![10-honanvar](https://www.udayavani.com/wp-content/uploads/2024/07/10-honanvar-415x249.jpg)
ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ
Team Udayavani, Dec 6, 2020, 5:45 AM IST
![ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ](https://www.udayavani.com/wp-content/uploads/2020/12/moon-620x412.jpg)
ಬೀಜಿಂಗ್: ಚಂದ್ರನಂಗಳದಲ್ಲಿ ಅಮೆರಿಕ ತನ್ನ ದೇಶದ ಧ್ವಜ ನೆಟ್ಟ 50 ವರ್ಷಗಳ ಅನಂತರ ಈಗ ಚೀನ ಈ ಸಾಧನೆ ಮಾಡಿದ ಎರಡನೇ ರಾಷ್ಟ್ರವೆಂಬ ಗರಿಮೆಗೆ ಪಾತ್ರವಾಗಿದೆ. ಚಂದ್ರನಂಗಳದ ಅಧ್ಯಯನಕ್ಕಾಗಿ ಚೀನ ಕಳುಹಿಸಿಕೊಟ್ಟಿರುವ Chang’e-5 ಬಾಹ್ಯಾಕಾಶ ನೌಕೆಯು ಚೀನಿ ಧ್ವಜವನ್ನು ನೆಟ್ಟು ಅದರ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ. ಚಂದ್ರನ ಮೇಲಿನ ಮಣ್ಣು ಹಾಗೂ ಕಲ್ಲುಗಳ ಮಾದರಿಯನ್ನೂ ಈ ಗಗನನೌಕೆ ಸಂಗ್ರಹಿಸಿದ್ದು, ಭೂಮಿಗೆ ಹಿಂದಿರುಗಿದ ಅನಂತರ ಈ ಮಾದರಿಗಳ ಅಧ್ಯಯನ ಮಾಡಲಾಗುತ್ತದೆ.
ಅಮೆರಿಕ 1969ರಲ್ಲಿ ತನ್ನ ಮೊದಲ ಮಾನವ ಸಹಿತ ಅಪೋಲೋ ಮಿಷನ್ ಸಂದರ್ಭದಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ಧ್ವಜ ಸ್ಥಾಪಿಸಿತ್ತು. ತದನಂತರ 1969ರಿಂದ 1972ರವರೆಗೂ ಅಮೆರಿಕ 12 ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೆ„ಯಲ್ಲಿ ಇಳಿಸಿತ್ತು. ಈ ಯೋಜನೆಗಳ ವೇಳೆ ಒಟ್ಟು 382 ಕೆಜಿಯಷ್ಟು ಕಲ್ಲು ಮತ್ತು ಮಣ್ಣಿನ ಮಾದರಿ ಸಂಗ್ರಹಿಸಲಾಗಿತ್ತು.
ಭೂಮಿಯತ್ತ ಮರು ಪ್ರಯಾಣ
ನ.23ರಂದು ಚೀನ ಉಡಾಯಿಸಿದ Chang’e-5 ಡಿ.1ರಂದು ಚಂದ್ರನ ಮೇಲೆ ಇಳಿದಿತ್ತು, ಈಗ ಮಾದರಿಗಳನ್ನು ಸಂಗ್ರಹಿಸಿ ಅದು ಭೂಮಿಯತ್ತ ತನ್ನ ಪಯಣ ಬೆಳೆಸಿದ್ದು, ಡಿ.16ರಂದು ಬಂದಿಳಿಯುವ ನಿರೀಕ್ಷೆಯಿದೆ. ಈ ಮಾದರಿಗಳನ್ನು ಹೊತ್ತು ಗಗನನೌಕೆಯೇನಾದರೂ ಯಶಸ್ವಿಯಾಗಿ ಬಂದಿಳಿದರೆ, ಅಮೆರಿಕ, ರಷ್ಯಾ ಅನಂತರ ಚಂದ್ರನ ಅಂಗಳದಿಂದ ಕಲ್ಲು, ಮಣ್ಣಿನ ಮಾದರಿ ತಂದ ಮೂರನೇ ರಾಷ್ಟ್ರ ಎಂಬ ಗರಿಮೆಗೂ ಚೀನ ಪಾತ್ರವಾಗಲಿದೆ.
ಟಾಪ್ ನ್ಯೂಸ್
![10-honanvar](https://www.udayavani.com/wp-content/uploads/2024/07/10-honanvar-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![10-honanvar](https://www.udayavani.com/wp-content/uploads/2024/07/10-honanvar-150x90.jpg)
ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ
![9-Bantwala](https://www.udayavani.com/wp-content/uploads/2024/07/9-Bantwala-150x90.jpg)
Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್
![Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್ – ಶಿವಣ್ಣ](https://www.udayavani.com/wp-content/uploads/2024/07/1-4-150x90.jpg)
Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್ – ಶಿವಣ್ಣ
![Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ](https://www.udayavani.com/wp-content/uploads/2024/07/rohiit-150x83.jpg)
Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ
![8-udupi](https://www.udayavani.com/wp-content/uploads/2024/07/8-udupi-150x90.jpg)
Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.