![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 2, 2022, 1:00 PM IST
ಕೊಲಂಬೊ: ಪುರಾಣದಲ್ಲಿ ಬರುವ ಸ್ವರ್ಣ ಲಂಕೆ ಇಂದು ಅಕ್ಷರಶಃ ದಿವಾಳಿಯಾಗಿದೆ. ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ, ಗ್ಯಾಸ್ ಇಲ್ಲ, ದಿನಕ್ಕೆ 13 ಗಂಟೆ ಲೋಡ್ ಶೆಡ್ಡಿಂಗ್, ಡೀಸೆಲ್ ಇಲ್ಲದೆ ಬಸ್ ಗಳು ಮೂಲೆ ಸೇರಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಂಕಾದ ಜನತೆ ದಂಗೆಯೆದ್ದಿದ್ದಾರೆ. ಶುಕ್ರವಾರ ರಾತ್ರಿ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ತನ್ನ ವಿರುದ್ಧ ಘೋಷಣೆ ಕೂಗುವವರನ್ನು ಯಾವುದೇ ವಿಚಾರಣೆಯಿಲ್ಲದೆ ದೀರ್ಘಾವಧಿಗೆ ಬಂಧನದಲ್ಲಿ ಇಡುವಂತೆ ಕಾನೂನು ರೂಪಿಸಿದ್ದಾರೆ.
“ಆಹಾರ ಪದಾರ್ಥಗಳು ಸಿಗುತ್ತಿಲ್ಲ, ಅಗತ್ಯ ಔಷಧಗಳ ಬೆಲೆ ಗಗನಕ್ಕೇರಿದೆ. ಸದ್ಯ, ನಮ್ಮಲ್ಲಿ ಯಾವುದೇ ಗ್ಯಾಸ್, ಪೆಟ್ರೋಲ್ ಅಥವಾ ಸೀಮೆ ಎಣ್ಣೆ ಇಲ್ಲ. ಯಾವುದೇ ಔಷಧಿಗಳಿಲ್ಲ. ನನ್ನ ವಯಸ್ಸು 69 ಆದರೆ ನನ್ನ ಜೀವನದಲ್ಲಿ ಈ ರೀತಿಯ ಘಟನೆಯನ್ನು ನೋಡುತ್ತಿರುವುದು ಇದೇ ಮೊದಲು” ಎನ್ನುತ್ತಾರೆ ಸ್ಥಳೀಯ ಪ್ರಜೆ ಥೋಮಸ್.
ಇದನ್ನೂ ಓದಿ:ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಎನ್ ಸಿಬಿಯ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಸಾವು
“ನಮಗೆ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹಣವೂ ಮತ್ತು ಸಂಬಳ ಕೂಡಾ ಸಿಗುತ್ತಿಲ್ಲ. ನಮ್ಮ ಬಳಿ ಹಣವಿದ್ದರೂ ಸಾಮಾಗ್ರಿಗಳಿಲ್ಲ. ನಾವು ಕೊಲಂಬೊದ ಕೆಲವು ಅಂಗಡಿಗಳಿಗೆ ಹೋದಾಗ, ಅವರು ದಾಲ್ ಇಲ್ಲ, ಅಕ್ಕಿ ಇಲ್ಲ, ಬ್ರೆಡ್ ಇಲ್ಲ ಎಂದು ಹೇಳುತ್ತಾರೆ. ಒಂದು ಪೌಂಡ್ ಬ್ರೆಡ್ನ ಬೆಲೆ 100 ಶ್ರೀಲಂಕಾದ ರೂಪಾಯಿಗಳು. ಒಂದು ಕಪ್ ಚಹಾದ ಬೆಲೆ 100 ಶ್ರೀಲಂಕಾ ರೂಪಾಯಿ ಆಗಿದೆ. ಪ್ರಮುಖ ವಸ್ತುಗಳ ಬೆಲೆ ಏರಿಕೆಯಾಗಿದೆ” ಎನ್ನುತ್ತಾರೆ ಥೋಮಸ್.
ಅಷ್ಟಕ್ಕೂ ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರದ ಪರಿಸ್ಥಿತಿಗೆ ಕಾರಣವೇನು? ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಲು ಕಾರಣವೇನು?
ಬೃಹತ್ ಪ್ರಮಾಣದ ಸಾಲಗಳು ಮತ್ತು ಕ್ಷೀಣಿಸುತ್ತಿರುವ ವಿದೇಶಿ ರಿಸರ್ವ್ ಕಾರಣದಿಂದ ಆಮದು ಪದಾರ್ಥಗಳಿಗೆ ಪಾವತಿಸಲು ಹಣ ಹೊಂದಿಸಲೂ ಲಂಕಾ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ವಿದೇಶಿ ಮೂಲವನ್ನೇ ಅವಲಂಭಿಸಿರುವ ಇಂಧನ ಸೇರಿದಂತೆ ಹಲವಾರು ಸರಕುಗಳ ಕೊರತೆಗೆ ಕಾರಣವಾಗಿದೆ.
ಶ್ರೀಲಂಕಾದ ಆರ್ಥಿಕ ಸಂಕಷ್ಟಗಳಿಗೆ ಸತತ ಸರ್ಕಾರಗಳು ಒಂದೇ ರೀತಿಯ ರಫ್ತುಗಳನ್ನು ಅವಲಂಭಿಸಿರುವುದು ಮತ್ತು ಬೇರೆ ರೂಪದ ಸರಕುಗಳ ರಫ್ತಿಗೆ ಉತ್ತೇಜನ ನೀಡದೇ ಇರುವುದು ಒಂದು ಕಾರಣ. ಸಾಂಪ್ರದಾಯಿಕ ಆರ್ಥಿಕ ಮೂಲಗಳಾದ ಚಹಾ, ಉಡುಪುಗಳು ಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿರುವುದು ಕೂಡಾ ಲಂಕೆಗೆ ಮುಳುವಾಯಿತು.
ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ವಿಶ್ವದ ಎಲ್ಲಾ ದೇಶಗಳು ಆರ್ಥಿಕ ಸಂಕಷ್ಟ ಅನುಭವಿಸಿದೆ. ಆದರೆ ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದ ಶ್ರೀಲಂಕಾ ಕೋವಿಡ್ ಕಾರಣದಿಂದ ಮತ್ತೆ ಹೊಡೆತ ತಿಂದಿತ್ತು.
ಎರಡು ವರ್ಷಗಳಲ್ಲಿ ದೇಶದ ವಿದೇಶಿ ವಿನಿಮಯ ರಿಸರ್ವ್ ನಲ್ಲಿ ಶೇ. 70 ರಷ್ಟು ಅಗಾಧ ಕುಸಿತ ಉಂಟಾಗಿ ಅದು ಸದ್ಯ ಕೇವಲ 2.31 ಬಿಲಿಯನ್ ಡಾಲರ್ ಮೊತ್ತಕ್ಕೆ ಬಂದು ತಲುಪಿದ್ದು ದೇಶವು ಅವಶ್ಯಕವಾದ ಆಹಾರ ಮತ್ತು ಇಂಧನದಂತಹ ವಸ್ತುಗಳನ್ನೂ ಸಹ ಆಮದು ಮಾಡಿಕೊಳ್ಳಲು ಪರದಾಡುತ್ತಿದೆ.
ಶ್ರೀಲಂಕಾದ ಜೆಡಿಪಿಗೆ ಪ್ರಮುಖ ಮೂಲವಾಗಿದ್ದ ಪ್ರವಾಸೋದ್ಯಮ ಕೂಡಾ ಕೋವಿಡ್ ಕಾರಣದಿಂದ ನೆಲಕಚ್ಚಿತ್ತು. ಸುತ್ತಲೂ ಸಮುದ್ರದಿಂದ ಸುತ್ತುವರಿದಿರುವ ಶ್ರೀಲಂಕಾಕ್ಕೆ ಹಲವಾರು ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಇದಕ್ಕೆ ಬಲವಾದ ಪೆಟ್ಟು ಬಿದ್ದಿತ್ತು.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.