![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 30, 2023, 3:19 PM IST
ಪ್ಯಾರಿಸ್ : ಹದಿಹರೆಯದ ಚಾಲಕನ ಮೇಲೆ ಮಾರಣಾಂತಿಕ ಪೊಲೀಸ್ ಗುಂಡಿನ ದಾಳಿಯ ನಂತರ ಪ್ರತಿಭಟನಾಕಾರರು ಸತತ ಮೂರನೇ ದಿನವೂ ದೇಶಾದ್ಯಂತದ ನಗರಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ಉದ್ವಿಗ್ನ ಸ್ಥಿತಿಯ ನಡುವೆ ಪೊಲೀಸರು 600 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಮಂಗಳವಾರ ಪ್ಯಾರಿಸ್ನ ಪಶ್ಚಿಮದ ನಾಂಟೆರ್ರೆಯಲ್ಲಿ ಟ್ರಾಫಿಕ್ ಸ್ಟಾಪ್ನಲ್ಲಿ ನಡೆದ ಹತ್ಯೆಯ ಬಳಿಕ ಉಂಟಾದ ಆಕ್ರೋಶ ತಡೆಯಲು ಸರ್ಕಾರವು ಹೆಣಗಾಡುತ್ತಿರುವಾಗ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶುಕ್ರವಾರ ಸತತ ಎರಡನೇ ದಿನವೂ ಸಭೆಯನ್ನು ಕರೆದಿದ್ದಾರೆ.
ಗುಂಡು ಹಾರಿಸಿದ ಅಧಿಕಾರಿಯನ್ನು ಔಪಚಾರಿಕ ತನಿಖೆಗೆ ಒಳಪಡಿಸಲಾಗಿದ್ದು, ಸ್ವಯಂಪ್ರೇರಿತ ನರಹತ್ಯೆಯ ಆರೋಪದ ಮೇಲೆ ಬಂಧಿಸಲಾಗಿದೆ. ಇದು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಅಪರಾಧ ಪ್ರಕರಣಗಳಲ್ಲಿ ಅಪರೂಪದ ಹೆಜ್ಜೆಯಾಗಿದೆ. ಆದರೆ ಇದು ಉದ್ವಿಗ್ನತೆಯನ್ನು ಶಾಂತಗೊಳಿಸಲು ಸ್ವಲ್ಪವೂ ಸಹಾಯ ಮಾಡಿಲ್ಲ,
ಫ್ರಾನ್ಸ್ನ ಬಡ ನಗರ ಉಪನಗರಗಳಲ್ಲಿ ವಾಸಿಸುವ ಜನರ ಕುರಿತಾಗಿನ ದಶಕಗಳ ನಿರ್ಲಕ್ಷ್ಯ ಮತ್ತು ಜನಾಂಗೀಯ ತಾರತಮ್ಯದ ಭಾವನೆಗಳಿಂದ ಪ್ರಚೋದಿಸಲ್ಪಟ್ಟಿದೆ ಎಂದು ಹೇಳಲಾಗಿದೆ.
ಫ್ರೆಂಚ್ ಸುದ್ದಿ ಸಂಸ್ಥೆ ಗಳ ವರದಿಗಳ ಪ್ರಕಾರ, ರಾತ್ರೋರಾತ್ರಿ ಪ್ರತಿಭಟನಾಕಾರರು ಕಾರುಗಳನ್ನು ಸುಟ್ಟುಹಾಕಿದ್ದು, ಸಾರ್ವಜನಿಕ ಕಟ್ಟಡಗಳನ್ನು ಹಾನಿಗೊಳಿಸಿದ್ದಾರೆ. ಅಂಗಡಿಗಳನ್ನು ಲೂಟಿ ಮಾಡಿದ್ದು, ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆಗೆ ಇಳಿದಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.