![Udupi: ಗೀತಾರ್ಥ ಚಿಂತನೆ-129: ಓನರ್ಶಿಪ್ ಮೇಲೇ ಕಣ್ಣು!](https://www.udayavani.com/wp-content/uploads/2024/12/puttige-shree-1-415x253.jpg)
Nobel; ಜಪಾನ್ ನ ಪರಮಾಣು ಬಾಂಬ್ ಸರ್ವೈವರ್ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ
ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನ...
Team Udayavani, Oct 11, 2024, 4:08 PM IST
![1-nobelll](https://www.udayavani.com/wp-content/uploads/2024/10/1-nobelll-620x348.jpg)
ಹೊಸದಿಲ್ಲಿ: 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ಪರಮಾಣು ಬಾಂಬ್ ಸರ್ವೈವರ್ ಸಂಸ್ಥೆ ನಿಹಾನ್ ಹಿಡಾಂಕ್ಯೊಗೆ ನೀಡಲಾಗುತ್ತಿದೆ.
ನಿಹಾನ್ ಹಿಡಾಂಕ್ಯೊ ಹಿರೋಷಿಮಾ ಮತ್ತು ನಾಗಸಾಕಿಯ ಮೇಲಾದ ಪರಮಾಣು ಬಾಂಬ್ ಬದುಕುಳಿದವರನ್ನು (ಹಿಬಾಕುಶಾ) ಪ್ರತಿನಿಧಿಸುತ್ತದೆ. 47 ಜಪಾನೀಸ್ ಸದಸ್ಯರ ಗುಂಪು ಬಹುತೇಕ ಎಲ್ಲಾ ಸಂಘಟಿತ ಹಿಬಾಕುಶಾವನ್ನು ಒಂದುಗೂಡಿಸಿದೆ. ಸಂಸ್ಥೆಯ ನಾಯಕರು ಮತ್ತು ಸದಸ್ಯರೆಲ್ಲರೂ ದಾಳಿಯಲ್ಲಿ ಬದುಕುಳಿದವರಾಗಿದ್ದಾರೆ.
“ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನಗಳಿಗಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂಬ ಸಾಕ್ಷ್ಯವನ್ನು ಪ್ರದರ್ಶಿಸಲು” ಸಂಸ್ಥೆಯು ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ನಾರ್ವೇ ನೊಬೆಲ್ ಸಮಿತಿ ಘೋಷಿಸಿದೆ.
ಎರಡನೇ ವಿಶ್ವ ಯುದ್ಧದ ವೇಳೆ 1945 ರ ಆಗಸ್ಟ್ 6 ರಂದು ಬೆಳಗ್ಗೆ ಜಪಾನ್ ಹಿರೋಷಿಮಾದ ಮೇಲೆ ಅಮೆರಿಕ 15-ಕಿಲೋಟನ್ ಅಣುಬಾಂಬ್ ಅನ್ನು ಹಾಕಿತ್ತು. ವರ್ಷದ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 140,000 ಕ್ಕೆ ಏರಿತ್ತು. ಭೀಕರ ದಾಳಿಯ ಮೂರು ದಿನಗಳ ನಂತರ ಅಮೆರಿಕನ್ನರು ನಾಗಸಾಕಿಯ ಮೇಲೆ ಪ್ಲುಟೋನಿಯಂ ಬಾಂಬ್ ಅನ್ನು ಬೀಳಿಸಿದ್ದರು ಅದು 74,000 ಜನರನ್ನು ಬಲಿ ಪಡೆದಿತ್ತು.
ಟಾಪ್ ನ್ಯೂಸ್
![Udupi: ಗೀತಾರ್ಥ ಚಿಂತನೆ-129: ಓನರ್ಶಿಪ್ ಮೇಲೇ ಕಣ್ಣು!](https://www.udayavani.com/wp-content/uploads/2024/12/puttige-shree-1-415x253.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-lasike](https://www.udayavani.com/wp-content/uploads/2024/12/1-lasike-150x84.jpg)
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
![Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!](https://www.udayavani.com/wp-content/uploads/2024/12/ISRAEL-SYRIA--150x104.jpg)
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
![ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ](https://www.udayavani.com/wp-content/uploads/2024/12/us-1-150x100.jpg)
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
![Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ](https://www.udayavani.com/wp-content/uploads/2024/12/Moscow-150x96.jpg)
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
![Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ](https://www.udayavani.com/wp-content/uploads/2024/12/Flood-150x84.jpg)
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.