
ಸೇನೆ ಹಿಂಪಡೆಯಲ್ಲ; ಚೀನಾಕ್ಕೆ ಭಾರತ ಖಡಕ್ ಉತ್ತರ
Team Udayavani, Aug 3, 2017, 8:15 AM IST

ಬೀಜಿಂಗ್: ಡೋಕ್ಲಾಂ ವಿಚಾರದಲ್ಲಿ ಭಾರತಕ್ಕೆ ಬೆದರಿಕೆ ಹಾಕುವಂತೆ ಮಾತನಾಡುತ್ತಿರುವ ಚೀನ, ಬುಧವಾರ ಮತ್ತೂಮ್ಮೆ ಇದೇ ಕೆಲಸ ಮುಂದುವರಿಸಿದೆ. ಡೋಕ್ಲಾಂನಲ್ಲಿ ಚೀನ ಭೂಮಿಯಿಂದ ಬೇಷರತ್ತಾಗಿ ಸೇನೆಯನ್ನು ವಾಪಸ್ ಪಡೆಯಿರಿ ಎಂದು ಚೀನ ಭಾರತಕ್ಕೆ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಯಾವುದೇ ಕಾರಣಕ್ಕೂ ಸೇನೆ ಹಿಂದೆಗೆಯುವುದಿಲ್ಲ ಎಂದು ಖಡಕ್ಕಾಗಿ ಹೇಳಿದೆ.
ಜು.28ರಂದು ನಡೆದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನದ ಸಹವರ್ತಿ ಯಾಂಗ್ ಜೈಶಿ ಅವರ ಮಾತುಕತೆ ವಿವರಗಳನ್ನು ಬಿಡಿಸಿಟ್ಟ ಚೀನದ ವಿದೇಶಾಂಗ ಸಚಿವಾಲಯ, ಡೋಕ್ಲಾಂನಲ್ಲಿ ಭಾರತ ಚೀನದ ಗಡಿ ಸಾರ್ವಭೌಮತೆ ಉಲ್ಲಂಘಿಸಿದೆ. ಆದ್ದರಿಂದ ಕೂಡಲೇ ಸೇನೆಯನ್ನು ಹಿಂಪಡೆಯಬೇಕು ಎಂದು ಯಾಂಗ್ ಅವರು ತಿಳಿಸಿದ್ದಾಗಿ ಹೇಳಿದೆ. ಮಾತುಕತೆ ಸಂದರ್ಭ ಬ್ರಿಕ್ಸ್ ಸಹಕಾರ, ದ್ವಿಪಕ್ಷೀಯ ಸಂಬಂಧ ಮತ್ತು ಪ್ರಸ್ತುತ ಕೆಲ ಪ್ರಮುಖ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾಗಿ ಹೇಳಿದೆ.
‘ಭಾರತ ಕಿರಿಕ್ ಮಾಡ್ತಿದೆ, ನಾವೇ ತಾಳ್ಮೆಯಿಂದಿದ್ದೇವೆ’: ಗಡಿಯಲ್ಲಿ ಪದೇ ಪದೆ ಕಿರಿಕ್ ಮಾಡುವ ಸಾಮಾನ್ಯ ಚಾಳಿ ಹೊಂದಿರುವ ಚೀನ, ಗಡಿಯಲ್ಲಿ ಭಾರತವೇ ಕಿರಿಕ್ ಮಾಡುತ್ತಿರುವುದಾಗಿ ಹೇಳಿದೆ. ಜೊತೆಗೆ ಈ ವಿಚಾರದಲ್ಲಿ ನಾವು ಗರಿಷ್ಠ ತಾಳ್ಮೆಯಿಂದಿದ್ದೇವೆ ಎಂದಿದೆ. ಚೀನ ವಿದೇಶಾಂಗ ಸಚಿವಾಲಯ ಡೋಕ್ಲಾಂ ವಿಚಾರದಲ್ಲಿ ಹೇಳಿಕೆಯೊಂದನ್ನು ನೀಡಿದ್ದು, ಭಾರತ ತನ್ನ ತಪ್ಪು ತಿದ್ದಿಕೊಳ್ಳಲು ಮುಂದಾಗುತ್ತಿಲ್ಲ. ಬದಲಿಗೆ ತನ್ನ ಸೇನೆ ಅಕ್ರಮವಾಗಿ ಒಳ ನುಗ್ಗಿದ್ದನ್ನು ಸಮರ್ಥಿಸಿಕೊಳ್ಳಲು ಕಥೆಗಳನ್ನು ಕಟ್ಟುತ್ತಿದೆ ಎಂದು 15 ಪುಟಗಳ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೆ ಸರಿಯಲ್ಲ
ಡೋಕ್ಲಾಂಗೆ ಚೀನ ರಸ್ತೆ ನಿರ್ಮಿಸಿ ಯಥಾನುಸ್ಥಿತಿ ಕಾಯ್ದುಕೊಳ್ಳುವ ಒಪ್ಪಂದ ಉಲ್ಲಂಘಿಸಿದ್ದು, ಯಾವುದೇ ಕಾರಣಕ್ಕೂ ಸೇನೆ ಹಿಂದೆಗೆಯಲ್ಲ. ಚೀನ ಸೇನೆ ನಿಯೋಜನೆ ಮಾಡಿದ್ದಕ್ಕೆ ಪ್ರತಿಯಾಗಿ ತಾನೂ ಸೇನೆ ನಿಯೋಜನೆ ಮಾಡಿದ್ದಾಗಿ ಭಾರತ ಹೇಳಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ

Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.