ಉ.ಕೊರಿಯಾ ಶಕ್ತಿ ಪ್ರದರ್ಶನ


Team Udayavani, Apr 16, 2017, 1:22 PM IST

north.jpg

ವಾಷಿಂಗ್ಟನ್‌/ಪೊÂàಂಗ್ಯಾಂಗ್‌: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಪ್ರಕ್ಷುಬ್ಧ ವಾತಾವರಣವು ಎಲ್ಲಿ ಪರಮಾಣು ಯುದ್ಧಕ್ಕೆ ನಾಂದಿ ಹಾಡುತ್ತದೆಯೋ ಎಂಬ ಭೀತಿಯ ನಡುವೆಯೇ ಶನಿವಾರ ಉತ್ತರ ಕೊರಿಯಾವು ಬೃಹತ್‌ ಸೇನಾ ಪರೇಡ್‌ ನಡೆಸಿ ಬಲ ಪ್ರದರ್ಶನ ಮಾಡಿದೆ. ಈ ಮೂಲಕ ಅಮೆರಿಕದ ದಾಳಿಗೆ ನಾವು ಸರ್ವಸನ್ನದ್ಧರಾಗಿದ್ದೇವೆ ಎಂಬ ಪರೋಕ್ಷ ಎಚ್ಚರಿಕೆಯನ್ನು ಉ.ಕೊರಿಯಾ ನೀಡಿದೆ.

ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ತಾತ ಕಿಮ್‌-2- ಸಂಗ್‌ರ 105ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ಉ.ಕೊರಿಯಾವು ತನ್ನ 6ನೇ ಅಣ್ವಸ್ತ್ರ ಪರೀಕ್ಷೆಯನ್ನು ಅಥವಾ ಪ್ರಮುಖ ಕ್ಷಿಪಣಿ ಪರೀಕ್ಷೆಯನ್ನು ನಡೆಸಲಿದೆ ಎಂದೇ ಅಂತಾರಾಷ್ಟ್ರೀಯ ಸಮುದಾಯ ನಂಬಿತ್ತು. ಅಂದುಕೊಂಡಂತೆ ನಡೆದಿದ್ದೇ ಆದಲ್ಲಿ, ಉ.ಕೊರಿಯಾ ವಿರುದ್ಧ ಯುದ್ಧ ಸಾರಲು ಅಮೆರಿಕ ಕೂಡ ಸಿದ್ಧವಾಗಿ ನಿಂತಿತ್ತು. ಅದಕ್ಕೆಂದೇ, ದಕ್ಷಿಣ ಕೊರಿಯಾದಲ್ಲಿ ಸಮರಾಭ್ಯಾಸ ನಡೆಸಿ, ಕೊರಿಯಾ ಪರ್ಯಾಯ ದ್ವೀಪದಲ್ಲಿ ತನ್ನ ವಿಮಾನವನ್ನೂ ನಿಯೋಜಿಸಿತ್ತು. ಆದರೆ, ಹಾಗಾಗಲಿಲ್ಲ. ಉ.ಕೊರಿಯಾವು ಯಾವುದೇ ಅಣ್ವಸ್ತ್ರ ಪರೀಕ್ಷೆ ನಡೆಸಲಿಲ್ಲ. ಬದಲಿಗೆ, ಸೇನಾ ಪರೇಡ್‌ ನಡೆಸುವ ಮೂಲಕ ವಿಶಿಷ್ಟ ಖಂಡಾಂತರ ಕ್ಷಿಪಣಿ ಸೇರಿದಂತೆ ತನ್ನ ಸೇನಾಶಕ್ತಿಯನ್ನು ವಿಶ್ವಸಮುದಾಯಕ್ಕೆ ತೋರಿಸಿಕೊಟ್ಟಿದೆ.

ದಾಳಿ ಎದುರಿಸಲು ನಾವು ಸಿದ್ಧ: ಈ ವಾರ್ಷಿಕ ಪರೇಡ್‌ನ‌ಲ್ಲಿ ಕಿಮ್‌ ಜಾಂಗ್‌ ಉನ್‌ ಏನನ್ನೂ ಮಾತನಾಡದೇ ಅಚ್ಚರಿ ಮೂಡಿಸಿದರು. ಆದರೆ, ಅವರ ಆಪ್ತ, 2ನೇ ಸ್ಥಾನದಲ್ಲಿರುವ ಅಧಿಕಾರಿ ಚೋ ರ್‍ಯಾಂಗ್‌ ಹೇ, “ಅಮೆರಿಕವು ನಮ್ಮ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಮುಂದಾದರೆ, ಅದನ್ನು ಎದುರಿಸಲು ನಾವು ಸಿದ್ಧ. ಪರಿಪೂರ್ಣ ಯುದ್ಧಕ್ಕೆ ಪ್ರತಿಯಾಗಿ ಪರಿಪೂರ್ಣ ಯುದ್ಧ ನಡೆಸಲು ನಾವು ತಯಾರಿದ್ದೇವೆ. ಹಾಗೆಯೇ, ಅಣ್ವಸ್ತ್ರಗಳಿಂದ ದಾಳಿ ನಡೆಸಿದರೆ, ಅದಕ್ಕೆ ನಮ್ಮದೇ ಶೈಲಿಯಲ್ಲಿ ಅಣ್ವಸ್ತ್ರಗಳಿಂದಲೇ ಪ್ರತಿದಾಳಿ ನಡೆಸುತ್ತೇವೆ’ ಎಂದಿದ್ದಾರೆ. ನಾವು ಇರಾಕ್‌, ಲಿಬಿಯಾವಲ್ಲ: ಇದೇ ವೇಳೆ, ಅಣ್ವಸ್ತ್ರಗಳೇ ಹೊಂದಿರದ ಇರಾಕ್‌ ಹಾಗೂ ಲಿಬಿಯಾ ಮೇಲೆ ಅಮೆರಿಕ ಯುದ್ಧ ನಡೆಸಿದೆ. ನಮ್ಮನ್ನೂ ಇರಾಕ್‌ ಮತ್ತು ಲಿಬಿಯಾದಂತೆಯೇ ಎಂದು ಭಾವಿಸಿದರೆ ಅದು ಅಮೆರಿಕದ ಮೂರ್ಖತನ. ಅವರು ದಾಳಿ ನಡೆಸುತ್ತಿದ್ದರೆ, ಸುಮ್ಮನಿರಲು ನಾವೇನೂ ಇರಾಕ್‌, ಲಿಬಿ ಯಾವಲ್ಲ ಎಂದೂ ಉ.ಕೊರಿಯಾ ಹೇಳಿದೆ.

ಪರೇಡ್‌ನ‌ಲ್ಲಿ ಏನಿದ್ದವು?
ತಮ್ಮಲ್ಲಿ ಎಂತೆಂತಹ ಶಸ್ತ್ರಾಸ್ತ್ರಗಳಿವೆ ಎಂಬುದನ್ನು ಜಗತ್ತಿಗೆ ತೋರಿಸಲೆಂದೇ ಉ.ಕೊರಿಯಾವು ಈ ಸೇನಾ ಪರೇಡ್‌ ಆಯೋಜಿಸಿದಂತಿತ್ತು. ಟ್ರಕ್‌ಗಳಲ್ಲಿ ಕೆಎನ್‌-08 ಸರಣಿಯ ಕ್ಷಿಪಣಿಗಳನ್ನು ಪ್ರದರ್ಶಿಸಲಾಯಿತು. ಇದು ಅತ್ಯಂತ ದೂರದ ಗುರಿಯನ್ನು ತಲುಪುವ ಸಾಮರ್ಥ್ಯವುಳ್ಳ ಕ್ಷಿಪಣಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಎರಡು ರೀತಿಯ ಟಿಇಎಲ್‌ (ಕ್ಷಿಪಣಿ ಉಡಾವಣ ವಾಹನ), ಟ್ಯಾಂಕ್‌ಗಳು, ಬಹು ರಾಕೆಟ್‌ ಉಡಾವಣಾ ವಾಹನಗಳು, ಜಲಾಂತರ್ಗಾಮಿಗಳಿಂದ ಹಾರಿಸುವ ಸಾಲಿಡ್‌-ಫ್ಯೂಯೆಲ್‌ ಕ್ಷಿಪಣಿಗಳು, ಮುಸುಡಾನ್‌ ಕ್ಷಿಪಣಿ, ಉಡಾವಣೆಗೆ ಮೊದಲು ಪತ್ತೆಯೇ ಮಾಡಲಾಗದಂಥ ಹೊಸ ಮಾದರಿಯ ಕ್ಷಿಪಣಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ಪರೇಡ್‌ನ‌ಲ್ಲಿ ಪ್ರದರ್ಶಿಸಲಾಯಿತು. 

ಮಹಾಬಾಂಬ್‌: ಮೃತರ ಸಂಖ್ಯೆ 94ಕ್ಕೇರಿಕೆ
ಅಮೆರಿಕ ಸೇನೆಯು ಗುರುವಾರ ರಾತ್ರಿ ಅಫ‌^ನ್‌ ಮೇಲೆ ನಡೆಸಿದ ಅಣುವೇತರ ಬಾಂಬ್‌ ದಾಳಿಗೆ ಮೃತಪಟ್ಟ ಐಸಿಸ್‌ ಉಗ್ರರ ಸಂಖ್ಯೆ 94ಕ್ಕೇರಿಕೆಯಾಗಿದೆ. ದಾಳಿ ನಡೆದ ಅಚಿನ್‌ ಜಿಲ್ಲೆಯ ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಶನಿವಾರ ಶೋಧ ಕಾರ್ಯ ನಡೆದಿದ್ದು, 94 ಮಂದಿಯ ಮೃತದೇಹ ಪತ್ತೆಯಾಗಿದೆ. ಈ ಪೈಕಿ ನಾಲ್ವರು ಐಸಿಸ್‌ನ ನಾಯಕ ಸ್ಥಾನದಲ್ಲಿದ್ದವರು ಎಂದು ಅಫ‌^ನ್‌ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ, ದಾಳಿಯಲ್ಲಿ ನಾಗರಿಕರಾರೂ ಬಲಿಯಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ದಾಳಿಯಲ್ಲಿ 36 ಮಂದಿ ಸಾವಿಗೀಡಾಗಿದ್ದಾರೆ ಎಂದು ಶುಕ್ರವಾರ ಸರಕಾರ ಅಂದಾಜಿಸಿತ್ತು. ಜತೆಗೆ, ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯನ್ನೂ ಹೇಳಿತ್ತು. 

ಜಗತ್ತಿನಾದ್ಯಂತ ಧಾರ್ಮಿಕ ಸ್ವಾತಂತ್ರ್ಯಕ್ಕೆ ಭಯೋತ್ಪಾದನೆಯೇ ಅತಿದೊಡ್ಡ ಅಪಾಯ. ಹಿಂದೂಗಳು ಸೇರಿದಂತೆ ಎಲ್ಲ ಧರ್ಮಗಳ ಜನರೂ ತಮ್ಮ ಪ್ರಜ್ಞೆಗೆ ತಕ್ಕಂತೆ ಪೂಜಿಸುವಂಥ ಒಳ್ಳೆಯ ನಾಳೆಗಳು ಬರಲಿ ಎನ್ನುವ ಆಶಯ ನಮ್ಮದು.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಟಾಪ್ ನ್ಯೂಸ್

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.