![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-415x252.jpg)
ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್ ಹಾರಿಸಿದ ಉ.ಕೊರಿಯ
Team Udayavani, May 30, 2024, 7:25 AM IST
![ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್ ಹಾರಿಸಿದ ಉ.ಕೊರಿಯ](https://www.udayavani.com/wp-content/uploads/2024/05/North-Korean-620x363.jpg)
ಸಿಯೋಲ್ (ಉ.ಕೊರಿಯ): 1950ರ ಬಳಿಕ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ನಡುವೆ ನಡೆಯುತ್ತಿರುವ “ಬಲೂನ್ ವಾರ್’ ಈಗ ವಿಪರೀತಕ್ಕೆ ಹೋಗಿದೆ. ಉತ್ತರ ಕೊರಿಯ ಬಲೂನ್ಗಳ ಮೂಲಕ ಮಲ, ಕಸ, ಗೊಬ್ಬರ ತುಂಬಿದ ಪ್ಲಾಸ್ಟಿಕ್ಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯ ಸಾಕ್ಷಿಸಮೇತ ಆರೋಪಿಸಿದೆ.
1950ರಿಂದ 1953ರ ವರೆಗೆ ಎರಡೂ ದೇಶಗಳ ನಡುವೆ ಯುದ್ಧ ನಡೆದಿತ್ತು. ಅನಂತರ ಹೀಗೆ ಬಲೂನ್ಗಳ ಮೂಲಕ ಕರಪತ್ರ, ಇತರ ವಸ್ತುಗಳನ್ನು ಹಾರಿಬಿಡುವುದು ನಡೆಯುತ್ತಿತ್ತು. ಈಗ ಪರಿಸ್ಥಿತಿ ಕೆಳಮಟ್ಟಕ್ಕೆ ಹೋಗಿದೆ.
“ಕಸ, ಗೊಬ್ಬರ, ಗಲೀಜು ಪದಾರ್ಥಗಳನ್ನು ಉತ್ತರ ಕೊರಿಯವು ದಕ್ಷಿಣ ಕೊರಿಯಕ್ಕೆ ಹಾರಿ ಬಿಡುತ್ತಿದೆ. ಈ ಅಮಾನವೀಯ ಹಾಗೂ ಕೀಳು ಮಟ್ಟದ ಕೃತ್ಯವನ್ನು ಆ ದೇಶ ನಿಲ್ಲಿಸಬೇಕು’ ಎಂದು ದ.ಕೊರಿಯ ಆರೋಪಿಸಿದೆ.
ದೇಶದ ಗಡಿಭಾಗಗಳಲ್ಲಿ, ರಾಜಧಾನಿ ಸಿಯೋಲ್, ಗಿಯಾಂಗ್ಸ್ಯಾಂಗ್ನಲ್ಲಿ ಕಸವನ್ನು ಉತ್ತರ ಕೊರಿಯ ಇಳಿಸಿದೆ. ಇದು ದೇಶದ ಸುರಕ್ಷೆ ಮತ್ತು ಜನರ ಆರೋಗ್ಯಕ್ಕೆ ಬೆದರಿಕೆಯೊಡ್ಡಿದೆ ಎಂದು ದಕ್ಷಿಣ ಕೊರಿಯ ಬೇಸರ ವ್ಯಕ್ತಪಡಿಸಿದೆ.
ಮಂಗಳವಾರ ರಾತ್ರಿಯಿಂದಲೇ ಉತ್ತರ ಕೊರಿಯ ಇಂತಹ ಕೃತ್ಯವನ್ನು ಆರಂಭಿಸಿದೆ. ಬುಧವಾರ ಬೆಳಗ್ಗೆ ಕಸ, ಗಲೀಜು ತುಂಬಿದ 260 ಬಲೂನ್ಗಳು ಪತ್ತೆಯಾಗಿವೆ ಎಂದು ದಕ್ಷಿಣ ಕೊರಿಯದ ಜೆಸಿಎಸ್ (ಭದ್ರತಾಪಡೆಗಳ ಜಂಟಿ ಮುಖ್ಯಸ್ಥರು) ಹೇಳಿದ್ದಾರೆ. ಜೆಸಿಎಸ್ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ, ಪ್ಲಾಸ್ಟಿಕ್ ಚೀಲಗಳನ್ನು ಹೊತ್ತಿರುವ ಬಲೂನ್ಗಳಲ್ಲಿ ಹರಿದ ಕಾಗದಗಳು, ಪ್ಲಾಸ್ಟಿಕ್ ರಾಶಿ, ಗೊಬ್ಬರ, ಇತರ ಕಸಗಳು ಪತ್ತೆಯಾಗಿವೆ. ಗಿಯಾಂಗ್ಸಾಂಗ್ ಪ್ರಾಂತದ ಆಡಳಿತ, ತನ್ನ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದ್ದು, ಮನೆಯಿಂದ ಹೊರಬರಬೇಡಿ ಎಂದು ಸೂಚಿಸಿದೆ.
ಈ ಕೃತ್ಯದ ಮೂಲಕ ಉತ್ತರ ಕೊರಿಯ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂ ಸಿದೆ ಎಂದು ಜೆಸಿಎಸ್ ಆರೋಪಿಸಿದೆ. ದಕ್ಷಿಣ ಕೊರಿಯದ ಹೋರಾಟಗಾರರು ಆಗಾಗ ಉತ್ತರ ಕೊರಿಯಕ್ಕೆ ಕರಪತ್ರ, ಆಹಾರ, ಔಷಧ, ರೇಡಿಯೋ, ದಕ್ಷಿಣ ಕೊರಿಯದ ಸುದ್ದಿ, ಟೀವಿ ಕಾರ್ಯಕ್ರಮಗಳಿರುವ ಯುಎಸ್ಬಿಗಳನ್ನು ಕಳುಹಿಸುತ್ತಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಉತ್ತರ ಕೊರಿಯ ಹೀಗೆ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.
ಏನಿದು ಬಲೂನ್ ವಾರ್?
-1950ರಿಂದ 1953ರ ನಡುವೆ ಎರಡೂ ದೇಶಗಳ ಯುದ್ಧ.
-ಅನಂತರ ಬಲೂನ್ಗಳ ಮೂಲಕ ಪರಸ್ಪರ ವಸ್ತುಗಳನ್ನು ಕಳಿಸುವ ಪದ್ಧತಿ ಆರಂಭ.
-ಈ ಬಾರಿ ದ. ಕೊರಿಯದ ಕೆಲವು ಹೋರಾಟಗಾರರಿಂದ ಉ. ಕೊರಿಯಕ್ಕೆ ಕರಪತ್ರ, ಔಷಧ, ಆಹಾರ, ಯುಎಸ್ಬಿ ರವಾನೆ.
-ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯದಿಂದ ಮಲ, ಕಸ ತುಂಬಿದ ಬಲೂನ್ಗಳ ರವಾನೆ?
ಟಾಪ್ ನ್ಯೂಸ್
![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-lasike](https://www.udayavani.com/wp-content/uploads/2024/12/1-lasike-150x84.jpg)
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
![Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!](https://www.udayavani.com/wp-content/uploads/2024/12/ISRAEL-SYRIA--150x104.jpg)
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
![ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ](https://www.udayavani.com/wp-content/uploads/2024/12/us-1-150x100.jpg)
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
![Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ](https://www.udayavani.com/wp-content/uploads/2024/12/Moscow-150x96.jpg)
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
![Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ](https://www.udayavani.com/wp-content/uploads/2024/12/Flood-150x84.jpg)
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-150x91.jpg)
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
![ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್](https://www.udayavani.com/wp-content/uploads/2024/12/kejriwal-6-150x93.jpg)
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
![BGV-Gruhalkmi](https://www.udayavani.com/wp-content/uploads/2024/12/BGV-Gruhalkmi-150x90.jpg)
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-150x92.jpg)
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
![ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು](https://www.udayavani.com/wp-content/uploads/2024/12/CHIKKAMAGALURU-150x98.jpg)
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.