ರಷ್ಯಾ ಕಬಂಧಬಾಹು ವಿಸ್ತರಣೆ


Team Udayavani, Mar 4, 2022, 6:40 AM IST

ರಷ್ಯಾ ಕಬಂಧಬಾಹು ವಿಸ್ತರಣೆ

ಕೀವ್‌/ಮಾಸ್ಕೋ: ಉಕ್ರೇನ್‌ನ ಹಲವು ಭಾಗಗಳನ್ನು ರಷ್ಯಾ ಪಡೆಗಳು ಸುತ್ತುವರಿದಿದ್ದು, ಒಂದೊಂದೇ ನಗರಗಳನ್ನು ತಮ್ಮ ವಶಕ್ಕೆ ಪಡೆಯುತ್ತಿವೆ. 2014ರಲ್ಲಿ ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದ ರಷ್ಯಾ, ಈ ಯುದ್ಧದಲ್ಲಿ ಮೊದಲ ಬಲಿಪಶುವಾಗಿ ಖೆರ್ಸಾನ್‌ ನಗರವನ್ನು ವಶಪಡಿಸಿಕೊಂಡಿದ್ದು, ಉಕ್ರೇನ್‌ನ ಇನ್ನಿತರ ಪ್ರಾಂತ್ಯಗಳಿಗೂ ತನ್ನ ಕಂಬಂಧಬಾಹುಗಳನ್ನು ವಿಸ್ತರಿಸುತ್ತಿದೆ. ರಾತ್ರಿ-ಹಗಲೆನ್ನದೇ ಬಾಂಬ್‌ಗಳು, ಶೆಲ್‌, ರಾಕೆಟ್‌, ಕ್ಷಿಪಣಿಗಳು ನುಗ್ಗಿ ಬರುತ್ತಿರುವ ಕಾರಣ, ನಗರಗಳೆಲ್ಲ ಶ್ಮಶಾನವಾಗಿ ಬದಲಾಗುತ್ತಿವೆ.

ಯುದ್ಧ ಆರಂಭವಾಗಿ ಗುರುವಾರ 8 ದಿನ ಪೂರ್ಣಗೊಂಡಿದ್ದು, ಖೇರ್ಸಾನ್‌ ನಗರವು ರಷ್ಯಾದ ಸುಪರ್ದಿಗೆ ಬಂದಿದೆ. ಈ ಮೂಲಕ ಉಕ್ರೇನ್‌ನ ಮೊದಲ ಪ್ರಮುಖ ನಗರವು ರಷ್ಯಾ ವಶವಾದಂತಾಗಿದೆ. ಸುಮಾರು 3 ಲಕ್ಷ ಜನಸಂಖ್ಯೆಯಿರುವ ಖೆರ್ಸಾನ್‌ನಲ್ಲಿ ಪುತಿನ್‌ ಪಡೆಗಳ ಅಟ್ಟಹಾಸ ಆರಂಭವಾಗಿದೆ. ಕೌನ್ಸಿಲ್‌ ಸಭೆ ನಡೆಯುತ್ತಿದ್ದಾಗ ರಷ್ಯಾದ ಸಶಸ್ತ್ರ ಸೈನಿಕರು ಸಭೆಗೇ ನುಗ್ಗಿ, ಹೊಸ ನಿಯಮಗಳನ್ನು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖೆರ್ಸಾನ್‌ ಮೇಯರ್‌ ಇಗೋರ್‌ ಕೋಲಿಖೇವ್‌ ಅವರು, “ರಷ್ಯಾ ಸೇನೆಯ ಆಜ್ಞೆಯನ್ನು ಪಾಲಿಸಿ’ ಎಂದು ನಾಗರಿಕರಿಗೆ ಸೂಚಿಸಿದ್ದಾರೆ. ಜತೆಗೆ, ದಯವಿಟ್ಟು ಸಾರ್ವಜನಿಕರ ಮೇಲೆ ಗುಂಡು ಹಾರಿಸಬೇಡಿ ಎಂದು ರಷ್ಯಾಗೆ ಮನವಿ ಮಾಡಿದ್ದಾರೆ.

ಖೆರ್ಸಾನ್‌ ರಷ್ಯಾ ವಶವಾದ ಕಾರಣ, ಬಂದರು ನಗರಿ ಒಡೆಸ್ಸಾವು ಸುಲಭದಲ್ಲಿ ಅವರ ಪಾಲಾಗಲಿದೆ ಎನ್ನಲಾಗುತ್ತಿದೆ. ಕೀವ್‌ ಮತ್ತು ಖಾರ್ಕಿವ್‌ನಲ್ಲಿ ನಿರಂತರ ಕಾಳಗ ನಡೆಯುತ್ತಿದೆ.

ಸುಖೋಯ್‌ ಧ್ವಂಸ: ಗುರುವಾರ ಉಕ್ರೇನ್‌ನ ವೈಮಾನಿಕ ರಕ್ಷಣ ವ್ಯವ ಸ್ಥೆಯು ರಷ್ಯಾದ ಸುಖೋಯ್‌ ಎಸ್‌ಯು-30 ಯುದ್ಧ ವಿಮಾನವನ್ನು ಕೀವ್‌ನಲ್ಲಿ ಹೊಡೆದುರುಳಿಸಿದೆ. ಜತೆಗೆ, ರಷ್ಯಾದ ಮೇಜರ್‌ ಜನರಲ್‌ ಆ್ಯಂಡ್ರೂé ಸುಖೋವೆಸ್ಕಿ ಎಂಬವರನ್ನು ಹತ್ಯೆಗೈಯಲಾಗಿದೆ. ಇದೇ ವೇಳೆ, ಉಕ್ರೇನ್‌ನ ಪ್ರತಿದಾಳಿಯಲ್ಲಿ 9 ಸಾವಿರ ರಷ್ಯಾ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್‌ ಹೇಳಿದರೆ, ರಷ್ಯಾ ಮಾತ್ರ 500 ಸಾವು ಎಂದಿದೆ. 2 ಸಾವಿರಕ್ಕೂ ಅಧಿಕ ಉಕ್ರೇನ್‌ ನಾಗರಿಕರು ಯುದ್ಧಕ್ಕೆ ಬಲಿಯಾಗಿದ್ದಾರೆ.

ರಷ್ಯಾ ಆರ್ಥಿಕ ರೇಟಿಂಗ್‌ ಪಾತಾಳಕ್ಕೆ :

ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ರೇಟಿಂಗ್‌ ನೀಡುವ ಸಂಸ್ಥೆಗಳಾದ ಮೂಡೀಸ್‌ ಮತ್ತು ಫಿಚ್‌, ರಷ್ಯಾದ ಆರ್ಥಿಕ ರೇಟಿಂಗ್‌ ಅನ್ನು ಕೆಳದರ್ಜೆಗೆ (ಜಂಕ್‌ ದರ್ಜೆ) ಇಳಿಸಿವೆ. ಅಮೆರಿಕ ಸೇರಿದಂತೆ ಹಲವಾರು ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನ ಹಾಗೂ ಅದರ ಪರಿಣಾಮವಾಗಿ ರಷ್ಯಾದ ಆಮದು ವೆಚ್ಚ ಹೆಚ್ಚಾಗುವುದನ್ನು ಅಂದಾಜಿಸಿ ಈ ರೇಟಿಂಗ್‌ ನೀಡಲಾಗಿದೆ. ಮೂಡೀಸ್‌ ರಷ್ಯಾದ ದೀರ್ಘಾವಧಿಯ, ಅಭದ್ರತೆಯ ಸಾಲದ ರೇಟಿಂಗ್‌ ಅನ್ನು “ಬಿಎಎ 3′ ದರ್ಜೆಯಿಂದ (ಸಾಮಾನ್ಯ ದರ್ಜೆಯಿಂದ) “ಬಿ3′ ದರ್ಜೆಗೆ (ಯಾವ ದೇಶದಿಂದಲೂ ಸಾಲ ಸಿಗದಂಥ ಪರಿಸ್ಥಿತಿ) ಇಳಿಸಿದೆ. ಫಿಚ್‌ ಕೂಡ ಇದೇ ರೀತಿ ವಿಶ್ಲೇಷಿಸಿದೆ.

ಟ್ರಯಂಫ್ ಕೂಡ ಯುದ್ಧಕ್ಕೆ ಪ್ರವೇಶ? :

ಉಕ್ರೇನ್‌ ಮೇಲೆ ಯುದ್ಧ ಆರಂಭಿಸುವ ಮುನ್ನ ಸೇನಾ ಕವಾಯತು ನಡೆಸಿದ್ದ ರಷ್ಯಾ, ಈಗ ಪುನಃ ಮತ್ತೂಂದು ಸುತ್ತಿನ ಸೇನಾ ಕವಾಯತು ಆರಂಭಿಸಿದೆ. ರಷ್ಯಾದ ನೊವೊಸಿಬಿರ್ಸ್‌Rನಲ್ಲಿ ಸೇನಾ ಕವಾಯತು ಆರಂಭಗೊಂಡಿದ್ದು, ಅತ್ಯಾಧುನಿಕ ಎಸ್‌- 400 ಕ್ಷಿಪಣಿ ನಿಗ್ರಹ ವ್ಯವಸ್ಥೆಗಳು ಈ ಕವಾಯತಿನಲ್ಲಿ ಪಾಲ್ಗೊಂಡಿವೆ.  ರಷ್ಯಾದ ಸರ್ಬಿಯಾ ಪ್ರಾಂತ್ಯದಲ್ಲಿರುವ ನೊವೊಸಿಬಿರ್ಸ್‌R, ಉಕ್ರೇನ್‌ನಿಂದ ಅಂದಾಜು 4,000 ಕಿ.ಮೀ. ದೂರವಿದೆ. ಈ ಪ್ರಾಂತ್ಯದಲ್ಲಿ ನಡೆಸಲಾಗುತ್ತಿರುವ ಸೇನಾ ಕವಾಯತಿನ ಮೂಲಕ ರಷ್ಯಾ ಸರಕಾರ, ಉಕ್ರೇನ್‌ನ ಬೆಂಬಲಕ್ಕೆ ನಿಂತಿರುವ ಅಮೆರಿಕ, ನ್ಯಾಟೋ ಪಡೆಗಳು ಹಾಗೂ ಇತರ ಐರೋಪ್ಯ ರಾಷ್ಟ್ರಗಳ ಮುಂದೆ ತನ್ನ ಶಕ್ತಿ ಪ್ರದರ್ಶನ ಮಾಡಲಾರಂಭಿಸಿದೆ ಎಂದು ವಿಶ್ಲೇಷಿಸಲಾಗಿದೆ.

8 ದಿನ; 8 ನಗರಗಳು :

ಕೀವ್‌: ಬುಧವಾರ ತಡರಾತ್ರಿ ನಾಲ್ಕು  ದೊಡ್ಡ ರಾಕೆಟ್‌ಗಳು ಉಕ್ರೇನ್‌ ರಾಜಧಾನಿ ಕೀವ್‌ಗೆ ಅಪ್ಪಳಿಸಿದೆ. ಈ ಪೈಕಿ ಒಂದು ರಾಕೆಟ್‌ ನಾಗರಿಕರ ಸ್ಥಳಾಂತರಕ್ಕೆ ಬಳಸಲಾಗುತ್ತಿದ್ದ ರೈಲು ನಿಲ್ದಾಣದ ಮೇಲೆ ಬಂದು ಬಿದ್ದರೆ, ಉಳಿದವು ಟಿವಿ ಮತ್ತು ರೇಡಿಯೋ ಸ್ಟೇಶನ್‌ಗಳನ್ನು ಧ್ವಂಸಗೊಳಿಸಿವೆ.

ಖಾರ್ಕಿವ್‌: ಉಕ್ರೇನ್‌ನ 2ನೇ ಅತೀ ದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ನಿರಂತರ ಶೆಲ್‌ ದಾಳಿ ನಡೆದಿವೆ. ವಸತಿ ಕಟ್ಟಡಗಳು ನೆಲಕ್ಕುರುಳಿದ್ದು, ನಗರವಿಡೀ ಅವಶೇಷಗಳಿಂದ ತುಂಬಿಹೋಗಿದೆ.

ಇಝಿಯುಂ: ಖಾರ್ಕಿವ್‌ನಿಂದ ದಕ್ಷಿಣಕ್ಕೆ 70 ಮೈಲು ದೂರದಲ್ಲಿರುವ ಇಝಿಯಂ ನಗರದ ಮೇಲೂ ರಷ್ಯಾ ದಾಳಿ ನಡೆಸಿದೆ. ಬುಧವಾರ ರಾತ್ರಿಯಿಡೀ ಬಾಂಬ್‌ಗಳ ಸದ್ದು ಮೊಳಗಿದೆ.

ಚೆರ್ನಿಹಿವ್‌: ಯುದ್ಧ ಆರಂಭವಾದಾಗಿನಿಂದಲೂ ಈ ನಗರದಲ್ಲಿ ರಷ್ಯಾ ಮತ್ತು ಉಕ್ರೇನ್‌ ಪಡೆಗಳ ನಡುವೆ ಕಾಳಗ ನಡೆಯುತ್ತಲೇ ಇದೆ. ಸದ್ಯಕ್ಕೆ ಇದು ಉಕ್ರೇನ್‌ ಪಡೆಗಳ ಕೈಯ್ಯಲ್ಲೇ ಇದೆ. ಗುರುವಾರ ಇಲ್ಲಿನ ತೈಲ ಡಿಪೋ ಶೆಲ್‌ ದಾಳಿಯಿಂದ ಹೊತ್ತಿ ಉರಿದಿದೆ.

ಮರಿಯುಪೋಲ್‌: ಒಂದು ನಿಮಿಷವೂ ಬಿಡುವಿಲ್ಲದಂತೆ ನಿರಂತರವಾಗಿ ಶೆಲ್‌, ರಾಕೆಟ್‌ ದಾಳಿ ನಡೆಸಲಾಗುತ್ತಿದೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದವರಿಗೆ ಚಿಕಿತ್ಸೆ ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಮೇಯರ್‌ ಹೇಳಿದ್ದಾರೆ.

ಖೆರ್ಸಾನ್‌: ಸತತ 3-4 ದಿನಗಳಿಂದ ಇಲ್ಲಿ ಉಕ್ರೇನ್‌ ಮತ್ತು ರಷ್ಯಾ ನಡುವೆ ಭಾರೀ ಕಾಳಗ ನಡೆಯುತ್ತಿತ್ತು. ಗುರುವಾರ ಈ ನಗರವು ರಷ್ಯಾ ಸೇನೆಯ ವಶವಾಗಿದೆ. ಸ್ಥಳೀಯ ಕೌನ್ಸಿಲ್‌ ಸಭೆಗೂ ರಷ್ಯಾದ ಸಶಸ್ತ್ರ ಪಡೆಗಳ ಸೈನಿಕರು ಹಾಜರಾಗಿದ್ದಾರೆ.

ಝಪೋರಿಝಿಯಾ: ಯುರೋಪ್‌ನಲ್ಲಿ ಅತ್ಯಂತ ದೊಡ್ಡ ಪರಮಾಣು ವಿದ್ಯುತ್‌ ಸ್ಥಾವರ ಇಲ್ಲಿದೆ. ಈಗಾಗಲೇ ಈ ನಗರವನ್ನು ರಷ್ಯಾ ಪಡೆಗಳು ಸುತ್ತುವರಿದಿವೆ. ಸ್ಥಾವರದ ಹೊರಗೆ ನಾಗರಿಕರೆಲ್ಲ ಸೇರಿ ರಸ್ತೆ ಬ್ಲಾಕ್‌ ಮಾಡಿದ್ದಾರೆ. ಇವರ ಮೇಲೆ ರಷ್ಯಾ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಒಡೆಸ್ಸಾ: ಕಪ್ಪು ಸಮುದ್ರದ ಬಂದರು ನಗರಿ, ಉಕ್ರೇನ್‌ನ ಪ್ರಮುಖ ನೌಕಾ ನೆಲೆಯಿರುವ ನಗರ. ಕ್ರಿಮಿಯಾ ಮೂಲಕ 12ಕ್ಕೂ ಅಧಿಕ ರಷ್ಯಾ ಯುದ್ಧನೌಕೆಗಳು ಒಡೆಸ್ಸಾದತ್ತ ಬರುತ್ತಿವೆ. ನಾಗರಿಕರು ಹಳೆಯ ರೈಲ್ವೆ  ಸ್ಲಿàಪರ್‌ಗಳ ಮೂಲಕ ತಾತ್ಕಾಲಿಕ ಗುರಾಣಿಗಳನ್ನು ನಿರ್ಮಿಸಿಕೊಂಡಿದ್ದು, ಬೀಚ್‌ನುದ್ದಕ್ಕೂ ನೆಲಬಾಂಬ್‌ ಹುದುಗಿಸಿಟ್ಟಿದ್ದಾರೆ.

ಸಮರಾಂಗಣದಲ್ಲಿ :

  • ಕೀವ್‌ ಮತ್ತು ಖಾರ್ಕಿವ್‌ನಲ್ಲಿ ಬುಧವಾರ ರಾತ್ರಿ ಪೂರ್ತಿ ಮುಂದುವರಿದ ಶೆಲ್‌-ರಾಕೆಟ್‌ ದಾಳಿ
  • ಇಂಧನ ಮತ್ತು ಆಹಾರದ ಕೊರತೆಯಿಂದಾಗಿ ಅರ್ಧಕ್ಕೇ ನಿಂತ ಉತ್ತರ ಕೀವ್‌ನತ್ತ ಬರುತ್ತಿದ್ದ ರಷ್ಯಾದ ಸೇನಾವಾಹನಗಳು
  • ಉಕ್ರೇನ್‌ನಲ್ಲಿ ನಮ್ಮ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ಬಹಿರಂಗಪಡಿಸಿದ ರಷ್ಯಾ
  • ರಷ್ಯಾದ ಯುದ್ಧಾಪರಾಧಗಳಿಗೆ ಸಂಬಂಧಿಸಿದ ವಿಚಾರಣೆ ಶೀಘ್ರವೇ ಆರಂಭ ಎಂದ ಅಂತಾರಾಷ್ಟ್ರೀಯ ಕೋರ್ಟ್‌
  • ಬಾಲ್ಟಿಕ್‌ ಸಮುದ್ರದಲ್ಲಿ ರಷ್ಯಾದ 4 ಯುದ್ಧ ವಿಮಾನಗಳು ತನ್ನ ವಾಯುಗಡಿಯನ್ನು ಪ್ರವೇಶಿಸಿವೆ ಎಂದ ಸ್ವೀಡನ್‌
  • ಬನ್ನಿ, ನಿಮ್ಮ ಮಕ್ಕಳ ಮೃತದೇಹಗಳನ್ನು ಕೊಂಡೊಯ್ಯಿರಿ ಎಂದು ರಷ್ಯಾ ಸೈನಿಕರ ಅಮ್ಮಂದಿರಿಗೆ ಉಕ್ರೇನ್‌ ಆಹ್ವಾನ
  • ದಕ್ಷಿಣ ಉಕ್ರೇನ್‌ನ ಖೆರ್ಸಾನ್‌ ನಗರವನ್ನು ಸಂಪೂರ್ಣ ವಶಕ್ಕೆ ಪಡೆದ ಪುತಿನ್‌ ಪಡೆ
  • ಇರ್ಪಿನ್‌ ನಗರದಲ್ಲಿ ರಷ್ಯಾದ ಸುಖೋಯ್‌ ಎಸ್‌ಯು-30 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಉಕ್ರೇನ್‌ ಸೇನೆ
  • ರಷ್ಯಾ ಸೈನಿಕರು ನಡೆಸಿದ ಶೆಲ್‌ ದಾಳಿಯಿಂದಾಗಿ ಹೊತ್ತಿ ಉರಿದ ಚೆರ್ನಿಹಿವ್‌ ನಗರದ ತೈಲ ಡಿಪೋ
  • ಉಕ್ರೇನ್‌ನಲ್ಲಿ ರಷ್ಯಾದ ಮೇಜರ್‌ ಜನರಲ್‌ ಆ್ಯಂಡ್ರ್ಯೂ ಸುಖೋವೆಟ್‌ಸ್ಕಿ ಅವರ ಹತ್ಯೆ.

ಟಾಪ್ ನ್ಯೂಸ್

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

1-sadsad

Italy; ಕೈ ತುಂಡಾದ ಭಾರತೀಯ ಕಾರ್ಮಿಕನನ್ನು ರಸ್ತೆಗೆ ಎಸೆದ ಮಾಲಕ ಅರೆಸ್ಟ್

Indian based businessman arrested in 8300 crore scam

8300 ಕೋಟಿ ಹಗರಣದಲ್ಲಿ ಭಾರತ ಮೂಲದ ಉದ್ಯಮಿ ಬಂಧನ

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

11-honnavara

Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.