ಅಮೆರಿಕಾದ ಕೋವಿಡ್ ನೆರವು ಬುಧವಾರದವರೆಗೆ ವಿಳಂಬ
Team Udayavani, May 4, 2021, 5:30 PM IST
ವಾಷಿಂಗ್ಟನ್ : ಕೋವಿಡ್ ಸೋಂಕಿತರ ಚಿಕಿತ್ಸೆಗೆಗಾಗಿ ವೈದ್ಯಕೀಯ ಸಾಮಾಗ್ರಿಗಳೊಂದಿಗೆ ಭಾರತಕ್ಕೆ ತಲುಪಬೇಕಿದ್ದ ಯುಎಸ್ ವಾಯುಪಡೆಯ ವಿಮಾನಗಳು ನಿರ್ವಹಣೆ ಸಮಸ್ಯೆಗಳಿಂದಾಗಿ ಬುಧವಾರದವರೆಗೆ(ಮೇ. 05) ವಿಳಂಬವಾಗಿದೆ ಎಂದು ಪೆಂಟಗನ್ ತಿಳಿಸಿದೆ.
ನಿರ್ವಹಣೆ ಸಮಸ್ಯೆಗಳಿಂದಾಗಿ ಭಾರತಕ್ಕೆ ವಿಮಾನಗಳು ಬುಧವಾರದವರೆಗೆ ವಿಳಂಬವಾಗುತ್ತವೆ ಎಂದು ಯುಎಸ್ ಟ್ರಾನ್ಸ್ ಕಾಮ್ ತಿಳಿಸಿದೆ ಎಂದು ಪೆಂಟಗನ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಕೇವಲ ಎರಡು ಯುಎಸ್ ವಾಯುಪಡೆಯ ವಿಮಾನಗಳು ಭಾರತಕ್ಕೆ ಬಂದಿವೆ.
ಓದಿ : ಅಂಕಣಕಾರ ಎಸ್. ಎಫ್ .ಯೋಗಪ್ಪನವರ್ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಸಂತಾಪ
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಮೂರು ಯುಎಸ್ ಏರ್ ಫೋರ್ಸ್ ಸಿ -5 ಸೂಪರ್ ಗ್ಯಾಲಕ್ಸಿಗಳು ಮತ್ತು ಒಂದು ಸಿ -17 ಗ್ಲೋಬ್ ಮಾಸ್ಟರ್ ಸೋಮವಾರ ಭಾರತಕ್ಕೆ ತಲುಪಬೇಕಿತ್ತು. ನಿರ್ವಹಣೆಯ ಸಮಸ್ಯೆಯಿಂದಾಗಿ ನಾಳೆ(ಬುಧವಾರ, ಮೇ.05) ಭಾರತವನ್ನು ತಲುಪಲಿವೆ ಎಂದು ಜಾಗತಿಕ ಸುದ್ದಿ ಸಂಸ್ತೆಗಳು ವರದಿ ಮಾಡಿವೆ.
ಇನ್ನು, ಇದುವರೆಗೆ ಅಮೆರಿಕಾದಿಂದ ಕೇವಲ ಒಂದು ವಿಮಾನ ಮಾತ್ರ ವೈದ್ಯಕೀಯ ಸಾಮಾಗ್ರಿಗಳನ್ನು ತಲುಪಿಸಿದೆ.
ಪೆಂಟಗನ್ ಪ್ರೆಸ್ ನ ಕಾರ್ಯದರ್ಶಿ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದಲ್ಲಿನ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಹಾಯರ್ಥವಾಗಿ ಅಮೇರಿಕ ತನ್ನ ವಿಮಾನಗಳ ಮೂಲಕ ವೈದ್ಯಕೀಯ ಸೌಲಭ್ಯಗಳನ್ನು ನಿರ್ವಹಣೆಯ ತೊಡಕಿನಿಂದ ಒಂದು ದಿನ ತಡವಾಗಿ ತಲುಪಿಸಲಿದೆ. ಇನ್ನು, ಹೆಚ್ಚುವರಿ ಸಹಾಯದ ಅಗತ್ಯವಿದ್ದರೆ ನಾವು ಭಾರತದಲ್ಲಿ ನಾವು ಸಹಾಯ ಮಾಡಲು ನಾವು ಏನು ಮಾಡಬೇಕೋ ಅದನ್ನು ಒದಗಿಸಲು ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.
ಓದಿ : ಪ್ರಥಮ ಪಿಯುಸಿ ಪರೀಕ್ಷೆ ರದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.