Israel vs Iran; ಯುದ್ದೋನ್ಮಾದ ತೀವ್ರ ಹೆಚ್ಚಳ: ಇರಾನ್ಗೆ ಅಮೆರಿಕ ಎಚ್ಚರಿಕೆ
ಕ್ಷಿಪಣಿ ಮಳೆಗೆ ಪ್ರತಿಯುತ್ತರ ನೀಡಿದರೆ...'ಅಗಾಧ ವಿನಾಶ'ಸಂಭವಿಸುತ್ತದೆ ಎಂದ ಇರಾನ್!
Team Udayavani, Oct 2, 2024, 8:21 AM IST
ಟೆಹರಾನ್ : ಯುದ್ದೋನ್ಮಾದ ತೀವ್ರವಾಗಿ ಹೆಚ್ಚಾಗಿದ್ದು ಇರಾನ್ ಬುಧವಾರ(ಅ2 )ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ಗೆ ಅಮೆರಿಕ ಎಚ್ಚರಿಕೆ ನೀಡಿದೆ.
ಇಸ್ರೇಲ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿ ಇರಾನ್ನ ದಾಳಿಯನ್ನು ನಿಷ್ಪರಿಣಾಮಕಾರಿ ಎಂದು ಬಣ್ಣಿಸಿದರು. ಇಸ್ರೇಲ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.
ಅಮೆರಿಕ ಸೇನಾ ಪಡೆಗಳು ಇಸ್ರೇಲ್ ಮೇಲಿನ ದಾಳಿಯನ್ನು ಸೋಲಿಸಲು ಸಹಾಯ ಮಾಡಿದ್ದು, ಬೈಡೆನ್ ಆಡಳಿತವು ಇಸ್ರೇಲಿ ಅಧಿಕಾರಿಗಳೊಂದಿಗೆ ಮುಂದಿನ ಕ್ರಮಗಳ ಕುರಿತು ಸಮಾಲೋಚನೆ ನಡೆಸುತ್ತಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.
ಧ್ವಂಸ ಮಾಡುವ ಪ್ರತಿಜ್ಞೆ
ಇರಾನ್ ಮಂಗಳವಾರ ರಾತ್ರಿ ಏಕಾಏಕಿ ಇಸ್ರೇಲ್ ಮೇಲೆ 180ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗಿದೆ.
ಇಸ್ರೇಲ್ಗೆ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿ, ನಾವು ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರ ನೀಡಿದರೆ ಧ್ವಂಸ ಮಾಡುವ ಪ್ರತಿಜ್ಞೆ ಮಾಡಿದೆ.
ಇಸ್ರೇಲಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಶೀಘ್ರ ಪ್ರತೀಕಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಇರಾನ್ ತನ್ನ ಕ್ಷಿಪಣಿ ದಾಳಿಯನ್ನು ಮತ್ತಷ್ಟು ಹೆಚ್ಚಿಸದೆ ಮುಕ್ತಾಯಗೊಳಿಸಿರುವುದಾಗಿ ಘೋಷಿಸಿತು.
ಇರಾನ್ ಮಂಗಳವಾರ ಕ್ಷಿಪಣಿಗಳ ಸುರಿಮಳೆ ಪ್ರಾರಂಭಿಸಿ ಟೆಲ್ ಅವೀವ್ ಬಳಿಯ ಮೂರು ಸೇನಾ ನೆಲೆಗಳು ಮತ್ತು ಪ್ರಮುಖ ವಾಯು ಮತ್ತು ರಾಡಾರ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದೆ. 90 ಪ್ರತಿಶತ ಕ್ಷಿಪಣಿಗಳು ತಮ್ಮ ಗುರಿಗಳನ್ನು ತಲುಪಿವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ. ಇಸ್ರೇಲಿ ಅಧಿಕಾರಿಗಳಿಂದ ಯಾವುದೇ ಗಾಯಗಳ ಬಗ್ಗೆ ಇದುವರೆಗೂ ವರದಿಯಾಗಿಲ್ಲ.
ಇಸ್ರೇಲ್ ಪ್ರತೀಕಾರ ತೀರಿಸಿಕೊಂಡರೆ “ಅಗಾಧ ವಿನಾಶ” ಸಂಭವಿಸುತ್ತದೆ ಎಂದು ಇರಾನ್ ಎಚ್ಚರಿಸಿದೆ. ಇರಾನ್ ಸಶಸ್ತ್ರ ಪಡೆಗಳು ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ “ನಿರ್ಣಾಯಕ ಪ್ರತಿಕ್ರಿಯೆ” ನೀಡಲಾಗಿದೆ ಎಂದು ಹೇಳಿದ್ದು, ‘ಇರಾನ್ ಯುದ್ಧಪಿಪಾಸು ಅಲ್ಲ, ಆದರೆ ಯಾವುದೇ ಬೆದರಿಕೆಗಳನ್ನು ದೃಢವಾಗಿ ವಿರೋಧಿಸುತ್ತದೆ. ಇದು ಕೇವಲ ನಮ್ಮ ಶಕ್ತಿಯ ಒಂದು ನೋಟವಾಗಿದೆ. ಇರಾನ್ ಅನ್ನು ಪ್ರಚೋದಿಸಬೇಡಿ” ಎಂದು ನೆತನ್ಯಾಹು ಅವರು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್ ಗೆ ಇಸ್ರೇಲ್ ಸಂದೇಶ!
India-US;ಆ್ಯಂಟೋನಿ ಬ್ಲಿಂಕೆನ್ ಜತೆ ಜೈಶಂಕರ್ ಮಹತ್ವದ ಮಾತುಕತೆ
ಮಾಜಿ ಅಧ್ಯಕ್ಷ, ನೊಬೆಲ್ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್ ಗೆ 100ನೇ ವರ್ಷದ ಸಂಭ್ರಮ
Attack on Israel: ಹೆಜ್ಬುಲ್ಲಾ ಬಾಸ್ ಹತ್ಯೆ ಬೆನ್ನಲ್ಲೇ ಇರಾನ್ 180 ಕ್ಷಿಪಣಿಗಳ ಮಳೆ
Nigeria: ಸಿಂಹಕ್ಕೆ ಊಟ ಕೊಡಲು ಹೋಗಿ ಆಹಾರವಾದ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.