ಅಂದು ಲಕ್ಕಿಡಿಪ್ ನಲ್ಲಿ ಸಾವಿರ ಕೋಟಿ ಜಾಕ್ ಪಾಟ್ ಗೆದ್ದಾತನ ಜೀವನ ಇಂದು…
Team Udayavani, Oct 29, 2022, 3:25 PM IST
ಲಂಡನ್ : ಸಿರಿತನ ಎನ್ನುವುದು ಒಂದೇ ರಾತ್ರಿಯಲ್ಲಿ ಬರಲ್ಲ. ಯಶಸ್ಸಿಗೆ ಅಡ್ಡದಾರಿಗಳಿಲ್ಲ ಪರಿಶ್ರಮವೊಂದೇ ಅದಕ್ಕಿರುವ ಹಾದಿ. ಲಕ್ಕಿಡಿಪ್ ನಲ್ಲಿ ಕೋಟಿಗಟ್ಟಲೇ ಹಣ ಗೆದ್ದು ದಿನ ಕಳೆಯುತ್ತಿರುವ ವ್ಯಕ್ತಿಯೊಬ್ಬನ ಸುದ್ದಿಯಿದು.
ದಕ್ಷಿಣ ಲಂಡನ್ ಮೂಲದ , ವೃತ್ತಿಯಲ್ಲಿ ಮ್ಯೆಕಾನಿಕ್ ಕೆಲಸ ಮಾಡುವ ನೀಲ್ ಟ್ರಾಟರ್ ಅವರಿಗೆ ಅದೃಷ್ಟ ಹಾಗೂ ಜೀವನವನ್ನೇ ಬದಲಾಯಿಸುವ ಅನಿರೀಕ್ಷಿತ ಆನಂದವೊಂದು 2014 ರ ಮಾರ್ಚ್ ತಿಂಗಳಿನಲ್ಲಿ ಎದುರಾಗುತ್ತದೆ. ಅಂದಾಜು 1000 ಸಾವಿರ ರೂ. ಮೌಲ್ಯದ ಯೂರೋ ಮಿಲಿಯನ್ ಲಕ್ಕಿಡಿಪ್ ( ಆ ಭಾಗದಲ್ಲಿ ಜನಪ್ರಿಯ ಲಾಟರಿ ಟಿಕೆಟ್) ಅನ್ನು ಖರೀದಿಸಿದ್ದರು. ಇದರಲ್ಲಿ ಒಂದೊಂದು ನಂಬರ್ ಬಂದ ಹಾಗೆ ಒಂದಷ್ಟು ಹಣ ಸಿಗುತ್ತದೆ. ಆದರೆ ಒಟ್ಟು ಆರು ನಂಬರ್ ಗಳು ಹೊಂದಿಕೆ ಆದರೆ ಅಂಥವರಿಗೆ ಜಾಕ್ ಪಾಟ್ ಹಣ ಸಿಗುತ್ತದೆ. ಅದರ ಮೌಲ್ಯ 10,31,14,35,240.99 ( ಸಾವಿರದ ಮೂವತ್ತೊಂದು ಕೋಟಿ ಹದಿನಾಲ್ಕು ಲಕ್ಷದ ಮೂವತ್ತೈದು ಸಾವಿರಾದ, ಇನ್ನೂರ ನಲವತ್ತು ರೂ.) ಅದೃಷ್ಟಕ್ಕೆ ಈ ಜಾಕ್ ಪಾಟ್ ನ್ನು ಸಾಮಾನ್ಯ ಮ್ಯೆಕಾನಿಕ್ ಆಗಿದ್ದ ನೀಲ್ ಟ್ರಾಟರ್ ಗೆಲ್ಲುತ್ತಾರೆ.
ಇಷ್ಟು ದೊಡ್ಡ ಮಟ್ಟದ ಹಣ ಗೆದ್ದ ಬಳಿಕ ನೀಲ್ ಟ್ರಾಟರ್ ಬದುಕು ಯಾವ ಸಿರಿವಂತನ ಬದುಕಿಗೂ ಕಡಿಮೆಯಾಗಲ್ಲ. ದುಬಾರಿ ಕಾರು ( ಜಾಗ್ವಾರ್ ಮತ್ತು ಪೋರ್ಚಸ್ ಕಾರು) ದೊಡ್ಡ ಬಂಗಲೆ, 400 ಎಕರೆ ಖಾಸಗಿ ಜಾಗವನ್ನು ಪಡೆಯುತ್ತಾರೆ. ಇಷ್ಟು ದೊಡ್ಡ ಶ್ರೀಮಂತನಾದ ನೀಲ್ ಟ್ರಾಟರ್ ಇದ್ದ ಮ್ಯೆಕಾನಿಕ್ ಕೆಲಸವನ್ನು ಬಿಟ್ಟು ದುಬಾರಿ ಜೀವನವನ್ನು ನಡೆಸಲು ಆರಂಭಿಸುತ್ತಾರೆ. ಜಗತ್ತಿನಲ್ಲಿ ಅನುಭವಿಸುವ ಎಲ್ಲಾ ಸುಖ ಜೀವನವನ್ನು ಅನುಭವಿಸಿದ ನೀಲ್ ಟ್ರಾಟರ್ ಶ್ರೀಮಂತನಾದರೂ ಮನೆಯಲ್ಲಿಯೇ ಇದ್ದಾರೆ. ಯಾವ ಕೆಲಸವನ್ನು ಮಾಡದೇ ಇಡೀ ದಿನ ಟಿವಿ ನೋಡುತ್ತಲೇ ಕೂರುವ ಅವರ ಸಿರಿತನದ ಜೀವನ ಬೋರಿಂಗ್ ಆಗಿದೆ ಎಂದು ಅವರೇ ಸ್ವತಃ ಹೇಳುತ್ತಾರೆ. ಕೆಲಸ ಮಾಡದೇ ಇರುವುದು ‘ಅಡ್ಜಸ್ಟ್ ಮಾಡಿಕೊಳ್ಳುವುದು ವಿಚಿತ್ರ’ ಎಂದ ಅವರು, ಆಗಾಗ್ಗೆ ಮನೆಯಲ್ಲಿ ದಿನವಿಡೀ ಟಿವಿ ನೋಡುವುದು ‘ಸಾಕಷ್ಟು ಬೇಸರ’ವಾಗಿದೆʼ. ಶ್ರೀಮಂತಿಕೆಯ ಜೀವನ ಸ್ವಲ್ಪ ಬೋರಿಂಗ್ ಆಗಿದೆ. ಹೊಂದಿಕೊಳ್ಳಲು ತುಂಬಾ ಕಷ್ಟವಾಗಿದೆ ಎಂಬುದು ನೀಲ್ ಟ್ರಾಟರ್ ಅಭಿಪ್ರಾಯವಾಗಿದೆ
ಲಾಟರಿಯನ್ನು ನಡೆಸುವ ಕ್ಯಾಮೆಲಾಟ್ ಗ್ರೂಪ್ ದೊಡ್ಡ ಮೊತ್ತದ ಹಣವನ್ನು ಗೆದ್ದ ನೀಲ್ ಟ್ರಾಟರ್ ಗೆ ಹಣವನ್ನು ತುಂಬಾ ಬೇಗ ವ್ಯಯಿಸಬೇಡಿ ಎಂದು ತಿಳಿಸಿತ್ತು.ಲಾಟರಿ ಗೆದ್ದ ಬಳಿಕ ತನ್ನ ಮೆಚ್ಚಿನ ವೇಗದ ಕಾರನ್ನು ಓಡಿಸುವ ಕನಸನ್ನು ನೀಲ್ ಟ್ರಾಟರ್ ನನಸಾಗಿಸಿಕೊಂಡಿದ್ದಾರೆ ಎಂದು ʼದಿ ಸನ್ʼ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Terrorist Organization: ಹಮಾಸ್ ಉಗ್ರ ನಾಯಕ ಯಾಹ್ಯಾ ಸಿನ್ವರ್ ಹತ್ಯೆ
National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್ ಸ್ಮರಣೆಗೆ ಸರಕಾರ ಕೊಕ್
Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ
Argentina: ಹೋಟೆಲ್ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು
Oxford University: ಆಕ್ಸ್ಫರ್ಡ್ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್ನಲ್ಲಿ
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.