ಅಫ್ಘಾನ್‌ ನಿರಾಶ್ರಿತರಿಗೆ ಇ-ವೀಸಾ ಕಡ್ಡಾಯ 


Team Udayavani, Aug 26, 2021, 6:50 AM IST

ಅಫ್ಘಾನ್‌ ನಿರಾಶ್ರಿತರಿಗೆ ಇ-ವೀಸಾ ಕಡ್ಡಾಯ 

ಕಾಬೂಲ್‌/ಹೊಸದಿಲ್ಲಿ: “ಅಫ್ಘಾನಿಸ್ಥಾನದಿಂದ ಭಾರತಕ್ಕೆ ನಿರಾಶ್ರಿತರಾಗಿ ಬರುವವರು ಇನ್ನು ಮುಂದೆ ಕಡ್ಡಾಯವಾಗಿ ಇ-ವೀಸಾ ಪಡೆಯಬೇಕು’ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. indianvisa online.gov.in, ವೆಬ್‌ಸೈಟ್‌ನಲ್ಲಿ “ಇ-ಇಮರ್ಜೆನ್ಸಿ ಎಕ್ಸ್‌-ಮಿಸ್ಕ್’ ಮಾದರಿಯ ವೀಸಾ ಸೌಲಭ್ಯಕ್ಕೆ ಚಾಲನೆ ನೀಡಿದ ನಂತರ, ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.

“ಅಫ್ಘಾನ್‌ ನಾಗರಿಕರಲ್ಲಿ ಕೆಲವರ ಪಾಸ್‌ಪೋರ್ಟ್‌ ಗಳು ಕಳೆದುಹೋಗಿರುವ ವರದಿಗಳ ಆಧಾರದಲ್ಲಿ ಇ-ವೀಸಾ ಜಾರಿಗೊಳಿಸಲಾಗಿದೆ. ಭಾರತಕ್ಕೆ ಆಗಮಿಸಲು ಬಯಸುವ ಅಫ್ಘನ್ನರಿಗೆ ಈ ಹಿಂದೆ ನೀಡಲಾಗಿದ್ದ ವೀಸಾಗಳು ತತ್‌ಕ್ಷಣದಿಂದ ಜಾರಿಗೊಳ್ಳುವಂತೆ ರದ್ದಾಗಿದ್ದು, ಅವರೆಲ್ಲರೂ ಇ-ವೀಸಾಕ್ಕಾಗಿ indianvisaonline.gov.in, ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು” ಎಂದು ಸಚಿವಾಲಯ ತಿಳಿಸಿದೆ.

ಉದ್ರಿಕ್ತರಿಂದ ದಾಳಿ: ಕಾಬೂಲನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗ, ಅಲ್ಲಿದ್ದ ಭಾರತೀಯ ರಾಜತಾಂತ್ರಿಕ ಕಚೇರಿ ಬಾಗಿಲು ಹಾಕಿದ ಸಂದರ್ಭದಲ್ಲಿ, ಭಾರತಕ್ಕೆ ತೆರಳ ಬಯಸುವ ಅಫ್ಘಾನಿಸ್ಥಾನದ ಜನತೆಗೆ ವೀಸಾ ವಿತರಿಸುತ್ತಿದ್ದ ಭಾರತದ ತಾತ್ಕಾಲಿಕ ಕಚೇರಿಯೊಂದರ ಮೇಲೆ ಆ. 15ರಂದು ಉರ್ದು ಮಾತನಾಡುತ್ತಿದ್ದ ಗುಂಪೊಂದು ದಾಳಿ ನಡೆಸಿದ್ದರೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕಚೇರಿಯಲ್ಲಿ ದಾಂಧಲೆ ಮಾಡಿದ್ದ ಆ ಗುಂಪು, ಅಲ್ಲಿದ್ದ ಅಫ್ಘಾನಿಸ್ತಾನೀಯರ ಪಾಸ್‌ಪೋರ್ಟ್‌ಗಳು, ವೀಸಾ ದಾಖಲೆಗಳನ್ನು ಕೊಂಡೊಯ್ದಿದ್ದರೆಂದು ಹೇಳಲಾಗಿದೆ.

ಧಾರ್ಮಿಕ ಮುಖಂಡರೇ ಮುಖ್ಯಸ್ಥರು: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ತಾಲಿಬಾನ್‌ ಸರ ಕಾ ರವನ್ನು ಧಾರ್ಮಿಕ ಮುಖಂಡರು ಮುನ್ನಡೆಸಲಿದ್ದಾರೆ ಎಂದು ತಾಲಿಬಾನ್‌ ಸಂಘಟನೆಗಳು ಹೇಳಿಕೊಂಡಿವೆ.  ಪುನಃ ಸರಕಾರ ಸ್ಥಾಪಿಸಲು ನಮಗೆ 20 ವರ್ಷಗಳೇ ಹಿಡಿದಿವೆ. ಈ ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳಲಾ ಗುವುದು. ನಮ್ಮ ಸರಕಾರವನ್ನು ಧಾರ್ಮಿಕ ಮುಖಂಡರು ಮುನ್ನಡೆಸಲಿದ್ದಾರೆ ಎಂದು ಕಾಬೂಲ್‌ನಲ್ಲಿ ತಾಲಿಬಾನ್‌ ಮುಖಂಡರು ತಿಳಿಸಿದ್ದಾರೆ.

ಹೆಣ್ಣುಬಾಕರಿಂದ ಹುಡುಕಾಟ: ಅಫ್ಘಾನಿಸ್ಥಾನ ಸರಕಾರ ಉರುಳಿಸಿದ ತಮ್ಮ ಮಹದಾಸೆ ಈಡೇರಿದ ಅನಂತರ ಈಗ ಮದುವೆಯಾಗಲು ಸಿದ್ಧವಾಗಿರುವ ತಾಲಿಬಾನಿ ಉಗ್ರರು, ಮಹಿಳೆಯರು ಹಾಗೂ ಯುವತಿಯರಿಗಾಗಿ ತಲಾಶ್‌ ಆರಂಭಿಸಿದ್ದಾರೆ ಎಂದು ಅಫ್ಘಾನಿಸ್ಥಾನದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿ, ಇತ್ತೀಚೆಗೆ ಆ ದೇಶದಿಂದ ಓಡಿಬಂದಿರುವ “ದ ಡಲ್ಲಾಸ್‌ ಮಾರ್ನಿಂಗ್‌’ ಪತ್ರಿಕೆಯ ವರದಿಗಾರ ಹೊಲ್ಲೀ ಮೆಕೇ ಎಂಬವರು ತಿಳಿಸಿದ್ದಾರೆ.

ಮಹಿಳೆಯರಿಗೆ ಎಚ್ಚರಿಕೆ:  ಮಹಿಳೆಯರಿಗೆ ಗೌರವ ಕೊಡೋದು ಹೇಗೆ ಎಂಬುದು ನಮ್ಮ ಸೈನಿಕರಿಗೆ ಗೊತ್ತಿಲ್ಲ. ಹಾಗಾಗಿ, ಅಫ್ಘಾನಿಸ್ಥಾನದ ಉದ್ಯೋಗಸ್ಥ ಮಹಿಳೆಯರು ಮನೆಯಲ್ಲೇ ಇರಬೇಕು ಎಂದು  ತಾಲಿಬಾನ್‌ ನಾಯಕ ಝಬೀವುಲ್ಲಾ ಮುಜಾಹೀದ್‌ ಎಚ್ಚರಿಸಿದ್ದಾರೆ.

ಚೀನ-ತಾಲಿಬಾನ್‌ ಮಾತುಕತೆ: ಬೀಜಿಂಗ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನಿºನ್‌, “ಅಫ್ಘಾನಿಸ್ಥಾನದಲ್ಲಿ ಬರಲಿರುವ ತಾಲಿಬಾನ್‌ ಸರಕಾರದೊಂದಿಗೆ ಚೀನ ಸ್ನೇಹದಿಂದ, ಸಹಕಾರದಿಂದ ಮುಂದುವರಿಯಲಿದೆ’ ಎಂದಿದ್ದಾರೆ.

ಬೈಡನ್‌ ಪ್ರತ್ಯುತ್ತರ: “ಆ. 31ರೊಳಗೆ ಅಫ್ಘಾನಿಸ್ಥಾನ ದಲ್ಲಿರುವ ಅಮೆರಿಕ ಸೇನೆಯನ್ನು ಹಾಗೂ ಅಲ್ಲಿನ ನಿರಾಶ್ರಿತರನ್ನು ಏರ್‌ಲಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಆದರೆ, ಅದು ತಾಲಿಬಾನಿಗಳು ನೀಡುವ ಸಹಕಾರದ ಮೇಲೆ ಅವಲಂಬಿತ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಿಳಿಸಿದ್ದಾರೆ. ಇತ್ತೀಚೆಗೆ ತಾಲಿಬಾನಿಗಳು, ಆ. 31ರೊಳಗೆ ಅಫ್ಘಾನಿಸ್ಥಾನವನ್ನು ಅಮೆರಿಕ ಸಂಪೂರ್ಣವಾಗಿ ತೊರೆಯಬೇಕು ಎಂದು ಆಗ್ರಹಿಸಿದ್ದಕ್ಕೆ ಹೀಗೆ ಹೇಳಿದ್ದಾರೆ.

200 ನಾಯಿ, ಬೆಕ್ಕುಗಳ ಏರ್‌ಲಿಫ್ಟ್! :

ಹಿಂದೊಮ್ಮೆ ಬ್ರಿಟನ್‌ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಅನಂತರ ಕೆಲವು ವರ್ಷಗಳ ಹಿಂದೆ ಕಾಬೂಲ್‌ನಲ್ಲಿ ನೌಝಾದ್‌ ಎಂಬ ನಿರ್ಗತಿಕ ಪ್ರಾಣಿಗಳ ಸಾಕಾಣಿಕೆ ಕೇಂದ್ರವನ್ನು ತೆರೆದಿದ್ದ ಮರಿನ್‌ ಪೌಲ್‌ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಕಾಬೂಲ್‌ನಿಂದ ತಾವು ಸಾಕಿರುವ ಸುಮಾರು 200 ನಾಯಿಗಳು, ಬೆಕ್ಕುಗಳನ್ನು ಬ್ರಿಟನ್‌ಗೆ ಸಾಗಿಸಲು ಅವರು ನಿರ್ಧರಿಸಿದ್ದು, ಕ್ರೌಂಡ್‌-ಫ‌ಂಡಿಂಗ್‌ ಮೂಲಕ ವಿಮಾನವೊಂದನ್ನು ಬಾಡಿಗೆ ಪಡೆದು ಅದರಲ್ಲಿ ಈ ಪ್ರಾಣಿಗಳು, ತಮ್ಮ ಸಿಬಂದಿ, ತಾವು, ತಮ್ಮ ಕುಟುಂಬದೊಂದಿಗೆ ಪ್ರಯಾಣ ಬೆಳೆಸಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ “ಆಪರೇಷನ್‌ ಆರ್ಕ್‌’ ಎಂದೂ ಅವರು ಹೆಸರಿಟ್ಟಿದ್ದಾರೆ. ಆದರೆ, ಇದು ವಿವಾದಕ್ಕೆ ಕಾರಣವಾಗಿದೆ. ಅಫ್ಘಾನಿಸ್ಥಾನದಲ್ಲಿರುವ ಅನೇಕ ಬ್ರಿಟನ್‌ ನಾಗರಿಕರು ಸ್ವದೇಶಕ್ಕೆ ಮರಳಲು ಅವಕಾಶ ಸಿಗದೆ ಪರಿತಪಿಸುತ್ತಿರುವಾಗ, ಅವರನ್ನು ಕರೆತರುವುದನ್ನು ಬಿಟ್ಟು ಪ್ರಾಣಿಗಳನ್ನು ತರುವುದಕ್ಕೆ ಮೊದಲು ಆದ್ಯತೆ ನೀಡುವುದು ಸರಿಯಲ್ಲ ಎಂದು ಬ್ರಿಟನ್‌ ರಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆನ್‌ ವ್ಯಾಲೆಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲಿಬಾನಿಗಳು ಬದಲಾಗಿಲ್ಲ  :

ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಆಡಳಿತ ಬರಲಿದೆ ಎಂಬುದನ್ನು ಭಾರತ ಮೊದಲೇ ಊಹಿಸಿತ್ತು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರು ಇಷ್ಟು ಕ್ಷಿಪ್ರವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇರಲಿಲ್ಲ. ತಾಲಿಬಾನ್‌ನಿಂದ ಎದುರಾಗಲಿರುವ ಬೆದರಿಕೆಯನ್ನೂ ಸಮರ್ಥವಾಗಿ ಎದುರಿಸಲಾಗುತ್ತದೆ ಎಂದರು. ಕ್ವಾಡ್‌ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಜಗತ್ತಿನಲ್ಲಿ ನಡೆಯುವ ಹೋರಾಟಕ್ಕೆ ಮತ್ತಷ್ಟು ಬೆಂಬಲ ನೀಡಬೇಕು ಎಂದರು. ಆದರೆ, ತಾಲಿಬಾನಿಗಳು ಅಫ್ಘಾನಿಸ್ಥಾನ ವಶಪಡಿಸಿಕೊಂಡ ಅನಂತರ ಅವರಿಂದ ಆಗುತ್ತಿರುವ ಅನ್ಯಾಯಗಳನ್ನು ನೋಡಿದರೆ ಕಳೆದ 20 ವರ್ಷಗಳಲ್ಲಿ ಅವರೇನೂ ಬದಲಾಗಿಲ್ಲ ಎನ್ನಿಸುತ್ತಿದೆ ಎಂದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

ಹೆಜ್ಬುಲ್ಲಾ ಬಳಸಿದ್ದ ಸಾವಿವಾರು ಪೇಜರ್ಸ್‌ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್‌ ನ ಮೊಸ್ಸಾದ್!

Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್‌ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್‌ ನ ಮೊಸ್ಸಾದ್!

arrest-25

Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್‌ ಸ್ಟಾರ್ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.