ಇಸ್ರೇಲ್ ನಿಂದ ಕದನ ವಿರಾಮ ಘೋಷಣೆ: ಗಾಜಾದಲ್ಲಿ ಸಂಭ್ರಮಾಚರಣೆ, ಇಸ್ರೇಲ್ ನ ಸೋಲು ಎಂದ ಹಮಾಸ್
Team Udayavani, May 21, 2021, 7:31 AM IST
ಜೆರುಸಲೇಮ್/ ಗಾಜಾ: ಕಳೆದ 11 ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಕಾಳಗ ಅಂತ್ಯವಾಗಿದೆ. ಕದನ ವಿರಾಮ ಘೋಷಣೆಗೆ ಇಸ್ರೇಲ್ ನ ರಕ್ಷಣಾ ಸಂಪುಟ ಒಪ್ಪಿಗೆ ನೀಡಿದೆ.
ಸೆಕ್ಯುರಿಟಿ ಕ್ಯಾಬಿನೆಟ್ ಜತೆಗಿನ ತಡರಾತ್ರಿಯ ಸಭೆಯ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರ ಕಚೇರಿ ಕದನ ವಿರಾಮವನ್ನು ಘೋಷಣೆ ಮಾಡಿದೆ. ಈಜಿಪ್ಟಿನ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ ತಿಳಿಸಿರುವ ಇಸ್ರೇಲ್, ಯಾವಾಗ ಕಾರ್ಯರೂಪಕ್ಕೆ ಬರಬೇಕೆಂದು ಎರಡು ಕಡೆಯವರು ಇನ್ನೂ ನಿರ್ಧರಿಸುತ್ತಿವೆ ಎಂದಿದೆ.
ಇಸ್ರೇಲ್ ನಿಂದ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಗಾಜಾ ಪಟ್ಟಿಯ ಜನರಲ್ಲಿ ಸಂಭ್ರಮ ಮನೆಮಾಡಿದೆ. ಕೆಲ ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡ ಬದುಕಿದ್ದ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಕದನ ವಿರಾಮ ವಿಚಾರಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿರುವ ಹಮಾಸ್ ಉಗ್ರರು, ಇದು ಪ್ಯಾಲೆಸ್ತಿನ್ ಜನರ ಜಯ ಮತ್ತು ಇಸ್ರೇಲ್ ನ ಸೋಲು ಎಂದಿದೆ.
ಇದನ್ನೂಓದಿ:ಗಡಿಯಲ್ಲಿ ಹೈವೇ ನಿರ್ಮಿಸಿದ ಚೀನ
ಸಂಧಾನಕಾರರ ಮಾತನ್ನು ಕೇಳುವವರೆಗೂ ಜಾಗರೂಕರಾಗಿರುತ್ತಾರೆ ಎಂದು ಹಮಾಸ್ನ ಅರಬ್ ಮತ್ತು ಇಸ್ಲಾಮಿಕ್ ಸಂಬಂಧಗಳ ಬ್ಯೂರೋದ ಸದಸ್ಯ ಅಲಿ ಬರಾಕೆಹ್ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದರು. ಸಂಧಾನಕಾರರ ಮಾತಗಳನ್ನು ಕೇಳಿದ ನಂತರ, ಗುಂಪಿನ ನಾಯಕತ್ವವು ಚರ್ಚೆಗಳನ್ನು ನಡೆಸುತ್ತದೆ ಮತ್ತು ಪ್ರಕಟಣೆ ನೀಡುತ್ತದೆ ಎಂದು ಅಲಿ ಬರಾಕೆಹ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ… ನಾಲ್ವರು ಭಾರತೀಯರು ಮೃತ್ಯು
Pakistan: ಅಂದು ಬಿನ್ ಲಾಡೆನ್ ಅಡಗಿದ್ದ ಅಬೋಟಾಬಾದ್ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!
Israel: ಗಾಜಾ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದರೆ ಯುದ್ಧ ನಿಲ್ಲಿಸಲು ಸಿದ್ಧ: ಹಮಾಸ್
North Korea vs South Korea: ಮತ್ತೆ ಬಲೂನ್ವಾರ್
Canada PM : ಪ್ರಧಾನಿ ಟ್ರುಡೋ ರಾಜೀನಾಮೆಗೆ ಸಂಸದರ ಒತ್ತಡ-ಅ.28 ಅಂತಿಮ ಗಡುವು!
MUST WATCH
ಹೊಸ ಸೇರ್ಪಡೆ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ
Ratan Tata; ಅಡುಗೆಯವರು, ನಾಯಿಗೂ ವಿಲ್ ಬರೆದಿರುವ ಟಾಟಾ!
Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ
T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್ ವಿಜಯ್ಕುಮಾರ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.