![11-heart](https://www.udayavani.com/wp-content/uploads/2025/01/11-heart-415x249.jpg)
ಸುಳ್ಳು ಸುದ್ದಿ ಪತ್ತೆಗೆ ಮೈಸೂರಿನ ಟೆಕ್ಕಿಯ ಲಾಜಿಕಲಿ ಟೂಲ್
Team Udayavani, Jul 23, 2018, 6:00 AM IST
![lyric-jain.jpg](https://www.udayavani.com/wp-content/uploads/2018/07/23/lyric-jain.jpg)
ಲಂಡನ್: ಜಗತ್ತಿನಾದ್ಯಂತ ಈಗ ಸುಳ್ಳು ಸುದ್ದಿಗಳದ್ದೇ ಸುದ್ದಿ. ಸರ್ಕಾರಗಳು, ನ್ಯಾಯಾಲಯಗಳು, ಸಾಮಾಜಿಕ ಜಾಲತಾಣಗಳು ಈ ಫೇಕ್ನ್ಯೂಸ್ಗಳ ಹಿಂದೆ ಬಿದ್ದಿದ್ದು, ಅವುಗಳ ತಡೆಗೆ ಹರಸಾಹಸ ಪಡುತ್ತಿವೆ. ವಾಟ್ಸ್ಆ್ಯಪ್ನಲ್ಲಿ ಹರಿದಾಡುವ ಸಂದೇಶಗಳ ಪೈಕಿ ನಿಜ ಯಾವುದು ಹಾಗೂ ಸುಳ್ಳು ಯಾವುದು ಎಂಬುದನ್ನು ಪತ್ತೆ ಮಾಡುವುದೇ ಒಂದು ದೊಡ್ಡ ಸವಾಲಿನ ಸಂಗತಿಯಾಗಿರುವ ಇಂಥ ಸನ್ನಿವೇಶದಲ್ಲೇ ಮೈಸೂರು ಮೂಲದ ಲಿರಿಕ್ ಜೈನ್ ಇಂಗ್ಲೆಂಡ್ನಲ್ಲಿ ವಿನೂತನ ಸ್ಟಾರ್ಟಪ್ವೊಂದನ್ನು ಸ್ಥಾಪಿಸಿದ್ದಾರೆ.
ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿಗಳಲ್ಲಿರುವ ಸುಳ್ಳನ್ನು ಪತ್ತೆ ಮಾಡುವ ಕೆಲಸವನ್ನು ಈ ನವೋದ್ಯಮ ಮಾಡಲಿದೆ. ಕೇಂಬ್ರಿಜ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರುವ ಲಿರಿಕ್ ಜೈನ್, “ಮಶಿನ್ ಲರ್ನಿಂಗ್ ಅಲ್ಗೊರಿದಂ’ ಅನ್ನು ಬಳಸಿ ಲಾಜಿಕಲಿ ಎಂಬ ಟೂಲ್ ಸಿದ್ಧಪಡಿಸಿದ್ದಾರೆ.ಇದನ್ನು ಅಮೆರಿಕ ಹಾಗೂ ಇಂಗ್ಲೆಂಡ್ನಲ್ಲಿ ಸೆಪ್ಟೆಂಬರ್ನಲ್ಲಿ ಪರಿಚಯಿಸಲಾಗುತ್ತಿದ್ದು, ಭಾರತದಲ್ಲಿ ಅಕ್ಟೋಬರ್ ವೇಳೆಗೆ ಅನಾವರಣಗೊಳ್ಳಲಿದೆ.
ಮಾನವ ಹಸ್ತಕ್ಷೇಪ ಇರಲ್ಲ:
ಸುಮಾರು 70 ಸಾವಿರ ಡೊಮೇನ್ಗಳಿಂದ ಸುದ್ದಿಗಳನ್ನು ಗ್ರಹಿಸುವ ಲಾಜಿಕಲಿ ಪ್ಲಾಟ್ಫಾರಂ, ಪ್ರತಿ ಲೇಖನದಲ್ಲಿರುವ ಎಲ್ಲ ಮಾಹಿತಿಯನ್ನೂ ಪರಿಶೀಲಿಸುತ್ತದೆ. ಇದರಲ್ಲಿ ಇರಬಹುದಾದ ತಪ್ಪುಗಳನ್ನು ಈ ಪ್ಲಾಟ್ಫಾರಂ ಕಂಡುಹಿಡಿಯಲಿದೆ. ಇದರಿಂದ ಜನರು ಈ ಸುದ್ದಿ ವಿಶ್ವಾಸಾರ್ಹವೇ ಎಂಬುದನ್ನು ತಕ್ಷಣ ಅರಿಯಬಹುದು. ಈ ರೀತಿಯ ಸಂಗತಿಗಳನ್ನು ಕಂಡುಕೊಳ್ಳಲೆಂದೇ ಮಶಿನ್ ಲರ್ನಿಂಗ್ ಅಲ್ಗೊರಿದಂ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಕೃತಕ ಬುದ್ಧಿಮತ್ತೆ) ಕೂಡ ಇಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಇಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇರುವುದಿಲ್ಲ. ಅಲ್ಲದೆ ಲಕ್ಷಾಂತರ ಸುದ್ದಿಗಳು ಪ್ರತಿನಿತ್ಯ ಜನರೇಟ್ ಆಗುವುದರಿಂದ ಇವುಗಳಲ್ಲಿ ಎಷ್ಟು ಸರಿ, ಎಷ್ಟು ತಪ್ಪು ಎಂಬುದನ್ನು ಕಂಡುಕೊಳ್ಳುವುದು ಮ್ಯಾನ್ಯುಅಲ್ ವಿಧಾನದಲ್ಲಿ ಸಾಧ್ಯವಿಲ್ಲ.
10 ಕೋಟಿ ರೂ. ಬಂಡವಾಳ:
ಲಾಜಿಕಲಿ ವಿವಿಧ ತಾಂತ್ರಿಕ ವಿಶ್ವವಿದ್ಯಾಲಯಗಳ ಪದವೀಧರರನ್ನು ನೇಮಿಸಿಕೊಂಡಿದ್ದು, 10 ಕೋಟಿ ರೂ. ಬಂಡವಾಳವನ್ನೂ ಹೂಡಿಕೆ ಮಾಡಲಾಗಿದೆ. ಅಮೆರಿಕ, ಇಂಗ್ಲೆಂಡ್ ಹಾಗೂ ಭಾರತದಲ್ಲಿನ ಕಚೇರಿಯಲ್ಲಿ ಒಟ್ಟು 38 ಜನರು ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಉದ್ಯೋಗಿಗಳ ಸಂಖ್ಯೆ ದುಪ್ಪಟ್ಟಾಗಲಿದೆ. ಈ ತಂತ್ರಜ್ಞಾನವು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸ್ ಆದರೆ, ಫೇಕ್ ನ್ಯೂಸ್ಗಳಿಗೆ ಬ್ರೇಕ್ ಹಾಕುವುದು ಸುಲಭವಾಗಲಿದೆ.
ಸಂಕೀರ್ಣ ಹಾಗೂ ಗೊಂದಲಕಾರಿ ಮಾಹಿತಿಯನ್ನು ಅರ್ಥ ಮಾಡಿಕೊಂಡು ಅದರಲ್ಲಿರುವ ವಾಸ್ತವ ಮತ್ತು ಸುಳ್ಳನ್ನು ಬೇರ್ಪಡಿಸಲು ನಮ್ಮ ತಂತ್ರಜ್ಞಾನ ನೆರವಾಗಲಿದೆ. ಇದೆಲ್ಲದರಾಚೆಗೆ ತಪ್ಪು ಮಾಹಿತಿಯಿಂದಾಗುವ ನಿಜವಾದ ಅಪಾಯಗಳ ಬಗ್ಗೆ ಜನರಿಗೆ ಸರ್ಕಾರವೂ ಅರಿವು ಮೂಡಿಸಬೇಕಿದೆ.
– ಲಿರಿಕ್ ಜೈನ್, ಲಾಜಿಕಲಿ ಸಂಸ್ಥಾಪಕ
ಟಾಪ್ ನ್ಯೂಸ್
![11-heart](https://www.udayavani.com/wp-content/uploads/2025/01/11-heart-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Bribery case: Trump case verdict before he takes office](https://www.udayavani.com/wp-content/uploads/2025/01/trump-150x86.jpg)
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
![America-Congress](https://www.udayavani.com/wp-content/uploads/2025/01/America-Congress-150x90.jpg)
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
![Covid test](https://www.udayavani.com/wp-content/uploads/2025/01/Covid-test-150x86.jpg)
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
![Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ](https://www.udayavani.com/wp-content/uploads/2025/01/ISRL-150x101.jpg)
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
![PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ](https://www.udayavani.com/wp-content/uploads/2025/01/gift-150x84.jpg)
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![11-heart](https://www.udayavani.com/wp-content/uploads/2025/01/11-heart-150x90.jpg)
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
![4](https://www.udayavani.com/wp-content/uploads/2025/01/4-11-150x80.jpg)
Mangaluru: ಎಸ್ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
![Davanagere: Opposition parties should not make baseless allegations: CM Siddaramaiah](https://www.udayavani.com/wp-content/uploads/2025/01/siddaramaiah-150x95.jpg)
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
![3](https://www.udayavani.com/wp-content/uploads/2025/01/3-9-150x80.jpg)
Kundapura: ಟವರ್ನ ಬುಡದಲ್ಲೇ ನೆಟ್ವರ್ಕ್ ಇಲ್ಲ!
![Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ](https://www.udayavani.com/wp-content/uploads/2025/01/yuva-150x86.jpg)
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.