50 ವರ್ಷ ಹಿಂದೆ ಪತನಗೊಂಡ ವಿಮಾನ ಪ್ರಯಾಣಿಕರ ಅಂಗಾಂಗ ಪತ್ತೆ?
Team Udayavani, Jul 30, 2017, 7:10 AM IST
– ಫ್ರಾನ್ಸ್ನ ಮೌಂಟ್ ಬ್ಲಾಂಕ್ ಪರ್ವತ ಪ್ರದೇಶದಲ್ಲಿ ಸಿಕ್ಕಿತು ಜೆಟ್ ಎಂಜಿನ್, ಮನುಷ್ಯರ ಕೈ- ಕಾಲುಗಳ ಅವಶೇಷ
– 1966ರಲ್ಲಿ ಪತನಗೊಂಡ ಏರ್ಇಂಡಿಯಾ ವಿಮಾನದ ಎಂಜಿನ್ ಹಾಗೂ ಪ್ರಯಾಣಿಕರ ದೇಹದ ಭಾಗಗಳು ಎಂಬ ಶಂಕೆ
ಗ್ರೆನೋಬಲ್: ಕೇವಲ 10 ದಿನಗಳ ಕೆಳಗೆ ಯುರೋಪ್ನ ಆಲ್ಫ್ಸ್ ಪರ್ವತಗಳಲ್ಲಿ 75 ವರ್ಷಗಳ ಕೆಳಗೆ ನಾಪತ್ತೆಯಾಗಿದ್ದ ದಂಪತಿಯ ಮೃತದೇಹ ಪತ್ತೆಯಾಗಿತ್ತು. ಅದು ಈಗಲೂ ಗುರುತು ಹಿಡಿಯುವಂಥ ಸ್ಥಿತಿಯಲ್ಲೇ ಇದ್ದು, ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಅದರ ಬೆನ್ನಲ್ಲೇ ಇದೀಗ ಸುಮಾರು 50 ವರ್ಷಗಳ ಕೆಳಗೆ ಇದೇ ಶ್ರೇಣಿಯ ‘ಮೌಂಟ್ ಬ್ಲಾಂಕ್’ ಪರ್ವತದಲ್ಲಿ ಪತನವಾಗಿದ್ದ ಏರ್ಇಂಡಿಯಾ ವಿಮಾನಗಳ ಪ್ರಯಾಣಿಕರದ್ದು ಎನ್ನಲಾದ ಶರೀರದ ಭಾಗಗಳು ಪತ್ತೆಯಾಗಿವೆ.
‘ಮೌಂಟ್ ಬ್ಲಾಂಕ್’ ಪರ್ವತಗಳಲ್ಲಿ ಸಂಭವಿಸಿದ ವಿಮಾನ ದುರಂತಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಡೇನಿಯಲ್ ರೋಶ್ ಎಂಬ ವ್ಯಕ್ತಿಗೆ ಈ ಭಾಗಗಳು ದೊರೆತಿವೆ. ಜೊತೆಗೆ ಒಂದು ವಿಮಾನದ ಎಂಜಿನ್ ಕೂಡ ಇಲ್ಲಿ ಸಿಕ್ಕಿದೆ. ಇಲ್ಲಿ ಸಿಕ್ಕಿರುವಂಥ ಕೈ ಹಾಗೂ ಕಾಲಿನ ಭಾಗಗಳನ್ನು ವೈದ್ಯಕೀಯ ಕೇಂದ್ರದಲ್ಲಿ ಪರೀಕ್ಷಿಸಿದಾಗ, ಇವು ಇಬ್ಬರು ಬೇರೆ ಬೇರೆ ವ್ಯಕ್ತಿಗಳ ಅಂಗಾಂಗಗಳು ಎಂದು ತಿಳಿದು ಬಂದಿದೆ.
ಪತನಗೊಂಡಿದ್ದವು ಏರ್ಇಂಡಿಯಾ ವಿಮಾನಗಳು
1966ರ ಜನವರಿಯಲ್ಲಿ ಮುಂಬಯಿಯಿಂದ ನ್ಯೂಯಾರ್ಕ್ಗೆ ತೆರಳುತ್ತಿದ್ದ ಏರ್ಇಂಡಿಯಾ ಬೋಯಿಂಗ್ 707 ಮೌಂಟ್ ಬ್ಲಾಂಕ್ ಪರ್ವತ ಪ್ರದೇಶದಲ್ಲಿ ಪತನವಾಗಿತ್ತು. ಆ ಸಮಯದಲ್ಲಿ ವಿಮಾನದಲ್ಲಿ 117 ಮಂದಿ ಪ್ರಯಾಣಿಕರಿದ್ದರು. ಅದಕ್ಕೂ ಮೊದಲು, ಅಂದರೆ 1950ರಲ್ಲಿ ಇದೇ ಪರ್ವತದಲ್ಲಿ ಮತ್ತೂಂದು ಏರ್ಇಂಡಿಯಾ ವಿಮಾನ ಪತನವಾಗಿ, 48 ಪ್ರಯಾಣಿಕರು ಸಾವಿಗೀಡಾಗಿದ್ದರು. ಈಗ ದೊರೆತಿರುವ ಮೃತದೇಹಗಳ ಭಾಗಗಳು 1966ರಲ್ಲಿ ಆದ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರದ್ದು ಎಂದು ರೋಶ್ ಅಭಿಪ್ರಾಯಪಟ್ಟಿದ್ದಾರೆ. ದೇಹದ ಭಾಗಗಳು ಪತ್ತೆಯಾದೊಡನೆ ರೋಶ್ ಅವರು ಸ್ಥಳೀಯ ತುರ್ತು ಸೇವಾ ಸಂಸ್ಥೆಯನ್ನು ಸಂಪರ್ಕಿಸಿದ್ದು, ಹೆಲಿಕಾಪ್ಟರ್ ಮೂಲಕ ಅವುಗಳನ್ನು ಸಾಗಿಸಿ, ತಜ್ಞರು ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಹಿಮಗಲ್ಲಿನ ಪರ್ವತಶ್ರೇಣಿಯಲ್ಲಿ ಅಕ್ಕಪಕ್ಕವೇ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದವು. ಡಿಎನ್ಎ ಪರೀಕ್ಷೆ ನಡೆಸಿದಾಗ, ಅವು 75 ವರ್ಷಗಳ ಹಿಂದೆ ಮೃತಪಟ್ಟ ಮಾರ್ಸೆಲಿನ್ ಡ್ಯುಮೋಲಿನ್ ಮತ್ತು ಪತ್ನಿ ಫ್ರಾನ್ಸಿನ್ ಅವರ ಮೃತದೇಹ ಎಂಬುದು ದೃಢಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Israel- ಹೆಜ್ಬುಲ್ಲಾ ನಡುವೆ ಬಾಂಬ್ಗಳ ಸುರಿಮಳೆ! ; 100 ರಾಕೆಟ್ ಲಾಂಚರ್ ಧ್ವಂಸ
Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.