Bangladesh ದಂಗೆಗೆ ಕಾರಣವಾದ ಮೀಸಲಿಗೆ ಸುಪ್ರೀಂ ಕೋರ್ಟ್ ಕತ್ತರಿ
ಪ್ರತಿಭಟನಕಾರರಿಗೆ ಮೊದಲ ಜಯ, ಸೈನಿಕ ಕೋಟಾ ಶೇ.5ಕ್ಕೆ ಇಳಿಕೆ
Team Udayavani, Jul 22, 2024, 6:50 AM IST
ಢಾಕಾ: ಬಾಂಗ್ಲಾದೇಶದಲ್ಲಿ ಸರಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವಿರೋಧಿಸಿ ಬೀದಿಗಿಳಿದಿದ್ದ ಪ್ರತಿಭಟನ ಕಾರರಿಗೆ ಸರಕಾರದ ವಿರುದ್ಧ ಮೊದಲ ಜಯ ಸಿಕ್ಕಿದೆ. ಸರಕಾರ ಜಾರಿಗೊಳಿಸಿದ್ದ ಮೀಸಲಾತಿಗೆ ಅಲ್ಲಿನ ಸುಪ್ರೀಂ ಕೋರ್ಟ್ ಕತ್ತರಿ ಹಾಕಿ, ಮೀಸಲು ಪ್ರಮಾಣವನ್ನು ಮರು ನಿಗದಿಪಡಿಸಿದೆ.
1971ರ ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ನೀಡಲಾಗಿದ್ದ ಶೇ.30 ಮೀಸಲನ್ನು ಸುಪ್ರೀಂ ಕೋರ್ಟ್ ಶೇ.5ಕ್ಕೆ ಇಳಿಕೆ ಮಾಡಿದೆ. ಜತೆಗೆ ಜನಾಂಗೀಯ ಅಲ್ಪಸಂಖ್ಯಾಕರು, ಅಂಗವಿಕಲರು ಮತ್ತು ತೃತೀಯಲಿಂಗಿಗಳಿಗೆ ಶೇ.2ರಷ್ಟು ಮೀಸಲು ನಿಗದಿ ಪಡಿಸಿದೆ. ಉಳಿದಂತೆ ಶೆ.93 ಉದ್ಯೋಗವನ್ನು ಅರ್ಹತೆ(ಮೆರಿಟ್) ಆಧಾರದಲ್ಲಿ ನೀಡಬೇಕೆಂದು ತೀರ್ಪು ನೀಡಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರಕಾರವು ಜೂನ್ನಲ್ಲಿ ಸರಕಾರಿ ಉದ್ಯೋಗ ಗಳಿಗೆ ಸಂಬಂಧಿಸಿದ ನೂತನ ಮೀಸಲು ಕೋಟಾ ಜಾರಿಗೊಳಿಸಿತ್ತು. ಅದರಂತೆ ಸರಕಾರಿ ಉದ್ಯೋಗಗಳಲ್ಲಿ ಶೇ.30ರಷ್ಟನ್ನು 1971ರ ಹೋರಾಟಗಾರರ ಕುಟುಂಬಕ್ಕೆ, ಶೇ.10 ಮಹಿಳೆಯರಿಗೆ, ಶೇ.10 ಹಿಂದುಳಿದ ಜಿಲ್ಲೆಯ ವರಿಗೆ, ಶೇ.5 ಜನಾಂಗೀಯ ಅಲ್ಪಸಂಖ್ಯಾಕರಿಗೆ ಮತ್ತು ಶೇ.1 ಅಂಗವಿಕಲರಿಗೆ ನೀಡಬೇಕೆಂದು ನಿರ್ಧರಿಸಲಾ ಗಿತ್ತು. ಇದನ್ನು ವಿರೋಧಿಸಿ ಭಾರೀ ದಂಗೆ ಆರಂಭವಾಗಿತ್ತು. ಮೀಸಲು ರದ್ದು ಕೋರಿ ಅರ್ಜಿ ದಾಖಲಾಗಿದ್ದವು. ಮೃತರ ಸಂಖ್ಯೆ 151ಕ್ಕೆ ಏರಿಕೆ: ಬಾಂಗ್ಲಾದ ಹಲವೆಡೆ ರವಿವಾರವೂ ಪ್ರತಿಭಟನೆಗಳು ವರದಿಯಾಗಿವೆ. ಈವರೆಗೆ ಮೃತಪಟ್ಟವರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Terrorist Organization: ಹಮಾಸ್ ಉಗ್ರ ನಾಯಕ ಯಾಹ್ಯಾ ಸಿನ್ವರ್ ಹತ್ಯೆ
National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್ ಸ್ಮರಣೆಗೆ ಸರಕಾರ ಕೊಕ್
Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ
Argentina: ಹೋಟೆಲ್ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು
Oxford University: ಆಕ್ಸ್ಫರ್ಡ್ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್ನಲ್ಲಿ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.