗೂ ಯೆಮೆನ್ ದೇಶಗಳ ನಿರಾಶ್ರಿತ ನಾಗರಿಕರಿಗೆ ಅಮೆರಿಕ ಪ್ರವೇಶ ನಿರಾಕರಿಸಿದೆ. ಅಲ್ಲದೇ, ಅವರ ವೀಸಾಗಳನ್ನೂ ರದ್ದುಗೊಳಿಸಿದೆ. ತನ್ನದೇ ಮಕ್ಕಳು ಬಲಿಯಾಗುತ್ತಿದ್ದರೂ ಒಡಲಿನಲ್ಲಿಯೇ ಭಯೋತ್ಪಾದಕರನ್ನು ಸಾಕುತ್ತ, ತನ್ನದೇ ಬಲೂಚಿಸ್ತಾನೀಯರ ಮೇಲೆ ದೌರ್ಜನ್ಯ ಎಸಗುತ್ತ, ಭಾರತದ ಮೇಲೆ ಭಯೋತ್ಪಾದಕರನ್ನು ಛೂ ಬಿಟ್ಟು ಪರೋಕ್ಷ ಯುದ್ಧ ನಡೆಸುತ್ತಿರುವ ಪಾಕಿಸ್ತಾನಕ್ಕೂ ಪ್ರವೇಶ ನಿರಾಕರಿಸುವ ಕುರಿತು ಅಮೆರಿಕ ಯೋಚಿಸುತ್ತಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ
Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್ಗೆ ಪನ್ನು ದೂರು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ
Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ
Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್ ಗಾಂಧಿ
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Flipkart Big Billion Day ಸೆ. 27 ರಿಂದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.