![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 1, 2021, 10:30 PM IST
ಮಾಸ್ಕೋ: ರಷ್ಯಾ ನಿರ್ಮಿತ “ಸ್ಫುಟ್ನಿಕ್ ವಿ’ ಲಸಿಕೆಯನ್ನು ಪಡೆಯಲು ಅಲ್ಲಿನ ಜನರೇ ನಿರಾಕರಿಸುತ್ತಿರುವ ಸೋಜಿಗದ ವಿಚಾರ ತಡವಾಗಿ ಬಹಿರಂಗವಾಗಿದೆ.
ರಷ್ಯಾ ಸರ್ಕಾರವೇ ಖುದ್ದಾಗಿ ಈ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉತ್ಪಾದನೆಯಾಗಿರುವ ಎಲ್ಲಾ ಲಸಿಕೆಗಳಿಗಿಂತ ಇದು ಶ್ರೇಷ್ಠ ಎಂದು ಅಲ್ಲಿನ ಸರ್ಕಾರ, ತನ್ನ ಲಸಿಕಾ ಅಭಿಯಾನದಡಿ ವ್ಯಾಪಕವಾಗಿ ಪ್ರಚಾರ ಮಾಡಿದೆ. ಆದರೂ, ಈ ಲಸಿಕೆಯು ಇನ್ನೂ ಪ್ರಯೋಗ ಹಂತದ ಲಸಿಕೆಯಾಗಿದೆ ಎಂಬ ವದಂತಿಗಳು ಚಾಲ್ತಿಯಲ್ಲಿರುವುದರಿಂದ ಅಲ್ಲಿನ ಬಹುಪಾಲು ಜನರು, ಈ ಲಸಿಕೆಯ ವಿರೋಧಿಗಳಾಗಿದ್ದಾರೆ. ಹಾಗಾಗಿ, ಲಸಿಕೆ ಹಾಕಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ವಣ್ಣಿಯಾರ್ ಸಮುದಾಯದ ಶೇ. 10.5 ಮೀಸಲಾತಿ ರದ್ದು
ಮೂರನೇ ಒಂದು ಭಾಗಕ್ಕೆ ಮಾತ್ರ ಲಸಿಕೆ
ಕೊರೊನಾದಿಂದ ಅತಿ ಹೆಚ್ಚು ಬಾಧೆಗೊಳಗಾಗಿರುವ ರಾಷ್ಟ್ರಗಳಲ್ಲಿ ರಷ್ಯಾವೂ ಒಂದು. ಕೊರೊನಾ ಉತ್ತುಂಗದಲ್ಲಿದ್ದಾಗ ಅಲ್ಲಿ ದಿನಂಪ್ರತಿ ಕನಿಷ್ಟ 1,000 ಮಂದಿ ಸಾವಿಗೀಡಾಗುತ್ತಿದ್ದರು.
ಹಾಗಾಗಿ, ರಷ್ಯಾ ಸರ್ಕಾರ ವಿಶ್ವದಲ್ಲೇ ಮೊದಲ ಬಾರಿಗೆ ಸ್ಫುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಿರುವುದಾಗಿ ಘೋಷಿಸಿತ್ತಲ್ಲದೆ, 2020ರ ಡಿಸೆಂಬರ್ನಲ್ಲಿಯೇ ಸ್ಫುಟ್ನಿಕ್ ವಿ ಲಸಿಕಾ ಅಭಿಯಾನ ಶುರು ಮಾಡಿತ್ತು. ಆದರೂ, ಈವರೆಗೆ ಅಲ್ಲಿನ ಜನಸಂಖ್ಯೆಯ ಮೂರನೇ ಒಂದು ಭಾಗ ಮಾತ್ರ ಲಸಿಕೆ ಪಡೆದುಕೊಂಡಿದೆ. ಬಹುತೇಕ ಜನರು ಲಸಿಕೆ ಬೇಡ ಎನ್ನುತ್ತಿದ್ದಾರೆ ಎಂದು “ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಇದರ ನಡುವೆಯೇ, ರಷ್ಯಾದಾದ್ಯಂತ ಕೊರೊನಾ ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿದ್ದು, ದಿನಕ್ಕೆ 40 ಸಾವಿರದಷ್ಟು ಪ್ರಕರ ಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.