ಪಾಕಿಸ್ಥಾನದಲ್ಲೀಗ ರಾಷ್ಟ್ರಪತಿ, ಸರಕಾರದ ನಡುವೆ ತೀವ್ರ ತಿಕ್ಕಾಟ
Team Udayavani, Apr 9, 2023, 6:05 AM IST
ಇಸ್ಲಾಮಾಬಾದ್: ತೀವ್ರವಾದ ಆರ್ಥಿಕ- ರಾಜಕೀಯ ಬಿಕ್ಕಟ್ಟಿನಿಂದ ನರಳುತ್ತಿರುವ ಪಾಕಿಸ್ಥಾನ ಈಗ ಇನ್ನೊಂದು ಬಿಕ್ಕಟ್ಟಿಗೆ ಹೊರಳಿಕೊಂಡಿದೆ. ಅಲ್ಲೀಗ ಸರ್ವೋಚ್ಚ ನ್ಯಾಯಪೀಠ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ಶುರುವಾಗಿದೆ. ಮಾತ್ರವಲ್ಲ ಮಾಜಿ ಪ್ರಧಾನಿ ಇಮ್ರಾನ್ ಖಾನ್ರಿಂದ ನೇಮಿಸಲ್ಪಟ್ಟಿದ್ದ ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಮತ್ತು ಕೇಂದ್ರ ಸರಕಾರದ ನಡುವೆಯೂ ಜಟಾಪಟಿ ಶುರುವಾಗಿದೆ.
ಸರ್ವೋಚ್ಚ ನ್ಯಾಯಾಲಯದ ಅಧಿಕಾರಕ್ಕೆ ಕಡಿವಾಣ ಹಾಕಲು ಶೆಹಬಾಜ್ ಶರೀಫ್ ನೇತೃತ್ವದ ಸಮ್ಮಿಶ್ರ ಸರಕಾರ (ಪಾಕಿಸ್ಥಾನ ಮುಸ್ಲಿಮ್ ಲೀಗ್ ಪಕ್ಷ) ಮಸೂದೆಯೊಂದನ್ನು ಮಂಡಿಸಿ ಸಂಸತ್ತಿನ ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆದುಕೊಂಡಿದೆ. ಇದನ್ನು ರಾಷ್ಟ್ರಪತಿ ಆರಿಫ್ ಅಲ್ವಿಯವರ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ಅವರು ಶನಿವಾರ ಇದಕ್ಕೆ ಸಹಿಹಾಕಲು ತಿರಸ್ಕರಿಸಿದ್ದಾರೆ ಮಾತ್ರವಲ್ಲ ಇದು ಸಂಸತ್ತಿನ ಅಧಿಕಾರ ವ್ಯಾಪ್ತಿಯಿಂದ ದೂರವಿದೆ ಎಂದಿದ್ದಾರೆ. ಇದು ಶೆಹಬಾಜ್ ಸರಕಾರವನ್ನು ಕೆರಳಿಸಿದೆ.
ಬಿಕ್ಕಟ್ಟಿಗೆ ಕಾರಣವೇನು?: ಪಾಕಿಸ್ಥಾನ ಚುನಾವಣ ಆಯೋಗ ಪಂಜಾಬ್ ಚುನಾವಣೆಯನ್ನು ಎ.10ರಂದು ನಡೆಸುವ ಬದಲು ಅ.8ಕ್ಕೆ ಮುಂದೂಡಿತ್ತು. ಇತ್ತೀಚೆಗೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಚುನಾವಣೆಗೆ ಮೇ 14 ಅನ್ನು ಅಂತಿಮ ಗಡುವೆಂದು ಸೂಚಿಸಿತ್ತು. ಇದನ್ನು ಶೆಹಬಾಜ್ ಸರಕಾರ ನೇರವಾಗಿ ಟೀಕಿಸಿದೆ.
ಬದಲಾವಣೆಗಳೇನು?: ಸರ್ವೋಚ್ಚ ನ್ಯಾಯಾ ಲಯ ತಾನಾಗಿಯೇ ಕೆಲವು ನಿರ್ಧಾರಗಳನ್ನು ಮಾಡಲು ಹೊಸ ಮಸೂದೆ ಅನುಮತಿ ನಿರಾ ಕರಿಸುತ್ತದೆ. ಸಂವಿಧಾನದ ವಿಧಿ 184 (3)ರ ವ್ಯಾಪ್ತಿಗೆ ಬರುವ ಯಾವುದೇ ವಿಷಯಗಳನ್ನು ಮೊದಲು ಸರ್ವೋಚ್ಚ ಪೀಠದ ಮೂವರು ನ್ಯಾಯ ಮೂರ್ತಿಗಳೂ ಸೇರಿದ ಸಮಿತಿಯ ಮುಂದೆ ಇಡ ಬೇಕು. ಅಲ್ಲಿ ಬಹು ಮತದಿಂದ ನಿರ್ಧಾರವಾಗ ಬೇಕೆಂದು ಹೇಳಲಾಗಿದೆ. ಈ ಮಸೂದೆಗೆ ರಾಷ್ಟ್ರಪತಿ ಸಹಿಹಾಕಲು ನಿರಾಕರಿಸಿರುವುದರಿಂದ ಸಂಸತ್ತಿನ ಜಂಟಿ ಸದನದ ಮುಂದೆ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆಯಲು ಪಾಕ್ ಸರಕಾರ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.