![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 23, 2019, 5:38 PM IST
ಇಸ್ಲಾಮಾಬಾದ್ : ‘ನಯಾ ಪಾಕಿಸ್ಥಾನ್’ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಚಂಡ ಚುನಾವಣಾ ವಿಜಯಕ್ಕಾಗಿ ಅಭಿನಂದಿಸಿದ್ದಾರೆ.
ದಕ್ಷಿಣ ಏಶ್ಯದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಜತೆಗೂಡಿ ಶ್ರಮಿಸುವ ಹಂಬಲವನ್ನು ಇಮ್ರಾನ್ ಖಾನ್ ತನ್ನ ಅಭಿನಂದನ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರ ಸಹಿತ ಪಾಕ್ ಜತೆಗಿನ ಎಲ್ಲ ವಿಷಯಗಳು ಬಗೆಹರಿಯಲು ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ಕೆಲ ಸಮಯದ ಹಿಂದೆ ಇಮ್ರಾನ್ ಖಾನ್ ಹೇಳಿದ್ದರು. ಭಾರತದಲ್ಲಿ ವಿರೋಧ ಪಕ್ಷಗಳ ಕೂಟ ಅಧಿಕಾರಕ್ಕೆ ಬಂದರೆ ಕಾಶ್ಮೀರ ಪ್ರಶ್ನೆ ಬಗೆ ಹರಿಯುವುದು ಕಷ್ಟ ಎಂದು ಕೂಡ ಅವರು ಹೇಳಿದ್ದರು.
ಆರ್ಥಿಕವಾಗಿ ದೀವಾಳಿ ಅಂಚಿಗೆ ತಲುಪಿರುವ “ಪಾಕಿಸ್ಥಾನಕ್ಕೆ ಭಾರತದೊಂದಿಗೆ ಯುದ್ಧ ಬೇಕಾಗಿಲ್ಲ; ಶಾಂತಿ ಬೇಕಿದೆ; ಆ ಮೂಲಕ ಎರಡೂ ದೇಶಗಳಿಗೆ ಲಾಭವಾಗಲಿದೆ’ ಎಂದು ಇಮ್ರಾನ್ ಹೇಳಿದ್ದರು.
You seem to have an Ad Blocker on.
To continue reading, please turn it off or whitelist Udayavani.