![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 11, 2023, 10:08 AM IST
ನವದೆಹಲಿ: ಇಸ್ರೇಲ್ ನಲ್ಲಿ ನಡೆಯುತ್ತಿದ್ದ ಮ್ಯೂಸಿಕ್ ಫೆಸ್ಟಿವೆಲ್ ನಿಂದ ಜರ್ಮನ್ ಮಹಿಳೆಯೊಬ್ಬರನ್ನು ಅಪಹರಿಸಿಕೊಂಡು ಬೆತ್ತಲೆ ಮಾಡಿ, ವಾಹನದಲ್ಲಿ ಮೆರವಣಿಗೆ ಮಾಡಿದ್ದ ವಿಡಿಯೋ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಜರ್ಮನ್ ಮೂಲದ 22 ವರ್ಷದ ಶಾನಿ ಲೌಕ್ ಟ್ಯಾಟೂ ಕಲಾವಿದೆಯಾಗಿದ್ದು, ಇಸ್ರೇಲ್ ನಲ್ಲಿ ಮ್ಯೂಸಿಕ್ ಫೆಸ್ಟಿವೆಲ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಮಾಸ್ ಉಗ್ರರು ಏಕಾಏಕಿ ದಾಳಿ ನಡೆಸಿ, ಅನೇಕರನ್ನು ಅಪಹರಿಸಿಕೊಂಡು ಹೋಗಿದ್ದರು. ಇದರಲ್ಲಿ ಶಾನಿ ಲೌಕ್ ಕೂಡ ಇದ್ದರು. ಶಾನಿ ಲೌಕ್ ಅವರ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಬೆತ್ತಲೆ ಮಾಡಿ, ಕೈಕಾಲು ಕಟ್ಟಿ ವಾಹನದಲ್ಲಿ ಮೆರವಣಿಗೆ ಮಾಡಿಕೊಂಡು ಹೋಗುತ್ತಿದ್ದ ಭೀಕರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಕುರಿತು ಟ್ವಿಟರ್ ನಲ್ಲಿ ಶಾನಿ ಅವರ ತಾಯಿ ರಿಕಾರ್ಡಾ ಲೌಕ್ ಅವರು ತನ್ನ ಮಗಳ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಅವರ ಇರುವಿಕೆ ಬಗ್ಗೆ ಹೇಳಲು ಮನವಿ ಮಾಡಿದ್ದರು. ಶಾನಿ ಮೃತಪಟ್ಟಿದ್ದಾರೆ ಎಂದು ಕೆಲ ವರದಿಗಳು ತಿಳಿಸಿತ್ತು.
ಇದೀಗ ತನ್ನ ಮಗಳು ಜೀವಂತವಾಗಿದ್ದಾಳೆ ಎಂದು ರಿಕಾರ್ಡಾ ಲೌಕ್ ಸಂದರ್ಶನವೊಂದರಲ್ಲಿ ಹೇಳಿರುವುದಾಗಿ ಜರ್ಮನ್ ನ್ಯೂಸ್ ಔಟ್ಲೆಟ್ ಡೆರ್ ಸ್ಪೀಗೆಲ್ ವರದಿ ಮಾಡಿದೆ.
ಗಾಜಾ ಪಟ್ಟಿಯಲ್ಲಿರುವ ಹಮಾಸ್ ಆಸ್ಪತ್ರೆಯಲ್ಲಿ ತನ್ನ ಮಗಳು ಜೀವಂತವಾಗಿದ್ದಾಳೆ ಎಂದು ಪ್ಯಾಲೆಸ್ತೀನ್ ಮೂಲಗಳಿಂದ ಮಾಹಿತಿ ಪಡೆದಿರುವುದಾಗಿ ಅವರು ಹೇಳಿದ್ದಾರೆ.
“ಶಾನಿ ಜೀವಂತವಾಗಿದ್ದಾಳೆ ಆದರೆ ಅವಳ ತಲೆಗೆ ಗಂಭೀರ ಗಾಯವಾಗಿದೆ. ಅವಳು ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಪ್ರತಿ ನಿಮಿಷ ಅವಳ ಆರೋಗ್ಯದ ವಿಚಾರದಲ್ಲಿ ಮುಖ್ಯ. ದಯವಿಟ್ಟು ಜರ್ಮನ್ ಸರ್ಕಾರ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಮನವಿ ಮಾಡುತ್ತೇನೆ. ಶಾನಿಯನ್ನು ಶೀಘ್ರವಾಗಿ ಗಾಜಾಪಟ್ಟಿಯಿಂದ ಹೊರತರಬೇಕು. ದಯವಿಟ್ಟು ನನ್ನ ಮಗಳನ್ನು ಸುರಕ್ಷಿತವಾಗಿ ಮನೆಗೆ ಕರೆ ತನ್ನಿ”ಎಂದು ಅವರು ಹೇಳಿದ್ದಾರೆ.
ಶಾನಿ ಅವರನ್ನು ಅಪಹರಿಸಿ ಆಕೆಯ ಕ್ರೆಡಿಟ್ ಕಾರ್ಡ್ ನ್ನು ಬಳಸಲಾಗಿದೆ ಎಂದು ಇತ್ತೀಚೆಗೆ ಆಕೆಯ ಕುಟುಂಬ ಹೇಳಿತ್ತು.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.