![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 15, 2022, 7:10 AM IST
ಲಂಡನ್: ಇಹಲೋಕ ತ್ಯಜಿಸಿದ ರಾಣಿ ಎರಡನೇ ಎಲಿಜಬೆತ್ ಅವರಿಗೆ ಗೌರವ ಸೂಚಿಸಲು ಭಾರತೀಯ ಮೂಲದ ಇಬ್ಬರು ಕಲಾವಿದರು ಪಶ್ಚಿಮ ಲಂಡನ್ನ ಹೌನ್ಸೊ ಪ್ರದೇಶದಲ್ಲಿ ಬೃಹತ್ ಗೋಡೆ ಚಿತ್ರ ಬಿಡಿಸಿದ್ದಾರೆ.
ಗುಜರಾತ್ನಲ್ಲಿ ಜನಿಸಿದ ಕಲಾವಿದರಾದ ಜಿಗ್ನೇಶ್ ಮತ್ತು ಯಶ್ ಪಟೇಲ್ ಪ್ರಸ್ತುತ ಪಶ್ಚಿಮ ಲಂಡನ್ನಲ್ಲಿ ನೆಲೆಸಿದ್ದಾರೆ. ಕಳೆದ ಗುರುವಾರ 96 ವರ್ಷದ ರಾಣಿ ಎರಡನೇ ಎಲಿಜಬೆತ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಈ ಕಲಾವಿದರು ಬೃಹತ್ ಗೋಡೆ ಚಿತ್ರ ಬಿಡಿಸಿದ್ದಾರೆ.
ಈ ಕಾರ್ಯಕ್ಕೆ ಲಂಡನ್ನಲ್ಲಿರುವ ಭಾರತೀಯ ಸಮುದಾಯ ಸಹಾಯಹಸ್ತ ಚಾಚಿದೆ. “ಗೋ ಫಂಡ್ ಮಿ’ ವೆಬ್ಸೈಟ್ ಮೂಲಕ ಸುಮಾರು 1,000 ಪೌಂಡ್ಗಳ ದೇಣಿಗೆ ಸಂಗ್ರಹಿಸಿದೆ. ಕಲಾವಿದರಾದ ಜಿಗ್ನೇಶ್ ಮತ್ತು ಯಶ್ ಪಟೇಲ್ ಅವರ ಹೆಸರಿನಲ್ಲಿ ಐದು ಗಿನ್ನಿಸ್ ದಾಖಲೆಗಳಿವೆ
ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ಅಂತಿಮ ದರ್ಶನ:
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಮೃತದೇಹವನ್ನು ಬ್ರಿಟನ್ ಸಂಸತ್ನ ವೆಸ್ಟ್ಮಿನಿಸ್ಟರ್ ಹಾಲ್ನ ಅಂತಿಮ ದರ್ಶನಕ್ಕಿಡಲಾಗಿದೆ.
ಇದಕ್ಕೂ ಮುನ್ನ ನಡೆದ ರಾಣಿಯ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ರಾಜ 3ನೇ ಚಾರ್ಲ್ಸ್ ಮತ್ತು ಮಕ್ಕಳಾದ ರಾಜಕುಮಾರ ವಿಲಿಯಮ್ ಮತ್ತು ರಾಜಕುಮಾರ ಹ್ಯಾರಿ ಒಟ್ಟಿಗೆ ಸಾಗಿ ರಾಣಿಗೆ ಅಂತಿಮ ನಮನ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಜಕುಟುಂಬದ ಎಲ್ಲ ಸದಸ್ಯರು ಕಾಲ್ನಡಿಗೆಯ ಮೂಲಕ ಸಾಗಿದರು.
ಅಂತ್ಯಕ್ರಿಯೆಗೆ 9 ಮಿಲಿಯನ್ ಡಾಲರ್ ಖರ್ಚು:
ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗೆ ಬ್ರಿಟನ್ ಸರ್ಕಾರ 9 ಮಿಲಿಯನ್ ಡಾಲರ್ ವ್ಯಯಿಸುತ್ತಿದೆ. ಅಂತ್ಯಕ್ರಿಯೆಯಲ್ಲಿ ವಿಶ್ವದ ಹಲವು ನಾಯಕರು ಭಾಗವಹಿಸುತ್ತಿದ್ದಾರೆ
5 ಮಿಲಿಯನ್ ಜನರಿಂದ ವೀಕ್ಷಣೆ:
ರಾಣಿ ಎರಡನೇ ಎಲಿಜಬೆತ್ ಅವರ ಮೃತದೇಹವನ್ನು ಎಡಿನ್ಬರ್ಗ್ನಿಂದ ಲಂಡನ್ಗೆ ವಿಶೇಷ ವಿಮಾನದಲ್ಲಿ ರವಾನಿಸಲಾಯಿತು. ಆನ್ಲೈನ್ನಲ್ಲಿ ರಾಣಿಯ ಅಂತಿಮ ವಿಮಾನಯಾತ್ರೆಯನ್ನು ಲೈವ್ನಲ್ಲಿ 4.79 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜತೆಗೆ ಹೆಚ್ಚುವರಿಯಾಗಿ 0.25 ಮಿಲಿಯನ್ ಜನರು ಯೂಟೂಬ್ ಚಾನಲ್ನಲ್ಲಿ ವೀಕ್ಷಿಸಿದ್ದಾರೆ ಎಂದು ಫ್ಲೈಟ್ಟ್ರೇಡರ್ 24 ಮಾಹಿತಿ ನಿಡಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.