![Traffic Jam: ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…](https://www.udayavani.com/wp-content/uploads/2024/07/mara-415x247.jpg)
ನೆದರ್ಲೆಂಡ್ಸ್ನಲ್ಲಿ 4000 ವರ್ಷ ಹಿಂದಿನ ಆರಾಧನಾ ಸ್ಥಾನ ಪತ್ತೆ!
ಟಯೆಲ್ ನಗರದಲ್ಲಿ ಉತ್ಖನನ ವೇಳೆ ಪತ್ತೆ
Team Udayavani, Jun 23, 2023, 8:00 AM IST
![ನೆದರ್ಲೆಂಡ್ಸ್ನಲ್ಲಿ 4000 ವರ್ಷ ಹಿಂದಿನ ಆರಾಧನಾ ಸ್ಥಾನ ಪತ್ತೆ!](https://www.udayavani.com/wp-content/uploads/2023/06/nedarland-620x413.jpg)
ಆ್ಯಮ್ಸ್ಟರ್ಡಾಮ್: ಗತಕಾಲ ಮತ್ತು ಭವಿಷ್ಯತ್ಕಾಲಗಳು ಯಾವಾಗಲೂ ಮನುಷ್ಯನಿಗೆ ಅತ್ಯಂತ ಕುತೂಹಲದ ಸಂಗತಿಗಳು. ಪುರಾತತ್ವ ಇಲಾಖೆ ಯಾವಾಗಲೂ ಹಳತನ್ನು ಹುಡುಕುತ್ತಲೇ ಇರುತ್ತದೆ. ನೆದರ್ಲೆಂಡ್ಸ್ನ ಕೇಂದ್ರಭಾಗದಲ್ಲಿ ಅಲ್ಲಿನ ಪುರಾತತ್ವ ಇಲಾಖೆ 4000 ವರ್ಷಗಳಷ್ಟು ಹಿಂದಿನ ಆರಾಧನಾ ಸ್ಥಾನವೊಂದನ್ನು ಪತ್ತೆಹಚ್ಚಿದೆ!
ಟಯೆಲ್ ಎಂಬ ನಗರದಲ್ಲಿ (ರಾಟಡ್ಯಾìಮ್ನಿಂದ 70 ಕಿ.ಮೀ. ದೂರ) ನೆಲವನ್ನು ಉತ್ಖನನ ಮಾಡಿದಾಗ ಅಪೂರ್ವ ಸ್ಥಾನ ಪತ್ತೆಯಾಗಿದೆ. ಸೂರ್ಯನ ಚಲನೆಗೆ ಅನುಸಾರವಾಗಿ ಇಲ್ಲಿನ ಎಲ್ಲ ವಿಧಿಗಳು ನಡೆಯುತ್ತಿದ್ದುದ್ದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಕಂದಕಗಳು, ದಿಬ್ಬಗಳಿರುವ ಈ ಜಾಗದಲ್ಲಿ ಪ್ರಾಣಿಗಳ ಅಸ್ಥಿಪಂಜರ, ಮನುಷ್ಯನ ತಲೆಬುರುಡೆಗಳು, ಕಂಚಿನಿಂದ ಮಾಡಿದ ಈಟಿಯೂ ಲಭಿಸಿದೆ.
ಇಂಗ್ಲೆಂಡ್ನಲ್ಲಿ ಹಿಂದೆ ಪತ್ತೆಯಾಗಿದ್ದ ಅತ್ಯಂತ ಪ್ರಾಚೀನ ಶಿಲಾವೃತ್ತಗಳ ಮಾದರಿಯಲ್ಲೇ ಇಲ್ಲೂ ಸೂರ್ಯನ ಚಲನೆಗೆ ತಕ್ಕಂತೆ ಸಮಯ ನಿರ್ಧರಿಸುವ ವ್ಯವಸ್ಥೆ ಇದ್ದಿದ್ದಕ್ಕೆ ಸಾಕ್ಷಿ ಲಭಿಸಿದೆ. ಅದೇ ಮಾದರಿ ನೆದರ್ಲೆಂಡ್ಸ್ನಲ್ಲೂ ಗೋಚರಿಸಿದೆ. ಇನ್ನೂ ವಿಶೇಷವೆಂದರೆ ಇಲ್ಲೊಂದು ಹೆಣ್ಣಿನ ಸಮಾಧಿ ಪತ್ತೆಯಾಗಿದೆ. ಆಕೆ ಗಾಜಿನ ಮಣಿಗಳನ್ನು ಧರಿಸಿದ್ದಳು. ಅದು ಅಲ್ಲಿಂದ 5000 ಕಿ.ಮೀ. ದೂರವಿರುವ ಮೆಸಪಟೋಮಿಯದಲ್ಲಿ (ಈಗಿನ ಇರಾಕ್) ಸಿದ್ಧಗೊಂಡಿದ್ದು!
ಟಾಪ್ ನ್ಯೂಸ್
![Traffic Jam: ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…](https://www.udayavani.com/wp-content/uploads/2024/07/mara-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Traffic Jam: ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…](https://www.udayavani.com/wp-content/uploads/2024/07/mara-150x89.jpg)
Traffic Jam: ದೇವರಕೊಲ್ಲಿ ಬಳಿ ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…
![Sandalwood: ಖುಷಿಯ ಜೊತೆಗೊಂದು ಬೇಸರ!; ಗೆಲುವಿನ ಹಾದಿಯಲ್ಲಿ ಪ್ರೇಕ್ಷಕರ ಕೊರತೆ](https://www.udayavani.com/wp-content/uploads/2024/07/17-1-150x90.jpg)
Sandalwood: ಖುಷಿಯ ಜೊತೆಗೊಂದು ಬೇಸರ!; ಗೆಲುವಿನ ಹಾದಿಯಲ್ಲಿ ಪ್ರೇಕ್ಷಕರ ಕೊರತೆ
![Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?](https://www.udayavani.com/wp-content/uploads/2024/07/vijayapura-3-150x90.jpg)
Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?
![Jharkhand: ಚಂಪೈ ಸೊರೇನ್ ರಾಜೀನಾಮೆ…ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಸಿಎಂ?](https://www.udayavani.com/wp-content/uploads/2024/07/Hemanth-150x86.jpg)
Jharkhand: ಚಂಪೈ ಸೊರೇನ್ ರಾಜೀನಾಮೆ…ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಸಿಎಂ?
![ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್ ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ?](https://www.udayavani.com/wp-content/uploads/2024/07/16-1-150x90.jpg)
ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್ ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.