‘ಸಿಇಪಿಸಿಗೆ ಪಾಕ್ ಭ್ರಷ್ಟಾಚಾರವೇ ದೊಡ್ಡ ಬೆದರಿಕೆ, ಭಾರತ ಅಲ್ಲ’
Team Udayavani, Oct 13, 2017, 12:12 PM IST
ನ್ಯೂಯಾರ್ಕ್ : ಬಹು ಶತಕೋಟಿ ಡಾಲರ್ಗಳ ಚೀನ- ಪಾಕಿಸ್ಥಾನ ಇಕಾನಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಭಾರತ ಒಂದು ಬೆದರಿಕೆಯೇ ಅಲ್ಲ; ಪಾಕಿಸ್ಥಾನದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವೇ ಈ ಬೃಹತ್ ಯೋಜನೆಗೆ ಬಹು ದೊಡ್ಡ ಬೆದರಿಕೆಯಾಗಿದೆ ಎಂದು ಅಮೆರಿಕನ್ ತಜ್ಞರೊಬ್ಬರು ಹೇಳಿದ್ದಾರೆ.
”ಸಿಪಿಇಸಿ ಯೋಜನೆಯು ಎರಡೂ ಪಾಲುದಾರ ದೇಶಗಳಲ್ಲಿನ (ಚೀನ-ಪಾಕಿಸ್ಥಾನ) ಭ್ರಷ್ಟಾಚಾರದಿಂದಾಗಿ ವಿಳಂಬವನ್ನು ಹಾಗೂ ಅಪಾರ ಪ್ರಮಾಣದ ವೆಚ್ಚ ಏರಿಕೆಯನ್ನು ಕಾಣುತ್ತಿದೆ. ಚೀನ ಈ ಬೃಹತ್ ಯೋಜನೆಯನ್ನು ವಿನ್ಯಾಸಗೊಳಿಸಿ ಅನುಷ್ಠಾನಿಸುತ್ತಿದೆಯಾದರೆ ಪಾಕಿಸ್ಥಾನ ಯೋಜನೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ” ಎಂದು ನ್ಯೂಯಾರ್ಕ್ನ ಎಲ್ಐಯು ಪೋಸ್ಟ್ನಲ್ಲಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಆಗಿರುವ ಪ್ಯಾನೋಸ್ ಮುರ್ಡೋಕೋತಾಸ್ ಹೇಳಿದ್ದಾರೆ.
ಸಿಪಿಇಸಿ ಯೋಜನೆಯ ಬಗೆಗಿನ ಅವರ ವಿಶ್ಲೇಷಣಾತ್ಮಕ ಲೇಖನವು ಫೋರ್ಬ್ಸ್ ನಲ್ಲಿ ಪ್ರಕಟಗೊಂಡಿದೆ.
ಚೀನ – ಪಾಕಿಸ್ಥಾನದ ಪಾಲುದಾರಿಕೆಯ ಈ ಮಹತ್ವಾಕಾಂಕ್ಷೀ ಯೋಜನೆಯು ಉಸುಕಿನ ಅರಮನೆಯಾಗಿ ಕಂಡುಬರುತ್ತಿದೆ. ಯೋಜನಾ ಅನುಷ್ಠಾನದ ವಿಳಂಬದಿಂದಾಗಿ ನಿರ್ಮಾಣ ವೆಚ್ಚವು ಬೃಹತ್ ಪ್ರಮಾಣದಲ್ಲಿ ಏರುತ್ತಿದ್ದು ಪಾಕಿಸ್ಥಾನವು ಸಾಲದ ಕಡಲಲ್ಲಿ ಮುಳುಗುವುದು ನಿಶ್ಚಿತ ಮತ್ತು ಅದು ಈ ಹಿಂದೆ 2001ರಲ್ಲಿ ಮಾಡಿದಂತೆ ಈಗಿನ್ನು ಪುನಃ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಬಾಗಿಲಿಗೆ ಬೀಳಬೇಕಾಗುವುದು’ ಎಂದು ಪ್ಯಾನೋಸ್ ತಮ್ಮ ಲೇಖನದಲ್ಲಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.