![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 5, 2023, 7:50 AM IST
ಬೀಜಿಂಗ್: ಜನಸಂಖ್ಯೆ ಕುಸಿತ ಎದುರಿಸುತ್ತಿರುವ ಚೀನ, ದೇಶದಲ್ಲಿ ಜನನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗ ಯುವಕರನ್ನು ಮದುವೆಗೆ ಉತ್ತೇಜಿಸುವ ನಿಟ್ಟಿನಲ್ಲಿ ವಧು ದಕ್ಷಿಣೆ ವಿರುದ್ಧ ಅಭಿಯಾನ ಆರಂಭಿಸಿದೆ.
ಚೀನದಲ್ಲಿ ವಧು ದಕ್ಷಿಣೆ ಸಂಪ್ರದಾಯ ಅಸ್ತಿತ್ವದಲ್ಲಿದ್ದು, ಮದುವೆಗೂ ಮುನ್ನವೇ ಯುವತಿಯರು ಹುಡುಗನಿಂದ ಕಾರು,ಬಂಗಲೆ, ಹಣವನ್ನು ಸ್ವೀಕರಿಸುತ್ತಿದ್ದಾರೆ. ಯುವತಿಯರ ಭಾರೀ ಡಿಮ್ಯಾಂಡ್ಗಳಿಗೆ ಹೆದರಿ ಅನೇಕ ಯುವಕರು, ಮದುವೆಯ ಸಹವಾಸವೇ ಬೇಡ ಎಂದು ದೂರ ಹೋಗುತ್ತಿದ್ದಾರಂತೆ!
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಚೀನದಲ್ಲಿ ಶೇ.30ರಷ್ಟು ಯುವಕರು ಅವಿವಾಹಿತರಾಗಿದ್ದು, ಜಿಯಾಂಕ್ಸಿ ಪ್ರಾಂತ್ಯದಲ್ಲಂತೂ ವಧುದಕ್ಷಿಣೆ ಪಿಡುಗಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಚೀನ ಸ್ಥಳೀಯಾಡಳಿತಗಳು ಯುವತಿಯರ ಮೂಲಕವೇ ವಧು-ದಕ್ಷಿಣೆ ವಿರೋಧಿ ಅಭಿಯಾನವನ್ನು ಆರಂಭಿಸಿವೆ. 20-30 ವರ್ಷದ ಅನೇಕ ಯುವತಿಯರು ವಧು-ದಕ್ಷಿಣೆ ಕ್ರಮ ನಿಲ್ಲಿಸುವಂತೆ, ಸಮಾಜದಲ್ಲಿ ಸಮಾನತೆಗಾಗಿ ಇಂಥ ಸಂಪ್ರದಾಯ ತೊಡೆದುಹಾಕುವಂತೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ತಾವು ಎಂದಿಗೂ ವಧು-ದಕ್ಷಿಣೆಗೆ ಬೇಡಿಕೆ ಇಡುವುದಿಲ್ಲ ಎಂದು ವಾಗ್ಧಾನ ಮಾಡಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮೂಲಕ ಯುವಕರನ್ನು ಮದುವೆಗೆ ಉತ್ತೇಜಿಸಿ, ಜನನ ಪ್ರಮಾಣ ವೃದ್ಧಿಸುವುದು ಸರ್ಕಾರದ ಆಶಯವಾಗಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.