![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 27, 2019, 1:20 PM IST
ವಾಷಿಂಗ್ ಟನ್: ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿಯನ್ನು ಉತ್ತರ ಸಿರಿಯಾದಲ್ಲಿ ಅಮೆರಿಕಾ ಪಡೆಗಳು ನಡೆಸಿದ ಕ್ಷಿಪ್ರ ಕಾರ್ಯಾಚರನೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಈತನಾಗಿದ್ದು, ಐಸಿಸ್ ಸಂಘಟನೆಯ ನೇತೃತ್ವವನ್ನು ವಹಿಸಿದ್ದ. 2014 ರಿಂದ ಭೂಗತನಾಗಿದ್ದ ಈತ ಕಳೆದ ಏಪ್ರಿಲ್ ನಲ್ಲಿ ಏಕಾಏಕಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದ. 2017 ರಲ್ಲಿ ಅಮೇರಿಕಾ ನಡೆಸಿದ ವಾಯುದಾಳಿಯಲ್ಲಿ ಬಾಗ್ದಾದಿ ಗಂಭೀರ ಗಾಯಗೊಂಡಿದ್ದ ಎಂದು ಅಮೇರಿಕಾ ಸೇನೆ ಹೇಳಿತ್ತು. ಆದರೇ ತನ್ನ ಪ್ರದೇಶ ಸಂಪೂರ್ಣವಾಗಿ ನಾಶವಾದ ಬಳಿಕ ತಲೆಮರೆಯಿಸಿಕೊಂಡಿದ್ದ ಬಾಗ್ದಾದಿ ಎಲ್ಲಿದ್ದಾನೆ ಎಂದು ಸುಳಿವು ನೀಡಿದವರಿಗೆ 25 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿಯೂ ಅಮೆರಿಕ ಘೋಷಣೆ ಮಾಡಿತ್ತು. ಅದರೇ ಇಂದು ನಡೆದ ದಾಳಿಯಲ್ಲಿ ಅಮೇರಿಕ ಸೇನೆ ಬಾಗ್ದಾದಿಯನ್ನು ಹತ್ಯೆ ಮಾಡಿದೆ ಎಂದು ಮಾಧ್ಯಮ ವರದಿ ಮಾಡಿದೆ. ಇದಕ್ಕೆ ಅಮೇರಿಕ ಸೇನೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಒಂದು ವೇಳೆ ಅಮೇರಿಕ ಮಾದ್ಯಮಗಳು ಹೇಳುತ್ತಿರುವಂತೆ ಬಾಗ್ದಾದಿಯ ಹತ್ಯೆಯಾಗಿದ್ದಲ್ಲಿ 2011 ರ ಒಸಮಾ ಬಿನ್ ಲಾಡೆನ್ ಹತ್ಯೆಯ ನಂತರ ಅಮೇರಿಕಾ ಸೇನೆಗೆ ಸಿಕ್ಕ ಅತೀ ದೊಡ್ಡ ಜಯ ಎನಿಸಿಕೊಳ್ಳಲಿದೆ.
ಇತ್ತೀಚಿಗಷ್ಟೆ ಇಸ್ಲಾಮಿಕ್ ಸ್ಟೇಟ್ ಉಗ್ರ ನಾಯಕ ಅಬುಬಕರ್ ಅಲ್ ಬಾಗ್ದಾದಿಯನ್ನು ಗುರಿಯಾಗಿರಿಸಿ ಅಮೇರಿಕಾ ಸೇನೆ ನಡೆಸಲು ಉದ್ದೇಶಿಸಿದ್ದ ವಿಶೇಷ ಕಾರ್ಯಾಚರಣೆಗೆ ಟ್ರಂಪ್ ಅನುಮತಿ ನೀಡಿದ್ದರು ಎಂದು ಅಮೇರಿಕಾ ನಿಯತಕಾಲಿಕೆ ನ್ಯೂಸ್ ವೀಕ್ ವರದಿ ಮಾಡಿತ್ತು. ಅಮೇರಿಕಾದ ಅಧ್ಯಕ್ಷ ಇಂದು ಮುಂಜಾನೆ ಟ್ವೀಟ್ ಒಂದನ್ನು ಮಾಡಿ “ಅತ್ಯಂತ ಮಹತ್ತರವಾದ ಘಟನೆ ಈಗಷ್ಟೆ ಘಟಿಸಿದೆ” ಎಂದು ತಿಳಿಸಿದ್ದರು. ಇದು ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
Something very big has just happened!
— Donald J. Trump (@realDonaldTrump) October 27, 2019
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.