16 ತಿಂಗಳ ಮಗುವನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು 10 ದಿನದ ಪ್ರವಾಸಕ್ಕೆ ತೆರಳಿದ ಮಹಾತಾಯಿ

ಯಾವ ತಾಯಿಯೂ ಈ ರೀತಿಯ ಕೆಲಸ ಮಾಡಲು ಸಾಧ್ಯವಿಲ್ಲ...

Team Udayavani, Jun 26, 2023, 6:18 PM IST

16 ತಿಂಗಳ ಮಗುವನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು 10 ದಿನದ ಪ್ರವಾಸಕ್ಕೆ ತೆರಳಿದ ಮಹಾತಾಯಿ

ಒಹಿಯೋ: ಹುಟ್ಟಿದ ಮಕ್ಕಳನ್ನು ಒಂದು ಹಂತಕ್ಕೆ ತರುವಲ್ಲಿ ತಾಯಿಯ ಪಾತ್ರ ಮಹತ್ವದ್ದು, ಮಕ್ಕಳು ಏನೇ ತಪ್ಪು ಮಾಡಿದರು ಮೊದಲು ಅದನ್ನು ಕ್ಷಮಿಸುವುದು ತಾಯಿ ಹಾಗಾಗಿ ತಾಯಿ ತ್ಯಾಗಮಯಿ ಎಂದು ಕರೆಯುತ್ತಾರೆ, ತನ್ನ ಮಕ್ಕಳಿಗಾಗಿ ತಾಯಿ ಯಾವ ತ್ಯಾಗಕ್ಕೂ ತಯಾರಾಗಿರುತ್ತಾಳೆ ಹಾಗಾಗಿ ಮಕ್ಕಳು ಮನೆಯಲ್ಲಿ ತಮ್ಮ ಬೇಕು ಬೇಡಗಳನ್ನು ಮೊದಲು ಹೇಳುವುದು ತಾಯಿ ಬಳಿ, ಹಾಗಿಗಿ ತಾಯಿ ಮಕ್ಕಳ ಬಾಂಧವ್ಯಕ್ಕೆ ಅಷ್ಟು ಮಹತ್ವವಿದೆ ಆದರೆ ಅಮೇರಿಕಾದಲ್ಲಿ ಒಬ್ಬ ತಾಯಿ ಇದಕ್ಕೆಲ್ಲಾ ವಿರುದ್ಧ ಎಂಬಂತೆ ಕಾಣಿಸಿಕೊಂಡಿದ್ದಾರೆ ಅದೇನೆಂದರೆ ಕೇವಲ 16 ತಿಂಗಳ ಹೆಣ್ಣು ಮಗುವನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ತಾಯಿ ಹತ್ತು ದಿನ ಪ್ರವಾಸಕ್ಕೆ ತೆರಳಿದ ಪ್ರಕರಣವೊಂದು ನಡೆದಿದ್ದು ಹತ್ತು ದಿನದ ಬಳಿಕ ತಾಯಿ ಮನೆಗೆ ಬಂದು ನೋಡಿದಾಗ ಮಗು ಮನೆಯೊಳಗಿತ್ತು ಆದರೆ ಜೀವಂತವಾಗಿರಲಿಲ್ಲ…

ಘಟನೆ ಏನು : ಅಮೆರಿಕಾದ ಓಹಿಯೋದ ಕ್ರಿಸ್ಟಲ್ ಎ. ಕ್ಯಾಂಡೆಲಾರಿಯೊ ಎಂಬ ಮಹಿಳೆ ಹತ್ತು ದಿನಗಳ ತಿರುಗಾಟಕ್ಕೆ ಹೋಗಿದ್ದಾಳೆ, ಆದರೆ ತನ್ನ 16 ತಿಂಗಳ ಮಗು ಜೈಲಿನ್ ಅನ್ನು ಜೊತೆಗೆ ಕರೆದುಕೊಂಡು ಹೋಗುವ ಬದಲು ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಆದರೆ ಆ ಪುಟ್ಟ ಮಗುವಿಗೆ ತಾಯಿ ಎಲ್ಲಿಗೆ ಹೋಗಿದ್ದಾಳೆ ಎಂಬ ವಿಚಾರಣೆ ತಿಳಿದಿರುವುದಿಲ್ಲ ತನಗೆ ಹಸಿವಾದಾಗ ಕೂಗಿದರೆ ತಾಯಿ ಬಂದು ಹಾಲು ಕೊಡುತ್ತಾಳೆ ಎಂದಷ್ಟೇ ಆ ಸಮಯದಲ್ಲಿ ಮಗುವಿಗೆ ಗೊತ್ತು ಆದರೆ ಆ ಮಹಾತಾಯಿ ಪುಟ್ಟ ಮಗುವನ್ನು ಮನೆಯೊಳಗೆ ಬಿಟ್ಟು ಪ್ರವಾಸಕ್ಕೆ ತೆರಳಿದ್ದಾಳೆ ಹತ್ತು ದಿನ ಕಳೆದು ಮನೆಗೆ ಬಂದಾಗ ಮನೆಯೊಳಗೆ ನಿಶಬ್ದವಾಗಿತ್ತು ಮಗುವಿನ ಚಲನವಲನ ಕೇಳುತ್ತಿರಲಿಲ್ಲ ಮನೆಯೊಳಕೆ ಕಣ್ಣಾಡಿಸಿ ನೋಡಿದಾಗ ಮಗು ಮಲಗಿದ ರೀತಿಯಲ್ಲೇ ಕೊನೆಯುಸಿರೆಳೆದಿತ್ತು. ಗಾಬರಿಗೊಂಡ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಮಗು ಮೃತಪಟ್ಟಿರುವುದು ದೃಢಪಟ್ಟಿದೆ, ಆದರೂ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಮಗು ಡಿಹೈಡ್ರೇಷನ್​ನಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಮಗುವಿನ ವಿಚಾರ ತಾಯಿಯಲ್ಲಿ ಕೇಳಿದಾಗ ತಾಯಿ ತಾನು ತನ್ನ ಮಗುವನ್ನು ಮನೆಯಲ್ಲಿ ಬಿಟ್ಟು ಹತ್ತು ದಿನಗಳ ಕಾಲ ತಿರುಗಾಡಲು ಹೋಗಿದ್ದೆ ಅಲ್ಲದೆ ಪಕ್ಕದ ಮನೆಯವರಲ್ಲಿ ಮಗುವನ್ನು ನೋಡಿಕೊಳ್ಳಲು ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.

ಪಕ್ಕದ ಮನೆಯವರಲ್ಲೂ ಮಗುವಿನ ವಿಚಾರ ಕೇಳಿದಾಗ ನಮಗೆ ಮಗುವನ್ನು ನೋಡಿಕೊಳ್ಳಿ ಎಂದಷ್ಟೇ ಹೇಳಿದ್ದಾರೆ ಆದರೆ ಮನೆ ಬಿಟ್ಟು ಹೋಗುವ ವೇಳೆ ಮಗುವಿನ ತಾಯಿ ನಮ್ಮ ಬಳಿ ಮಗುವಿನ ವಿಚಾರ ಹೇಳಿರಲಿಲ್ಲ ಹಾಗಾಗಿ ತಾಯಿ ಜೊತೆ ಮಗುವನ್ನು ಕರೆದೊಯ್ದಿರಬಹುದು ಎಂದು ಕೊಂಡಿದ್ದೆವು ಎಂದು ಹೇಳಿದ್ದಾರೆ.

ಬೇಜವಾಬ್ದಾರಿ ವಹಿಸಿದ ಮಗುವಿನ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಗೆ ನಡೆಸಲು ಕ್ರಮ ಕೈಗೊಂಡಿದ್ದಾರೆ 16 ತಿಂಗಳ ಎಳೆ ಮಗುವನ್ನು ಮನೆಯೊಳಗೆ ಬಿಟ್ಟು ತಾಯಿ ಹೋಗಿದ್ದಾದರೂ ಎಲ್ಲಿಗೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮೊದಲು ನಿಮ್ಮ ಮನೆಯನ್ನು ನೋಡಿಕೊಳ್ಳಿ; ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಟಾಂಗ್

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.