ಕಡೆಗೂ ಪಾಕ್ ನೆರವಿಗೆ ಐಎಂಎಫ್… ಪಾಕ್ 3 ಬಿಲಿಯನ್ ಡಾಲರ್ ನೀಡಲು ಸಮ್ಮತಿ
Team Udayavani, Jul 1, 2023, 6:50 AM IST
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕತೆ ಹಳ್ಳಹಿಡಿದು, ಹಣದುಬ್ಬರ ವಿಪರೀತವಾಗಿ ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ಈ ಹೊತ್ತಿನಲ್ಲಿ, ಒಂದು ಸಂತೋಷದ ಸುದ್ದಿ ಸಿಕ್ಕಿದೆ. ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ) 3 ಬಿಲಿಯನ್ ಡಾಲರ್ ಸಾಲ ನೀಡಲು ಒಪ್ಪಿಕೊಂಡಿದೆ. ಶ್ರೀಲಂಕಾದಂತೆ ದಿವಾಳಿಯಂಚಿಗೆ ತಲುಪಿದ್ದ ಪಾಕಿಸ್ತಾನ, ತನ್ನನ್ನು ಉಳಿಸಿಕೊಳ್ಳಲು ಐಎಂಎಫ್ ಮೊರೆ ಹೋಗಿತ್ತು. ಆದರೆ ಐಎಂಎಫ್ ವಿಧಿಸಿದ್ದ ಷರತ್ತುಗಳಿಗೆ ಪಾಕ್ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹತ್ತಿರಹತ್ತಿರ ಒಂದು ವರ್ಷದಿಂದ ಈ ತಕರಾರು ನಡೆದುಕೊಂಡು ಬಂದಿತ್ತು. ಇದೀಗ ಒಂದು ನಿಲುಗಡೆಗೆ ಬಂದಿದೆ.
ಬಾಹ್ಯ ಆರ್ಥಿಕ ಒತ್ತಡಗಳಿಂದ ಕುಸಿದಿರುವ ಪಾಕ್ಗೆ ತಕ್ಷಣ ನೆರವು ನೀಡಲಿದ್ದೇವೆ. ಐಎಂಎಫ್, ಪಾಕ್ ಸರ್ಕಾರದೊಂದಿಗೆ ಅಧಿಕಾರಿಗಳ ಮಟ್ಟದಲ್ಲಿ 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಜುಲೈ ಮಧ್ಯಭಾಗದಲ್ಲಿ ಅಂಗೀಕೃತಗೊಳ್ಳಬಹುದು ಎಂದು ಐಎಂಎಫ್ ಅಧಿಕಾರಿ ನಥನ್ ಪೋರ್ಟರ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಾಕ್ಗೆ 1 ಬಿಲಿಯನ್ ಡಾಲರ್ ಸಾಲ ನೀಡಲು ಚೀನಾ ತೀರ್ಮಾನಿಸಿತ್ತು. ಹೀಗೆ ನೋಡಿದರೆ ಪಾಕ್ ಸದ್ಯದ ಮಟ್ಟಿಗೆ ದಿವಾಳಿಯಾಗುವುದರಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ. ವಿಶೇಷವೆಂದರೆ ಪಾಕ್ 2.5 ಬಿಲಿಯನ್ ಡಾಲರ್ ನೆರವನ್ನು ನಿರೀಕ್ಷಿಸುತ್ತಿತ್ತು. ಆದರೆ ಈಗ 3 ಬಿಲಿಯನ್ ಡಾಲರ್ ಪಡೆದುಕೊಳ್ಳುವ ಸಂತೋಷದಲ್ಲಿದೆ.
ಹಲವು ವರ್ಷಗಳಿಂದ ಪಾಕ್ನ ಆರ್ಥಿಕತೆ ಕುಸಿಯುತ್ತಲೇ ಇದೆ. ಇದರಿಂದ ಜನ ವಿಪರೀತ ಸಂಕಷ್ಟಕ್ಕೆ ಸಿಲುಕಿದ್ದರು. ಹಣದುಬ್ಬರವನ್ನು ಪಾಕ್ ಸರ್ಕಾರಕ್ಕೆ ತಡೆಯಲಾಗದ ಪರಿಣಾಮ ದಿನವಹಿ ಬದುಕಿಗೂ ಜನ ಪರದಾಡಲು ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Israel- ಹೆಜ್ಬುಲ್ಲಾ ನಡುವೆ ಬಾಂಬ್ಗಳ ಸುರಿಮಳೆ! ; 100 ರಾಕೆಟ್ ಲಾಂಚರ್ ಧ್ವಂಸ
Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್ ಅಸಮಾಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.