Kargil War: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್ ಸೇನೆ
ನೇರ ಪಾತ್ರವಿತ್ತು ಎಂದ ಪಾಕ್ ಸೇನಾ ಮುಖ್ಯಸ್ಥ
Team Udayavani, Sep 9, 2024, 7:05 AM IST
ಇಸ್ಲಾಮಾಬಾದ್: ಕಳೆದ 25 ವರ್ಷಗಳಿಂದ ಕಾರ್ಗಿಲ್ ಯುದ್ಧಕ್ಕೂ ತನ್ನ ಸೇನೆಗೂ ಸಂಬಂಧವೇ ಇಲ್ಲ ವೆನ್ನುತ್ತಿದ್ದ ಪಾಕಿಸ್ಥಾನದ ಸುಳ್ಳಿನ ಮುಖವಾಡ ಕಡೆಗೂ ಕಳಚಿ ಬಿದ್ದಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆಯು ನೇರ ಪಾತ್ರ ವಹಿಸಿತ್ತು ಎಂದು ಪಾಕ್ ಸೇನಾ ಮುಖ್ಯಸ್ಥ ಜ| ಅಸ್ಸೀಂ ಮುನೀರ್ ಈಗ ಬಹಿರಂಗ ವಾಗಿ ಒಪ್ಪಿಕೊಂಡಿದ್ದಾರೆ!
ಪಾಕ್ ಸೇನಾ ದಿನದ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದ ಜ| ಮುನೀರ್, ಕಾರ್ಗಿಲ್ ಯುದ್ಧದಲ್ಲಿ ಉಗ್ರರ ಹೆಸರಿನಲ್ಲಿ ಪಾಕ್ ಸೇನೆ ನಡೆಸಿದ್ದ ದುಷ್ಕೃತ್ಯವನ್ನು ಬಾಯಿಬಿಟ್ಟಿದ್ದಾರೆ. “ಪಾಕ್ ಶಕ್ತಿಯುತ ರಾಷ್ಟ್ರವಾಗಿದ್ದು, ಸ್ವಾತಂತ್ರ್ಯದ ಮೌಲ್ಯವನ್ನು ಹಾಗೂ ಅದನ್ನು ಉಳಿಸಿಕೊಳ್ಳುವ ಪರಿಯನ್ನು ಅರ್ಥೈಸಿಕೊಂಡಿದೆ.
ರಾಷ್ಟ್ರದ ಭದ್ರತೆ ನಮ್ಮ ಆದ್ಯತೆ. ಹೀಗಾಗಿಯೇ ದೇಶ ಕ್ಕಾಗಿ ಮತ್ತು ಇಸ್ಲಾಂಗಾಗಿ 1948, 1965 ,1971 ಹಾಗೂ ಕಾರ್ಗಿಲ್ ಯುದ್ಧಗಳಲ್ಲಿ ಪಾಕಿಸ್ಥಾನಿ ಸೈನಿಕರು ಪ್ರಾಣ ತೆತ್ತಿದ್ದಾರೆ’ ಎಂದಿದ್ದಾರೆ.
ಈ ಮೂಲಕ ಕಾರ್ಗಿಲ್ ಕಬಳಿಸಲು ಪಾಕ್ ಸೇನೆ ರೂಪಿಸಿದ ಸಂಚು ಜಗತ್ತಿನ ಮುಂದೆ ಬಹಿರಂಗಗೊಂಡಿದೆ. ಇತ್ತೀಚೆಗಷ್ಟೇ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಕಾರ್ಗಿಲ್ ವಿಚಾರದಲ್ಲಿ ನಾವು ತಪ್ಪು ಮಾಡಿದೆವು ಎಂದು ಒಪ್ಪಿಕೊಂಡಿದ್ದರು. ಆ ಬೆನ್ನಲ್ಲೇ ಜ| ಮುನೀರ್ ಹೇಳಿಕೆ ಮತ್ತೂಮ್ಮೆ ಪಾಕ್ನ ನಿಜಬಣ್ಣ ಬಯಲು ಮಾಡಿದೆ.
ಕಾಶ್ಮೀರಿ ಉಗ್ರರು ಎಂದಿದ್ದ ಪಾಕ್
ಕಾರ್ಗಿಲ್ ಸಂಘರ್ಷದಲ್ಲಿ ಪಾಕಿಸ್ಥಾನದ 400ರಿಂದ 4 ಸಾವಿರದಷ್ಟು ಸೈನಿಕರು ಮೃತ ಪಟ್ಟಿದ್ದರು ಎನ್ನಲಾಗುತ್ತದೆ. ಆದರೆ ಪಾಕ್ ಇದನ್ನು ನಿರಾಕರಿಸಿತ್ತು. ಕಾರ್ಗಿಲ್ ಏರಿ ಕುಳಿ ತವರು ನಮ್ಮ ಯೋಧರಲ್ಲ, ಕಾಶ್ಮೀರದ ಸ್ವಾತಂತ್ರ್ಯ ಬಯ ಸಿರುವ ಮುಜಾಹಿದೀನ್ ಉಗ್ರರು. ನಮ್ಮ ಸೇನೆಗೂ ಅವರಿಗೂ ಸಂಬಂಧವೇ ಇಲ್ಲ ಎಂದು 25 ವರ್ಷದಿಂದ ಸುಳ್ಳು ಹೇಳುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್ ತಡೆ: ವಿಶ್ವಸಂಸ್ಥೆ ಆರೋಪ
Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್ ಮಹಿಳೆಯರು!
Elon Musk: ಬೈಡೆನ್, ಕಮಲಾ ಮೇಲೇಕೆ ಹ*ತ್ಯಾ ಪ್ರಯತ್ನ ನಡೆಯುತ್ತಿಲ್ಲ?ಎಲಾನ್ ಮಸ್ಕ್
ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್ನಲ್ಲಿ ಘಟನೆ, ಆರೋಪಿ ಬಂಧನ
Bangladesh; ಕೊ*ಲೆ ಆರೋಪ: ಹಸೀನಾ ವಿರುದ್ಧ 155ನೇ ಪ್ರಕರಣ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Audio controversy: ಬಿ.ಸಿ.ರೋಡ್: ಉದ್ವಿಗ್ನಗೊಂಡು ತಿಳಿಯಾದ ಪರಿಸ್ಥಿತಿ
Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು
NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!
ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ
Scheme: ದಂಡ ಸಹಿತ ಪಾನ್-ಆಧಾರ್ ಜೋಡಿಸಿದವರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.