Bangladesh; ದುರ್ಗಾ ಪೂಜೆ ನಡೀಬೇಕೆಂದರೆ 3 ಲಕ್ಷ ಕೊಡಿ: ಬಾಂಗ್ಲಾದಲ್ಲಿ ಬೆದರಿಕೆ
ಹಿಂದೂ ದೇವಾಲಯಗಳಿಗೆ ಅನಾಮಧೇಯ ಪತ್ರಗಳು
Team Udayavani, Sep 25, 2024, 5:58 AM IST
ಢಾಕಾ: “ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ನಡೆಯಬೇಕೆಂದರೆ 5 ಲಕ್ಷ ಟಾಕಾ (3.50 ಲಕ್ಷ ರೂ.) ನಮಗೆ ಕೊಡಿ. ಇಲ್ಲದಿದ್ದರೆ ಪೂಜೆಯೂ ನಡೆಯಲ್ಲ, ನಿಮ್ಮನ್ನು ಜೀವಂತವೂ ಉಳಿಸಲ್ಲ.’ ಹೀಗೆಂದು ಬಾಂಗ್ಲಾದ ದೇವಸ್ಥಾನಗಳಿಗೆ ಅನಾಮಧೇಯ ಬೆದರಿಕೆ ಪತ್ರಗಳು ಬರುತ್ತಿವೆ.
ದುರ್ಗಾಪೂಜೆ ಸಮೀಪಿಸುತ್ತಿರುವಂತೆಯೇ ದುಷ್ಕರ್ಮಿಗಳು ಕಳುಹಿಸುತ್ತಿರುವ ಈ ಪತ್ರಗಳು ಹಿಂದೂಗಳಲ್ಲಿ ಆತಂಕ ಹುಟ್ಟಿಸಿದೆ.
ಬಾಂಗ್ಲಾ ದಂಗೆ ಬಳಿಕ ಆ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಆತಂಕದಲ್ಲೇ ಬದುಕುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅದನ್ನು ತಹಬದಿಗೆ ತರಲು ಪೊಲೀಸರು, ಆಡಳಿತ ಹೆಣಗಾಡುವಷ್ಟರಲ್ಲೇ ಇದೀಗ ದುರ್ಗಾ ಪೂಜೆಗೆ ಕಂಟಕ ಎದುರಾಗಿದೆ. ಹಿಂದೂಗಳು, ದೇಗುಲಗಳು ಮತ್ತು ಪೂಜಾ ಸಮಿತಿಯ ಸಿಬ್ಬಂದಿಗೆ ಈ ಬೆದರಿಕೆ ಪತ್ರಗಳು ಬಂದಿವೆ. ಅದರಲ್ಲಿ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುತ್ತೇವೆ. ನಾವು ಹೇಳಿದ ಜಾಗಕ್ಕೆ 3.50 ಲಕ್ಷ ರೂ.ಗಳನ್ನು ತಂದುಕೊಡಬೇಕು ಇಲ್ಲದಿದ್ದರೆ, ನಿಮ್ಮ ಕುಟುಂಬಕ್ಕೂ ತೊಂದರೆ ತಪ್ಪಿದ್ದಲ್ಲ ಎಂದೂ ದುಷ್ಕರ್ಮಿಗಳು ಬೆದರಿಸಿದ್ದಾರೆ.
ಘಟನೆ ಬೆನ್ನಲ್ಲೇ ಹಲವು ದುರ್ಗಾ ಪೂಜಾ ಸಮಿತಿಗಳು ಸಭೆ ನಡೆಸಿ ಈ ವರ್ಷ ಹಬ್ಬದ ಆಚರಣೆ ಕೈಬಿಡಲು ನಿರ್ಧರಿಸಿರುವುದಾಗಿ ಹೇಳಿವೆ. ಇತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಸಲು ಬಾಂಗ್ಲಾ ಪೊಲೀಸರು ಕೂಡ ಅಲರ್ಟ್ ಆಗಿರುವುದಾಗಿ ತಿಳಿಸಿದ್ದಾರೆ. ಅ.9ರಿಂದ ಅ.13ರವರೆಗೆ ದುರ್ಗಾಪೂಜೆ ನಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harini Amarasuriya: ಶ್ರೀಲಂಕಾಕ್ಕೆ 24 ವರ್ಷದ ಬಳಿಕ ಮೊದಲ ಮಹಿಳಾ ಪ್ರಧಾನ ಮಂತ್ರಿ ನೇಮಕ
Israel ವೈಮಾನಿಕ ದಾಳಿಗೆ 500 ಲೆಬನಾನ್ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ
Modi USA tour; ಭಾರತದ ಸೆಮಿಕಂಡಕ್ಟರ್ ಕನಸಿಗೆ ಈಗ ಹೊಸ ‘ಶಕ್ತಿ’
Sri Lanka; 9ನೇ ಅಧ್ಯಕ್ಷರಾಗಿ ಅನುರ ಕುಮಾರ ದಿಸ್ಸಾ ನಾಯಕೆ ಪದಗ್ರಹಣ
Pak ಐಎಸ್ಐಗೆ ಲೆ|ಜ| ಅಸೀಮ್ ಮಲಿಕ್ ಮುಖ್ಯಸ್ಥ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಈ ಪ್ರಕರಣದ ತನಿಖೆ ಬೇಡವೆಂದರೆ, ಇನ್ಯಾವ ಪ್ರಕರಣದ ತನಿಖೆಯಾಗಬೇಕು?: ಹೈಕೋರ್ಟ್
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
SSLC ವಿಜ್ಞಾನ ಪರೀಕ್ಷೆಗೆ ಶೇ. 20 ಕಠಿನ ಪ್ರಶ್ನೆಗಳು!
MUDA Scam: ಮುಖ್ಯಮಂತ್ರಿ ವಿರುದ್ಧ ತನಿಖೆಯ ಅಗತ್ಯವಿದೆ: ಹೈಕೋರ್ಟ್
Western Ghat: ಹಳ್ಳಿ ಹಳ್ಳಿಗೂ ವಿಸ್ತರಿಸುತ್ತಿದೆ ಕಸ್ತೂರಿ ಹೋರಾಟ ಕಿಚ್ಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.