![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 25, 2022, 6:50 AM IST
ಬ್ರೆಮೆನ್: ಜರ್ಮನಿಯ ಬ್ರೆಮೆನ್ ನಗರದಲ್ಲಿರುವ “ಮ್ಯಾಕ್ಸ್ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್ ಮರೈನ್ ಮೈಕ್ರೋಬಯಾಲಜಿ ಸಂಸ್ಥೆ’ಯ ವಿಜ್ಞಾನಿಗಳು, ಜಗತ್ತಿನ ಸಮುದ್ರಗಳ ತಳದಲ್ಲಿರುವ ಹಸಿರು ಹುಲ್ಲುಗಾವಲುಗಳ ಅಡಿಯಲ್ಲಿ ಅಪಾರವಾದ ಸಕ್ಕರೆಯ ನಿಕ್ಷೇಪವಿದೆ ಎಂಬ ಅಚ್ಚರಿಯ ವಿಚಾರವನ್ನು ಹೊರಹಾಕಿದ್ದಾರೆ.
ಅಸಲಿಗೆ, ವಿಜ್ಞಾನಿಗಳು ಪತ್ತೆ ಹಚ್ಚಲು ಹೋಗಿದ್ದೇ ಒಂದು ಅವರಿಗೆ ಅಲ್ಲಿ ಸಿಕ್ಕಿದ್ದೇ ಮತ್ತೊಂದು! ಸಮುದ್ರದಾಳದ ಹಲ್ಲುಗಾವಲುಗಳು ಅತಿ ಶ್ರೇಷ್ಠ ಇಂಗಾಲದ ಹೀರುವಿಕೆಯ ಘಟಕಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಒಂದು ಚದುರ ಕಿ.ಮೀ. ವಿಸ್ತೀರ್ಣದ ಹುಲ್ಲುಗಾವಲು, ನೆಲದ ಮೇಲಿನ ಒಂದು ಕಾಡು ಹೀರಿಕೊಳ್ಳುವ ಇಂಗಾಲಕ್ಕಿಂತ 35 ಪಟ್ಟು ಹೆಚ್ಚು ಹೀರಿಕೊಳ್ಳುತ್ತದೆ.
ಹಾಗಾಗಿ, ಈ ಸಾಗರದಡಿ ಹುಲ್ಲುಗಾವಲುಗಳ ಇಂಗಾಲದ ಹೀರುವಿಕೆಯ ಶಕ್ತಿಯನ್ನು ಮತ್ತಷ್ಟು ಅಧ್ಯಯನ ಮಾಡುವ ಸಲುವಾಗಿ ಈ ವಿಜ್ಞಾನಿಗಳು ಇಟಲಿ ಬಳಿಯ ಎಲಾº ದ್ವೀಪದ ಬಳಿಯ ಸಾಗರದಡಿ ಧುಮುಕಿದ್ದರು. ಅಲ್ಲಿ ಅವರು ಸಂಶೋಧನೆಯಲ್ಲಿ ನಿರತರಾಗಿದ್ದಾಗ, ಹುಲ್ಲುಗಾವಲಿನ ಅಡಿಯಲ್ಲಿ ಸಕ್ಕರೆಯ ದೈತ್ಯ ನಿಕ್ಷೇಪಗಳೇ ಅಡಗಿರುವುದನ್ನು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ:ಸಿಂಧುದುರ್ಗ: ಪ್ರವಾಸಿಗರ ದೋಣಿ ಮುಳುಗಿ ಇಬ್ಬರ ಸಾವು; ಮತ್ತಿಬ್ಬರ ಸ್ಥಿತಿ ಗಂಭೀರ
ಅದಾದ ನಂತರ ವಿಶ್ವದ ನಾನಾ ಭಾಗಗಳಲ್ಲಿರುವ ಸಮುದ್ರದಡಿಯ ಹುಲ್ಲುಗಾವಲುಗಳ ಕೆಳಗೂ ಸಂಶೋಧನೆ ನಡೆಸಲಾಗಿದ್ದು ಇಡೀ ವಿಶ್ವದ ಸಮುದ್ರದಾಳದಲ್ಲಿ ಒಟ್ಟಾರೆ 0.6ರಿಂದ 1.3 ಮಿಲಿಯನ್ ಟನ್ನಷ್ಟು ಸಕ್ಕರೆಯ ನಿಕ್ಷೇಪವಿರುವುದು ಪತ್ತೆಯಾಗಿದೆ.
ಇದು, 3,200 ಕೋಟಿ ಕೋಕಾಕೋಲ ಬಾಟಲಿಗಳಲ್ಲಿರುವ ಸಕ್ಕರೆಗೆ ಸರಿಸಮವಾದದ್ದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.