ರಾವಣನೇ ಜಗತ್ತಿನ ಮೊದಲ ಪೈಲಟ್!
ಶ್ರೀಲಂಕಾದಲ್ಲಿ ವಿಜ್ಞಾನಿಗಳು, ಇತಿಹಾಸಕಾರರ ಅಭಿಮತ
Team Udayavani, Aug 2, 2019, 6:00 AM IST
ಕೊಲೊಂಬೋ: ಜಗತ್ತಿನ ಮೊದಲ ಪೈಲಟ್ ಯಾರು? ಈ ಪ್ರಶ್ನೆಯನ್ನು ಶ್ರೀಲಂಕಾದ ಇತಿಹಾಸಕಾರರು, ವಿಮಾನಯಾನ ತಜ್ಞರನ್ನು ಕೇಳಿದರೆ, ಅವರಿಂದ ‘ರಾವಣ’ ಎಂಬ ಉತ್ತರ ಬರುತ್ತದೆ.
ಹೌದು, ರಾಮಾಯಣದಲ್ಲಿ ಉಲ್ಲೇಖವಾಗಿರುವ ‘ಪುಷ್ಪಕ ವಿಮಾನದಲ್ಲಿ ಬರುವ ರಾವಣ’ನೇ ಈ ಲೋಕದಲ್ಲಿ ಮೊದಲ ಬಾರಿಗೆ ವಿಮಾನವನ್ನು ಚಲಾಯಿಸಿದವನು. ಆತ 5 ಸಾವಿರ ವರ್ಷಗಳ ಹಿಂದೆಯೇ ಭಾರತಕ್ಕೆ ವಿಮಾನದಲ್ಲಿ ಹೋಗಿ ಸುರಕ್ಷಿತವಾಗಿ ಮರಳಿದ್ದ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಕಾಲದಲ್ಲಿ ವಿಮಾನವನ್ನು ಯಾವ ವಿಧಾನದ ಮೂಲಕ ಓಡಿಸಲಾಗುತಿತ್ತು ಎಂದು ಅಧ್ಯಯನ ನಡೆಸಲು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ಮುಂದಾಗಿದೆ.
ಶ್ರೀಲಂಕಾದ ಅತಿದೊಡ್ಡ ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕಾತುನಾಯಕೆಯಲ್ಲಿ ನಡೆದ ನಾಗರಿಕ ವಿಮಾನಯಾನ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಹಾಗೂ ಭೂಗರ್ಭಶಾಸ್ತ್ರಜ್ಞರ ಬೃಹತ್ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.
ರಾವಣನು ತಂತ್ರಜ್ಞಾನ, ವಿಮಾನಯಾನ, ವೈದ್ಯಶಾಸ್ತ್ರ, ಸಂಗೀತದಲ್ಲಿ ಪರಿಣತನಾಗಿದ್ದ ಎಂಬ ಪ್ರತೀತಿಯೂ ಇದೆ. ಅಲ್ಲದೆ, ರಾವಣನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಲೆಂದೇ ‘ದಂಡು ಮೊನಾರಾ'(ಪುಷ್ಪಕ ವಿಮಾನ) ಎಂಬ ಹಾರುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದ. ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಬೇಕಿದೆ ಎಂದೂ ಇವರೆಲ್ಲ ಅಭಿಪ್ರಾಯಪಟ್ಟಿದ್ದಾರೆ.
ಸೀತಾಪಹರಣ ನಡೆಸಿಲ್ಲವಂತೆ!: ರಾವಣನು ಶ್ರೀರಾಮನ ಪತ್ನಿ ಸೀತೆಯನ್ನು ಅಪಹರಿಸಿದ್ದ ಎಂಬ ಆರೋಪಗಳನ್ನೂ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅನೇಕರು ತಳ್ಳಿಹಾಕಿದ್ದಾರೆ. ಇದು ಭಾರತೀಯರ ಕಥೆಯಾಗಿದ್ದು, ವಾಸ್ತವದಲ್ಲಿ ರಾವಣ ಒಬ್ಬ ಶ್ರೇಷ್ಠ ದೊರೆಯಾಗಿದ್ದ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಪಗ್ರಹಕ್ಕೂ ‘ರಾವಣ’ನ ಹೆಸರು: ಇತ್ತೀಚೆಗಷ್ಟೇ ಉಡಾವಣೆಯಾದ ಶ್ರೀಲಂಕಾದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹಕ್ಕೂ ‘ರಾವಣ’ನ ಹೆಸರನ್ನೇ ಇಡಲಾಗಿತ್ತು. ಏಪ್ರಿಲ್ 17ರಂದು ರಾವಣ -1 ಉಪಗ್ರಹವನ್ನು ವರ್ಜೀನಿಯಾದಿಂದ ಉಡಾವಣೆ ಮಾಡಲಾಗಿತ್ತು.
5 ವರ್ಷಗಳಲ್ಲಿ ಸಾಬೀತು
ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಉಪಾಧ್ಯಕ್ಷ ಶಶಿ ದನತುಂಗೆ ಅವರೂ ರಾವಣನೇ ಮೊದಲ ಪೈಲಟ್ ಎಂಬುದಕ್ಕೆ ದನಿಗೂಡಿಸಿದ್ದಾರೆ. ವಿಮಾನವನ್ನು ಬಳಸಿಕೊಂಡು ಹಾರಾಟ ನಡೆಸಿದ ಮೊದಲ ವ್ಯಕ್ತಿ ರಾವಣ ಎನ್ನುವುದಕ್ಕೆ ನಮ್ಮಲ್ಲಿ ತಿರಸ್ಕರಿಸಲಾಗದಂಥ ಪುರಾವೆಗಳಿವೆ. ರಾಜನಾದ ರಾವಣನು ಅತ್ಯಂತ ಬುದ್ಧಿವಂತನಾಗಿದ್ದ. ಮೊದಲ ಬಾರಿಗೆ ವಿಮಾನ ಹಾರಿಸಿದವನೇ ಅವನು. ಈ ವಿಚಾರಕ್ಕೆ ಸಂಬಂಧಿಸಿ ವಿಸ್ತೃತ ಸಂಶೋಧನೆ ನಡೆಯಲೇಬೇಕು. ಮುಂದಿನ 5 ವರ್ಷಗಳಲ್ಲಿ, ನಾವಿದನ್ನು ಸತ್ಯ ಎಂದು ಸಾಬೀತುಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್ಗೆ ಪನ್ನು ದೂರು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.