Israel;ಸ್ಫೋಟಗೊಂಡ ಪೇಜರ್ ಖರೀದಿಸಿದ್ದು ಇರಾನ್?: ಅಚ್ಚರಿ ವಿಚಾರ ಬಹಿರಂಗ
ಇರಾನ್ ಮೇಲೆ ಸೈಬರ್ ದಾಳಿ: ಅಣ್ವಸ್ತ್ರ ಕೇಂದ್ರಗಳೇ ಟಾರ್ಗೆಟ್
Team Udayavani, Oct 13, 2024, 6:41 AM IST
ಟೆಹರಾನ್: ಲೆಬನಾನ್ನಾದ್ಯಂತ ಸ್ಫೋಟಗೊಂಡ ಹೆಜ್ಬುಲ್ಲಾದ ಪೇಜರ್ಗಳಿಗೆ ಸಂಬಂಧಿಸಿ ಇರಾನ್ನ ಇಸ್ಲಾಮಿಕ್ ರೆವೊಲ್ಯೂಶನರಿ ಗಾರ್ಡ್ ಕೋರ್ (ಐಆರ್ಜಿಸಿ)ನ ಮಾಜಿ ಅಧಿಕಾರಿಯೊಬ್ಬರು ಅಚ್ಚರಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಸ್ಫೋಟ ಗೊಂಡ ಪೇಜರ್ಗಳನ್ನು ಇರಾನ್ನ ಸಂಸ್ಥೆಯೇ ಖರೀದಿಸಿತ್ತು ಎಂದು ಅವರು ಹೇಳಿದ್ದಾರೆ. ಇರಾನ್ನ ಸುದ್ದಿ ವಾಹಿನಿಯೊಂದರಲ್ಲಿ ಅವರು ಈ ವಿಚಾ ರ ಬಹಿರಂಗ ಪಡಿಸಿದ್ದಾರೆ. ಆದರೆ 1 ಗಂಟೆಯ ಬಳಿಕ ಅದೇ ಸುದ್ದಿ ವಾಹಿನಿಯು ಈ ವಿಚಾರವನ್ನು ನಿರಾಕರಿಸಿದೆ. ತಜ್ಞ ಮಸೌದ್ ಅಸದೊಲ್ಲಾಹಿ, ಹೆಜ್ಬುಲ್ಲಾ ನೇರವಾಗಿ ಪೇಜರ್ ಖರೀದಿಸಿದರೆ ಅನುಮಾನ ಬರುತ್ತದೆ ಎಂಬ ಕಾರ ಣಕ್ಕೆ ಇರಾನ್ನ ಸಂಸ್ಥೆಯೊಂದಕ್ಕೆ ಖರೀದಿಸಲು ಹೇಳಿತ್ತು. ಆ ಸಂಸ್ಥೆ ತೈವಾನ್ನಿಂದ 5 ಸಾವಿರ ಪೇಜರ್ಗಳನ್ನು ಖರೀದಿಸಿ ಹೆಜ್ಬುಲ್ಲಾಗೆ ನೀಡಿತ್ತು’ ಎಂದಿದ್ದರು.
ಇರಾನ್ ಮೇಲೆ ಸೈಬರ್ ದಾಳಿ: ಅಣ್ವಸ್ತ್ರ ಕೇಂದ್ರಗಳೇ ಟಾರ್ಗೆಟ್
ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡು ವೆಯೇ ಇರಾನ್ ಸರಕಾರದ ಮೇಲೆ ಶನಿವಾರ ದೊಡ್ಡ ಮಟ್ಟ ದಲ್ಲಿ ಸೈಬರ್ ದಾಳಿ ನಡೆದಿದೆ. ದಾಳಿಯಲ್ಲಿ ಸರಕಾರ ಮತ್ತು ಪರ ಮಾಣು ಕೇಂದ್ರಗಳನ್ನು ಗುರಿಯಾಗಿಸಿ ಕೊಳ್ಳಲಾಗಿದೆ ಎಂದು ಇರಾನ್ ಸರಕಾರ ತಿಳಿಸಿದೆ.
ಸರಕಾರದ 3 ಅಂಗಗಳಾದ ಶಾಸ ಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಸೈಬರ್ ದಾಳಿ ನಡೆದಿದೆ. ಇಲ್ಲಿದ್ದ ಎಲ್ಲ ಮಾಹಿತಿ ಯನ್ನು ಕದಿಯಲಾಗಿದೆ. ನಮ್ಮ ಅಣು ಕೇಂದ್ರಗಳನ್ನು ದಾಳಿಯಲ್ಲಿ ಗುರಿ ಮಾಡಿ ಕೊಳ್ಳಲಾಗಿದೆ ಎಂದು ಇರಾನ್ ಹೇಳಿದೆ. ದಾಳಿಯಲ್ಲಿ ಇಂಧನ ಪೂರೈಕೆ, ಪೌರಾ ಡಳಿತ, ಸಂಚಾರ, ಬಂದರು ಮತ್ತಿತರ ಪ್ರಮುಖ ವ್ಯವಸ್ಥೆ ಗಳ ಮೇಲೂ ದಾಳಿ ನಡೆದಿದೆ. ಇರಾನ್ನ ಪೆಟ್ರೋ ಲಿಯಂ ಉತ್ಪನ್ನಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಈ ಸೈಬರ್ ದಾಳಿಯೂ ನಡೆದಿದೆ.
ಇಸ್ರೇಲ್ಗೆ ನೆರವು ನೀಡಿದರೆ ಜೋಕೆ: ಇರಾನ್ ಎಚ್ಚರಿಕೆ
“ಇಸ್ರೇಲ್ಗೆ ನೆರವಾದರೆ ಸುಮ್ಮನಿರಲ್ಲ’ ಎಂದು ತೈಲ ಉತ್ಪಾದಕ ರಾಷ್ಟ್ರ ಗಳು, ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಇರಾನ್ ಎಚ್ಚರಿಸಿದೆ. ಸೌದಿ ಅರೇಬಿ ಯಾ, ಯುಎಇ, ಜೋರ್ಡಾನ್, ಕತಾರ್ ಮುಂತಾದ ದೇಶಗಳಲ್ಲಿನ ಸೇನಾ ಮೂಲಸೌಕರ್ಯ ಅಥವಾ ವಾಯು ಪ್ರದೇಶ ಬಳಸಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇರಾನ್ ಇಂಥ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 105ನೇ ಸ್ಥಾನ
Bangladesh; ಮತ್ತೆ ಹಿಂದೂಗಳು ಗುರಿ: 35ಕ್ಕೂ ಹೆಚ್ಚು ಕಡೆ ದುರ್ಗಾ ಪೆಂಡಾಲ್ ಮೇಲೆ ದಾಳಿ
ವಿಮಾನ ಚಾಲನೆ ವೇಳೆ ಪೈಲಟ್ಗೆ ಅನಾರೋಗ್ಯ: ಪತ್ನಿಯಿಂದ ತುರ್ತು ಭೂಸ್ಪರ್ಶ
Nobel Peace Prize: ಜಪಾನ್ನ ಹಿಂಡಾಕ್ಯೋ ಸಂಸ್ಥೆಗೆ ಶಾಂತಿ ನೊಬೆಲ್
Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Ratan Naval Tata: ರತನ್ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು
Kottigehara: ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಪ್ರವಾಸಿಗನಿಗೆ ಗಾಯ
Pakistan Cricket: ಟೆಸ್ಟ್ನಿಂದ ಬಾಬರ್ಗೆ ಗೇಟ್ ಪಾಸ್; ಪಾಕ್ ತಂಡದಲ್ಲಿ ಏನಾಗುತ್ತಿದೆ?
Darshan; ವಿಜಯಲಕ್ಷ್ಮೀ ಪೋಸ್ಟ್ ವೈರಲ್: ದರ್ಶನ್ ಬಿಡುಗಡೆಯ ಸೂಚನೆ?
Kampli- ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.