Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!


Team Udayavani, Oct 3, 2024, 8:51 AM IST

Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!

ಟೆಲ್‌ಅವೀವ್‌: ಇರಾನ್‌-ಇಸ್ರೇಲ್‌ ಯುದ್ಧವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇರಾನ್‌ ದಾಳಿ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲದ ಬೆಲೆ ಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಧ್ಯಪ್ರಾಚ್ಯದ ಸಂಘರ್ಷವು ತೈಲ ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು ಎಂಬ ಭೀತಿ ಆವರಿಸಿದೆ. ಪರಿಣಾಮವೆಂಬಂತೆ, ಬುಧವಾರ ಕಚ್ಚಾ ತೈಲದ ಬೆಲೆ ಶೇ.5ರಷ್ಟು ಹೆಚ್ಚಳವಾಗಿದೆ. ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ ಕಚ್ಚಾ ತೈಲ ಬೆಲೆ ಶೇ.5 ಏರಿಕೆಯಾಗಿದ್ದು, ಬ್ಯಾರೆಲ್‌ಗೆ 75 ಡಾಲರ್‌(6,297 ರೂ.)ಗೆ ತಲುಪಿದೆ. ಬ್ರೆಂಟ್‌ ಕಚ್ಚಾ ತೈಲದ ಬೆಲೆ 156ರೂ. ಏರಿಕೆಯಾಗಿ, ಬ್ಯಾರೆಲ್‌ಗೆ 6,177ರೂ. ಆಗಿದೆ.

ಇನ್ನು, ಯುದ್ಧದ ಕಾರ್ಮೋಡವು ಜಾಗತಿಕ ಷೇರು ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. ಅಮೆರಿಕದ ನಾಸಾxಕ್‌ ಶೇ.1 ಕುಸಿತ ಅನುಭವಿಸಿದೆ. ಟೋಕಿಯೊ, ಸಿಡ್ನಿ ಷೇರು ಮಾರುಕಟ್ಟೆಗಳೂ ಪತನಗೊಂಡಿವೆ. ರಕ್ಷಣ ಕ್ಷೇತ್ರದ ಷೇರುಗಳು ಮಾತ್ರ ಚೇತರಿಸಿಕೊಂಡಿವೆ. ನಾರ್ತ್‌ರಾಪ್‌ ಗ್ರಮ್ಮನ್‌ ಶೇ.3, ಲಾಕ್‌ಹೀಡ್‌ ಮಾರ್ಟಿನ್‌ ಶೇ.3.6 ಸೇರಿದಂತೆ ರಕ್ಷಣ ವಲಯದ ಕಂಪೆನಿಗಳ ಷೇರು ಮೌಲ್ಯ ಹೆಚ್ಚಳವಾಗಿವೆ.

ಬಾಂಬೆ ಷೇರು ಪೇಟೆಯಲ್ಲಿ ಇಂದು ಏನಾಗಲಿದೆ?

ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸಿದ್ದರಿಂದ ಬಾಂಬೆ ಷೇರುಪೇಟೆಯಲ್ಲಿ ವಹಿವಾಟು ಏನಾಗಲಿದೆ ಎಂಬ ಆತಂಕ ಹೂಡಿಕೆದಾರರಲ್ಲಿದೆ.  ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಬುಧವಾರ ಬಾಂಬೆ ಷೇರು ಮಾರುಕಟ್ಟೆ ವಹಿವಾಟಿಗೆ ರಜೆ ಇತ್ತು. ಹೀಗಾಗಿ ಯುದ್ಧವು ಭಾರತದ ಷೇರುಪೇಟೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಗುರುವಾರದ ವಹಿವಾಟಿನ ವೇಳೆ ತಿಳಿಯಲಿದೆ.

ಎಚ್ಚರಿಕೆಯಿಂದಿರಿ: ನಾಗರಿಕರಿಗೆ ಭಾರತ ಸೂಚನೆ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮನೆ ಮಾಡಿರುವಂತೆಯೇ ಎಚ್ಚರಿಕೆಯಿಂದಿರುವಂತೆ ಭಾರತೀಯ ನಾಗರಿಕರಿಗೆ ಕೇಂದ್ರ ಸರಕಾರ ಸೂಚಿಸಿದೆ. ಇರಾನ್‌ಗೆ ಅನಗತ್ಯವಾಗಿ ಪ್ರಯಾಣಿಸಬೇಡಿ. ಟೆಹರಾ ನ್‌ನಲ್ಲಿರುವ ಭಾರತೀಯರು ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ವಿದೇಶಾಂಗ ಇಲಾಖೆ ಸೂಚಿಸಿದೆ. ಇದೇ ವೇಳೆ, ಇಸ್ರೇಲ್‌ನಲ್ಲಿರುವ ಭಾರತೀಯರೂ ಸರಕಾರದ ಸುರಕ್ಷ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಅನಗತ್ಯವಾಗಿ ಹೊರಗೆ ಹೋಗದಂತೆ ತಿಳಿಸಿದೆ.

ಎಲ್ಲರೂ ಶಾಂತಿ ಕಾಪಾಡಿ: ಭಾರತ ಕರೆ

ಇರಾನ್‌-ಇಸ್ರೇಲ್‌ ಯುದ್ಧದ ಕಾರ್ಮೋಡದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಭಾರತ ಸರಕಾರ, “ಪಶ್ಚಿಮ ಏಷ್ಯಾದ ಪರಿಸ್ಥಿತಿ ಕಳವಳಕಾರಿಯಾಗಿದೆ. ಈ ಸಂಘರ್ಷವು ಮತ್ತಷ್ಟು ವಿಸ್ತರಣೆಯಾಗದಂತೆ ನೋಡಿಕೊಳ್ಳಿ. ಎಲ್ಲ ಕಡೆಯವರೂ ಶಾಂತಿ ಕಾಪಾಡಿ. ಮಾತುಕತೆ, ರಾಜತಾಂತ್ರಿಕತೆ ಮೂಲಕ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಿ’ ಎಂದಿದೆ.

ಟಾಪ್ ನ್ಯೂಸ್

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

3-chitradurga

Chitradurga: ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು; ಓರ್ವ ಸಾವು

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

1-reee

India-US;ಆ್ಯಂಟೋನಿ ಬ್ಲಿಂಕೆನ್ ಜತೆ ಜೈಶಂಕರ್ ಮಹತ್ವದ ಮಾತುಕತೆ

ಮಾಜಿ ಅಧ್ಯಕ್ಷ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಸಂಭ್ರಮ

ಮಾಜಿ ಅಧ್ಯಕ್ಷ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಸಂಭ್ರಮ

joe-bidden

Israel vs Iran; ಯುದ್ದೋನ್ಮಾದ ತೀವ್ರ ಹೆಚ್ಚಳ: ಇರಾನ್‌ಗೆ ಅಮೆರಿಕ ಎಚ್ಚರಿಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4-sirawara

Sirawara ಬಂದ್ ಗೆ ಕರೆ: ಪಟ್ಟಣ ಸ್ತಬ್ಧ

ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

4

Bengaluru: ಬರ್ತ್‌ಡೇ ಪಾರ್ಟಿ ವೇಳೆ ಗಾಳಿಯಲ್ಲಿ 6 ಸುತ್ತು ಗುಂಡು; ಉದ್ಯಮಿ ಬಂಧನ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

Bengaluru: ಮ್ಯಾನೇಜರ್‌ಗೆ ಇರಿಯಲು ಬಂದು ಕಂಡಕ್ಟರ್‌ಗೆ ಇರಿದ

Bengaluru: ಮ್ಯಾನೇಜರ್‌ಗೆ ಇರಿಯಲು ಬಂದು ಕಂಡಕ್ಟರ್‌ಗೆ ಇರಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.